Veerakesari 07:52
ಕ್ಯಾಪ್ಟನ್ ಸೌರಬ್ ಕಾಲಿಯಾ : ಕಾರ್ಗಿಲ್ ಯುದ್ಧದ ಪ್ರಾರಂಭವಾಗೋ ಮೊದಲೇ ಭಾರತ ಮಾತೆಯ ಪಾದಗಳಿಗೆ ತನ್ನ ಪ್ರಾಣವನ್ನು ಅರ್ಪಿಸಿದ ವೀರ ಸೇನಾನಿ ಕ್ಯಾಪ್ಟನ್ ಸೌರಬ್ ಕಾಲಿಯಾ.
ಭಾರತ ಎದುರಿಸಿದ ಯುದ್ದಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಕಾದಾಡಿದ ಕಾರ್ಗಿಲ್ ಯುದ್ದವೇ ದೊಡ್ಡ ಯುದ್ದವೆನ್ನಬಹುದು. ನಮ್ಮ ಸೈನಿಕರ ಕೆಚ್ಚೆದೆಯ ಹೋರಾಟ, ಸಾಹಸಗಳಿಂದ ಭಾರತ ಈ ಯುದ್ದದಲ್ಲಿ ಜಯಭೇರಿ ಬಾರಿಸಿತು. ನಿಯಮಗಳನ್ನು ಗಾಳಿಗೆ ತೂರಿ 1999ರಲ್ಲಿ ಪಾಪಿ ಪಾಕಿಸ್ತಾನ ನಮ್ಮ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಭಾರತೀಯ ನೆಲೆಗಳಿಗೆ ತನ್ನ ಸೈನ್ಯ ಮತ್ತು ಕಾಶ್ಮೀರಿ ಉಗ್ರರನ್ನು ನುಸುಳಿಸಿತು. ಇದೇ ಯುದ್ದದ ಕಾರಣ. ಕಾಶ್ಮೀರಿ ಉಗ್ರಗಾಮಿಗಳು ಮತ್ತು ಪಾಕ್ ಸೈನಿಕರು ನಮ್ಮ ಹಲವು ಭಾರತೀಯ ನೆಲೆಗಳನ್ನು ಆಕ್ರಮಿಸಿಕೊಂಡರು. ಈ ನೆಲೆಗಳನ್ನು ಮರುವಶ ಪಡೆದು ಕೊಳ್ಳಲು ಕಾರ್ಗಿಲ್ ಜಿಲ್ಲೆ ಮತ್ತು ಗಡಿ ಪ್ರದೇಶಗಳಲ್ಲಿ 1999ರ ಮೇ ಮತ್ತು ಜುಲೈ ನಡುವೆ ನಡೆದ ರೋಚಕ ಯುದ್ದವೇ ಕಾರ್ಗಿಲ್ ಯುದ್ದ.
ಕ್ಯಾಪ್ಟನ್ ಸೌರಬ್ ಕಾಲಿಯಾ  ಹಾಗೂ ಅವರ ಪ್ರೀತಿಯ ತಾಯಿ
ಪಾಕಿಸ್ತಾನದೊಂದಿಗೆ ಬಾಂಧವ್ಯ ವೃದ್ಧಿಸಿಕೊಳ್ಳಲು 1998ರಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪಾಕಿಸ್ತಾನದ ನವಾಜ಼್ ಷರೀಫ್ ಎದುರು ಕುಳಿತು ಕೈಕುಲುಕಿದರು. ನಾವು ಪಾಕಿಸ್ತಾನಕ್ಕೆ ರೈಲು ಬಿಟ್ಟದ್ದಾಯಿತು. ಬಸ್ಸೂ ಓಡಿಸಿದ್ದಾಯಿತು, ಕೈಕುಲುಕಿದ್ದೂ ಆಯಿತು. ಆದರೆ ಪಾಕಿಸ್ತಾನ ಮಾತ್ರ ಬದಲಾಗಲಿಲ್ಲ. ತನ್ನ ನರಿಬುದ್ಧಿಯನ್ನು ಪ್ರದರ್ಶಿಸುವುದಕ್ಕೆ ಪಾಕಿಸ್ತಾನ ತಡ ಮಾಡಲೇ ಇಲ್ಲ.
ಜೋಜಿ ಲಾ ಪಾಸ್, ಅತ್ಯಂತ ಕಡಿದಾದ, ಅಷ್ಟೇ ಕಠಿಣವಾದ ಕೊರಕಲುಗಳು ದಾರಿಯುದ್ದಕ್ಕೂ. ಸ್ವಲ್ಪ ಎಡವಿದರೂ ಪ್ರಪಾತವೇ ಗತಿ. ಇನ್ನು ಮಂಜು ಸುರಿಯುವಾಗಲಂತೂ ಆ ದಾರಿಯಲ್ಲಿ ವಾಹನಗಳಿರಲಿ, ನಡೆದುಕೊಂಡು ಹೋಗುವುದೂ ಕಷ್ಟ. ಮೇ ತಿಂಗಳ ಕೊನೆಯವರೆಗೆ ಮಂಜು ಬೆಟ್ಟ ಪೂರ್ತಿ ಆವರಿಸಿಕೊಂಡಿರುತ್ತದೆ. ಹೀಗಾಗಿ ಆ ವೇಳೆಯಲ್ಲಿ ಸೈನಿಕರೂ ಇರುವುದಿಲ್ಲ. ಅವರಿಗೆ ಬೇಕಾದ ವಸ್ತುಗಳನ್ನು ತಲುಪಿಸುವುದಕ್ಕೂ ಆಗೋದಿಲ್ಲ. ಈ ವಿಚಾರವನ್ನು ಚೆನ್ನಾಗಿ ಅರಿತ ಸೇನಾ ನಾಯಕ ಪರ್ವೇಜ್ ಮುಷರ್ರಫ್ ಏಪ್ರಿಲ್ ಆರಂಭದಲ್ಲೇ ತನ್ನ ಸೈನಿಕರಿಗೆ ಆದೇಶ ನೀಡತೊಡಗಿದ.
ಕಾರ್ಗಿಲ್ ನಲ್ಲಿ ಅತಿ ಹಿಮ ಬೀಳುತ್ತಿದ್ದಂತೆ ಭಾರತೀಯ ಸೇನೆ ಹಿಂದೆ ಬರುತ್ತದೆ. ನಂತರ ಹಿಮ ಕರಗುತ್ತಲೇ ಮತ್ತೆ ಅಲ್ಲಿಗೆ ಹೋಗುತ್ತದೆ. ಇದು ಹಿಂದೆಯಿಂದ ನಡೆದು ಬಂದಿರುವಂಥ ಪದ್ದತಿಯಾಗಿತ್ತು.
ಮಂಜು ಕರಗುವುದನ್ನೆ ಕಾಯುತ್ತಿದ್ದ ಪಾಕಿಗಳು ಏಪ್ರಿಲ್ ಕೊನೆಕೊನೆಯಲ್ಲಿ ಕಾರ್ಗಿಲ್‌ನ, ಪೂರ್ವ ಬಟಾಲಿಕ್‌ನ ಮತ್ತು ದ್ರಾಸ್‌ನ ಉತ್ತರ ದಿಕ್ಕಿನ ಬೆಟ್ಟಗಳನ್ನು ಏರತೊಡಗಿದರು. ಗಟ್ಟಿಮುಟ್ಟಾದ ಬಂಕರ್‌ಗಳನ್ನು ಕಟ್ಟಿಕೊಂಡರು. ಮೇ ಆರಂಭದ ವೇಳೆಗೆ ಅವರ ತಯಾರಿ ಸಂಪೂರ್ಣಗೊಂಡಿತ್ತು. ಮೇ ಕೊನೆಯವರೆಗೂ ಮಂಜು ಕರಗದು, ಜೋಜಿ ಲಾ ತೆರೆದುಕೊಳ್ಳದು ಅಂದುಕೊಂಡಿದ್ದ ಪಾಕಿಗಳ ಲೆಕ್ಕಾಚಾರ ತಲೆಕೆಳಗಾಯಿತು. ಆ ವರ್ಷ ಮೇ ಆರಂಭದಲ್ಲಿಯೇ ಮಂಜು ಕರಗಿ ಜೋಜಿ ಲಾ ತೆರೆದುಕೊಂಡಿತ್ತು.
ಪಾಕ್ ಸೇನೆ ಬೆಟ್ಟದ ಮೇಲಿರುವ ಸುದ್ದಿ ದನಗಾಹಿಗಳ ಮೂಲಕ ಭಾರತೀಯ ಸೇನೆಗೆ ವಿಷಯ ತಲುಪಿತ್ತು. ವರದಿ ತರಲೆಂದು ಸೌರಭ್ ಕಾಲಿಯಾ ನೇತೃತ್ವದಲ್ಲಿ ಐವರನ್ನು ಗುಡ್ಡ ಹತ್ತಿಸಿತು. 
ಕಾರ್ಗಿಲ್ ನ ಆ ಪರ್ವತಗಳಲ್ಲಿ ಸುಮಾರು 20-25 ನುಸುಳುಕೋರರು ಬಜರಂಗ್ ಪೋಸ್ ನಲ್ಲಿ ಬಂದು ಕೂತಿದ್ದಾರೆಂಬ ಮಾಹಿತಿ ಇತ್ತು. ಈ ಮಾಹಿತಿಯ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು ಹಾಗು ನುಸುಳುಕೋರರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಮೇ 15 ರಂದು ಕ್ಯಾಪ್ಟನ್ ಸೌರಬ್ ಕಾಲಿಯಾ ಮತ್ತು 5 ಜನ ಸಂಗಡಿರೊಂದಿಗೆ ಕಸ್ಕರ್ ಭಾಗದಲ್ಲಿದ್ದ ಬಜರಂಗ್ ಪೋಸ್ ಕಡೆಗೆ ಹೊರಟ.
ದಟ್ಟವಾದ ಕಾಡು, ಮೈಕೊರೆಯುವ ಛಳಿ, ಅಘಾದವಾದ ಹಿಮಪಾತವನ್ನು ಲೆಕ್ಕಿಸದೇ ಸೌರಬ್ ಮುನ್ನಡೆದ. ಬಜರಂಗ್ ಪೋಸ್ಟ್ ಹತ್ತಿರ ಹೋಗುತ್ತಿದ್ದಂತೆ ಸೌರಬ್ ಮತ್ತು ಅವನ ತಂಡದ ಮೇಲೆ ನೂರಾರು ಜನ ಪಾಪಿ ಪಾಕಿಸ್ತಾನಿಯರು ಗುಂಡಿನ ಮಳೆ ಸುರಿಸಲಿ ಶುರು ಮಾಡಿದರು. ಸೌರಬ್ ಮತ್ತು ಅವನ ಸಂಗಡಿಗರು ಕೆಚ್ಚೆದೆಇಂದ ಹೋರಾಡುತ್ತಿದ್ದರು. ಪಾಕಿಯರ ಗುಂಡಿನ ಮಳೆ ನಿಲ್ಲಲೇ ಇಲ್ಲ. ತಮ್ಮ ಬಳಿ ಇದ್ದ ಮದ್ದು-ಗುಂಡುಗಳು ಖಾಲಿಯಾಗುತ್ತಿರುವುದನ್ನು ಅರಿತ ಸೌರಬ್ ಅಲ್ಲಿಂದ ತಪ್ಪಿಸಿಕೊಂಡು ವಾಪಸ್ ಬರಲು ಪ್ರಯತ್ನಿಸಿದ.
ಆದರೆ ದುರದೃಷ್ಟವಷಾತ್ ಪಾಕಿಯರು ಈ 5 ಜನರನ್ನು ಸುತ್ತುವರೆದು  ಬಂಧಿಸಿದರು. ಇಲ್ಲಿಂದ ಮುಂದಿನ ಕಥೆ ದಾರುಣವಾದದ್ದು. ಈ ಐದು ಜನರನ್ನು ಪಾಕಿಯರು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಕರೆದೊಯ್ದು ಸುಮಾರು 25 ದಿನಗಳ ಕಾಲ ಅವರಿಗೆ ಚಿತ್ರಹಿಂಸೆ ಕೊಟ್ಟು ಕೊನೆಯಲ್ಲಿ ಗುಂಡಿಟ್ಟು ಕೊಂದರು. ಜೂನ್ 9 ರಂದು ಪಾಪಿಸ್ತಾನ ಸೌರಬ್ನ ದೇಹವನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿತು.
ದೆಹಲಿಯಲ್ಲಿ ಅವನ ದೇಹದ ಮರಣೋತ್ತರ ಪರೀಕ್ಷೆಯನ್ನು ಮಾಡಿದ ವೈದ್ಯರು ದಂಗುಬಡಿದರು. ಆ ಪರಿಯ ಚಿತ್ರಹಿಂಸೆಯ್ನು ಅವರು ಎಂದೂ ನೋಡಿರಲಿಲ್ಲ. ದೇಹವನ್ನು ಸಿಗರೇಟ್ ಇಟ್ಟು ಸುಟ್ಟಿದ್ದರು. ಕಬ್ಬಿಣದ ಕಂಬಿಗಳನ್ನು ಕಾಯಿಸಿ ಕಣ್ಣುಗುಡ್ಡೆಗಳನ್ನು ಅದರಲ್ಲಿ ಸುಟ್ಟು ಕಿತ್ತು ಹಾಕಿದ್ದರು. ಬೆರಳುಗಳನ್ನು ತುಂಡು ತುಂಡಾಗಿ ಕತ್ತರಿಸಿದ್ದರು. ಚಾಕುವಿನಿಂದ ಚರ್ಮ ಸುಲಿದಿದ್ದರು. ಪ್ರಾಣಿಗಳನ್ನು ಬಿಟ್ಟು ಕಚ್ಚಿಸಿದರು.ಮರ್ಮಾಂಗವನ್ನು ಕತ್ತರಿಸಿ ಬಿಸಾಡಿದರು. ಈ ಎಲ್ಲ ಚಿತ್ರಹಿಂಸೆಯನ್ನು ಕೊಟ್ಟು ಕೊನೆಗೆ ಗೊಂಡಿಟ್ಟುಕೊಂದರು.
ಕಾರ್ಗಿಲ್ ಉಳಿಸಿಕೊಳ್ಳುವುದಕ್ಕಾಗಿ ಅಂದು 527ಸೈನಿಕರು ತಮ್ಮ ಜೀವವನ್ನೇ ಬಲಿ ಕೊಟ್ಟರು. 1363ಸೈನಿಕರು ಊನಗೊಂಡರು, ಅಂಗಾಂಗ ಕಳೆದುಕೊಂಡರು. ಮೇಜರ್ ಪದ್ಮಪಾಣಿ ಆಚಾರ್ಯ ತೀರಿಕೊಂಡಾಗ ಅವರ ಪತ್ನಿಯ ಹೊಟ್ಟೆಯಲ್ಲಿ ಚೊಚ್ಚಲ ಮಗು ಬೆಳೆಯುತ್ತಿತ್ತು, ಕ್ಯಾಪ್ಟನ್ ವಿಕ್ರಂ ಬಾತ್ರಾ ಮಡಿದಾಗ ಅವರ ಭಾವಿ ಪತ್ನಿ ವಿವಾಹಕ್ಕೆ ತಯಾರಿ ನಡೆಸುತ್ತಿದ್ದಳು, ಲೆಫ್ಟಿನೆಂಟ್ ಹನೀಫುದ್ದೀನ್ ಹುತಾತ್ಮನಾಗುವುದರೊಂದಿಗೆ ಆತನ ವಿಧವೆ ತಾಯಿ ಇದ್ದ ಒಬ್ಬ ಮಗನನ್ನೂ ಕಳೆದುಕೊಂಡಳು,ಕ್ಯಾಪ್ಟನ್ ಕೆ. ಕ್ಲಿಫೋರ್ಡ್ ನೊಂಗ್ರುಮ್ ಮಡಿದಾಗ ಒಂದಿಡೀ ಮೇಘಾಲಯ ರಾಜ್ಯವೇ ಕಣ್ಣೀರ ಕಡಲಾಗಿತ್ತು.ದೇಶಕ್ಕಾಗಿ ತಮ್ಮೆಲ್ಲ ಸುಖ ಸಂತೋಷಗಳನ್ನು ಬದಿಗಿಟ್ಟು ಸೇವೆಗೈಯುವ ವೀರರನ್ನು, ದೇಶಕ್ಕಾಗಿ ಮಡಿದ ಹುತಾತ್ಮರನ್ನು ಸ್ಮರಿಸುವುದೇ ನಾವು ಅವರಿಗೆ ಸಲ್ಲಿಸಬಲ್ಲ ಕೃತಜ್ಞತೆ.ದೇಶ ಕಾಯುವ ವೀರ ಯೋಧರ ಕುರಿತು ಒಮ್ಮೆಯಾದರೂ ಚಿಂತಿಸುವ ಪ್ರಯತ್ನ ಮಾಡೋಣ. ಈ ದೇಶ ನಮ್ಮದು, ಅದನ್ನು ಪ್ರೀತಿಸೋಣ. 
ಜುಲೈ 26-ಕಾರ್ಗಿಲ್ ವಿಜಯ ದಿನ. ಇಡೀ ಭಾರತವನ್ನೇ ಭಾವನಾತ್ಮಕವಾಗಿ ಒಂದು ಮಾಡಿದ ಆ ಕದನ.
#ವೀರಜವಾನ್_ಅಮರ್_ರಹೇ
#ಜೈ_ಜವಾನ್
-By Mahesh Hiremath
Source : Blog Link
Contact : Facebook Gmail

Veerakesari 06:10
ಕೇರಳ : PFI ಭಯೋತ್ಪಾದಕರ ಉಪಟಳ ದೇಶಾದ್ಯಂತ ದಿನೇ ದಿನೇ ಹೆಚ್ಚಾಗುತ್ತಿದೆ. ದೇಶವಿರೋಧಿ ಉಗ್ರವಾದಿ ಚಟುವಟಿಕೆ, ಹಿಂದೂ ಸಂಘಟನೆ ಕಾರ್ಯಕರ್ತರ ಹತ್ಯೆ, ಹಿಂದೂ ಯುವತಿಯರ ಅಪಹರಣ, ಲವ್ ಜಿಹಾದ್ ಮುಂತಾದ ಕೃತ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ PFI (KFD) ದಕ್ಷಿಣ ಭಾರತದಲ್ಲಿ ಅತೀ ದೊಡ್ಡ ಭಯೋತ್ಪಾದಕ ಸಂಘಟನೆಯಾಗಿ ಬೆಳೆಯುತ್ತಿದೆ.

ಇಷ್ಟೇ ಅಲ್ಲದೆ ಕೇರಳ, ತಮಿಳುನಾಡು, ಕರ್ನಾಟಕದಲ್ಲಿ ಹಿಂದೂ ಕ್ರಿಶ್ಚಿಯನ್ ಜೈನ ಯುವತಿಯರನ್ನು ಲವ್ ಜಿಹಾದಿ ಬಲೆಗೆ ಬೀಳಿಸಿದ ಯುವಕರಿಗೆ ಬಲೆಗೆ ಬಿದ್ದ ಯುವತಿಯರ ಜಾತಿಗನುಗುಣವಾಗಿ ಹಣ ನೀಡಲು ದರವನ್ನೂ ನಿಗದಿ ಮಾಡಿದೆ. ಇದರ ಬಗ್ಗೆ ಈಗಾಗಲೇ ಹಲವು ಸುದ್ದಿವಾಹಿನಿಗಳು ಸುದ್ದಿ ಪ್ರಸಾರ ಮಾಡಿದೆ. ಅಲ್ಲದೆ ಇದೇ ಭಯೋತ್ಪಾದಕರು ಹಿಂದೂ,ಕ್ರಿಶ್ಚಿಯನ್ ಮಹಿಳೆಯರನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂ ಗೆ ಮತಾಂತರ ಮಾಡಿ ಐಸಿಸ್ ಉಗ್ರರಿಗೆ ಮಾರಾಟ ಮಾಡಿದ ಬಗ್ಗೆ ವರದಿಗಳಿವೆ.
ಇದೀಗ ಕಳೆದ ಎರಡು ಮೂರು ದಿನಗಳ ಹಿಂದೆ ಕೇರಳದ ಗಲ್ಲಿ ಗಲ್ಲಿಗಳಲ್ಲಿ ಪೋಸ್ಟರ್ ಒಂದನ್ನು ಇದೇ ಮತಾಂಧ ಸಂಘಟನೆ ಕಾರ್ಯಕರ್ತರು ಅಂಟಿಸಿದ್ದಾರೆ. ಶೃತಿ ಎಂಬ ಹಿಂದೂ ಯುವತಿಯನ್ನು ಅಪಹರಿಸಿ, ಇಸ್ಲಾಂಗೆ ಮತಾಂತರ ಮಾಡಿ ಐಸಿಸ್ ಗೆ ಮಾರಾಟ ಮಾಡಲು ಯತ್ನಿಸಿದ PFI ಉಗ್ರರ ಯತ್ನ ಕೇರಳದ ಹಿಂದೂ ಸಂಘಟನೆ ಹಾಗೂ ಪೋಲೀಸರ ಕಾರ್ಯಾಚರಣೆಯಿಂದ ವಿಫಲವಾಗಿದೆ.
ಯಾರಿದು ಶೃತಿ ??
ಕೇರಳದ ಕಣ್ಣೂರು ನಿವಾಸಿಯಾದ ಶೃತಿ ಎಂಬ ಯುವತಿಯನ್ನು ಅಪಹರಿಸುವಲ್ಲಿ ಸಫಲರಾಗಿದ್ದ PFI ಉಗ್ರರು ಆಕೆಯನ್ನು ಮತಾಂತರ ಗೊಳಿಸಿ ISIS ಗೆ ಮಾರಲು ಎಲ್ಲಾ ತಯಾರಿ ನಡೆಸಿದ್ದರು. ಆದರೆ ಶೃತಿಯ ಹೆತ್ತವರು ತೊಗಾಡಿಯಾ ನೇತೃತ್ವದ ಹಿಂದೂ ಹೆಲ್ಪ್ ಲೈನ್ ಹಾಗೂ ಕೇರಳ ಪೋಲೀಸರಿಗೆ ಶೃತಿ ಅಪಹರಣದ ವಿಷಯ ತಿಳಿಸಿದರು.ತಕ್ಷಣ ಕಾರ್ಯ ಪ್ರವೃತ್ತರಾದ ಹಿಂದೂ ಹೆಲ್ಪ್ ಲೈನ್ ಕಾರ್ಯಕರ್ತರು ಹಾಗೂ ಕೇರಳ ಪೋಲೀಸರು PFI ಭಯೋತ್ಪಾದಕರ ಕಪಿಮುಷ್ಟಿಯಲ್ಲಿದ್ದ ಶೃತಿಯನ್ನು ರಕ್ಷಿಸಿ ತರುವಲ್ಲಿ ಸಫಲರಾಗಿದ್ದರು.

ಶೃತಿಯನ್ನು ಅಪಹರಿಸುವ ಬಗ್ಗೆ ಎಲ್ಲೆಡೆ ಪೋಸ್ಟರ್.!!
ತಮ್ಮ ಯತ್ನ ವಿಫಲವಾಗಿದ್ದೇ ತಡ ಮುಖಭಂಗಕ್ಕೊಳಗಾದ PFI ಭಯೋತ್ಪಾದಕರು ಕೇರಳದ ಕಣ್ಣೂರಿನ ಗಲ್ಲಿಗಲ್ಲಿಗಳಲ್ಲಿ ಪೋಸ್ಟರ್ ಅಂಟಿಸಿ ಕೇರಳ ಪೋಲೀಸರಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ. ಏನಿದೆ ಪೋಸ್ಟರ್ ನಲ್ಲಿ.
ಓ ಸಂಘಿಗಳಿಗೆ ತಲೆಬಾಗುವ ಪೋಲೀಸರೆ.
ನಾವು ಶೃತಿಯನ್ನು ಅಪಹರಿಸಿಯೇ ತೀರುತ್ತೇವೆ.
ನಾವಾಕೆಯನ್ನು ಸಿರಿಯಾ ಯೆಮನ್ ಗೆ ಕೊಂಡು ಹೋಗಿ ISIS ಉಗ್ರರಿಗೆ ದಾನವಾಗಿ ನೀಡುತ್ತೇವೆ.
ನಿಮ್ಮಿಂದ ಏನು ಸಾಧ್ಯವೋ ಅದನ್ನು ಮಾಡಿ
ನಿಮ್ಮಿಂದ ನಮ್ಮನ್ನು ತಡೆಯಲು ಸಾಧ್ಯವೇ, ನೋಡೋಣ.
- Popular Front Of India
ಇಂಗ್ಲಿಷ್ ನಲ್ಲಿ -

“DEAR SPINELESS POLICE,
WHICH BOWS DOWN TO SANGHI FORCES,
WE HAVE DECIDED TO TAKE SHRUTI.
WE WILL TAKE HER TO SYRIA OR YEMEN
AND GIFT HER TO ISIS.
DO WHAT YOU CAN,
LET US SEE IF YOU CAN STOP US!”
-POPULAR FRONT OF INDIA
ISIS ರಕ್ತ ಪಿಶಾಚಿ ಇಸ್ಲಾಮಿಕ್ ಉಗ್ರರ ಜೊತೆ PFI ಉಗ್ರರಿಗೆ ಇರುವ ಅಕ್ರಮ ಸಂಬಂಧದ ಬಗ್ಗೆ ಹೀಗೆ ರಾಜಾರೋಷವಾಗಿ ಹೇಳಿಕೆ ಕೊಡುತ್ತಿದ್ದರು, ನಮ್ಮ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಈ ಭಯೋತ್ಪಾದಕ ಸಂಘಟನೆ ನಿಶೇಧಿಸದೆ ಕೈಕಟ್ಟಿ ಕುಳಿತಿದೆ. ಮುಂದೆ ಯಾವುದಾದರೂ ಮುಖ್ಯಮಂತ್ರಿಯೋ, ಪ್ರಧಾನ ಮಂತ್ರಿಯೋ ಅಥವಾ ಸಂಸದನ ಮಗಳ ಅಪಹರಣ ಮಾಡಿ ISIS ಗೆ ಮಾರಿದಾಗ ಎಚ್ಚರವಾಗಿ ಬಹುದೋ ಏನೋ.

ದಯವಿಟ್ಟು ಶೇರ್ ಮಾಡಿ, ನಮ್ಮ ಅಕ್ಕ ತಂಗಿಯಂದಿರನ್ನು ಈ ಭಯೋತ್ಪಾದಕ ಹಂದಿಗಳಿಂದ ರಕ್ಷಣೆ ಮಾಡೋಣ.
loading...

Veerakesari 22:26
ನೌಕಾಪಡೆಯ ಅತ್ಯುನ್ನತ ಶ್ರೇಣಿಯ ಮಾರ್ಕೋಸ್ ಸೈನಿಕರಿಂದ ನದಿಗಳಲ್ಲೂ ಗಸ್ತು
ನವದೆಹಲಿ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮಿತಿ ಮೀರಿರುವ ಭಯೋತ್ಪಾದನಾ ಚಟುವಟಿಕೆ ಮಟ್ಟಹಾಕಲು ಕಠಿಣ ನೀತಿ ಅನುಸರಿಸುತ್ತಿರುವ ಕೇಂದ್ರ ಸರ್ಕಾರ, ಉಗ್ರ ನಿಗ್ರಹ ಕಾರ್ಯಕ್ಕೆ ಮತ್ತಷ್ಟು ಬಲ ನೀಡುವ  ಉದ್ದೇಶದಿಂದ ನೌಕಾಪಡೆಯ ಅತ್ಯುನ್ನತ ಶ್ರೇಣಿ ಮಾರ್ಕೋಸ್ ಕಮಾಂಡೊಗಳನ್ನು (ಮರೀನ್ ಕಮಾಂಡೋಸ್-ಮಾರ್ಕೋಸ್) ನಿಯೋಜಿಸಿದೆ.
ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ನದಿಗಳ ಗುಂಟ ನಡೆಯುತ್ತಿರುವ ಉಗ್ರರ ಚಟುವಟಿಕೆಗಳನ್ನು ನಿರ್ಮೂಲನೆ ಮಾಡಲು ಲೆಫ್ಟಿನೆಂಟ್ ಕಮಾಂಡರ್ ನೇತೃತ್ವದಲ್ಲಿ ಮೂವತ್ತು ಮಾರ್ಕೋಸ್ ಪಡೆಗಳನ್ನು ನಿಯೋಜನೆ ಮಾಡಲಾಗಿದ್ದು,  ಝೇಲಂ ಸಹಿತ ಕಾಶ್ಮೀರದ ಹಲವು ನದಿಗಳಲ್ಲಿ ಗಸ್ತು ತಿರುಗಿ, ಉಗ್ರರನ್ನು ಸದೆಬಡಿಯಲು ಈ ಕಮಾಂಡೊ ಪಡೆ ಸಮರ್ಥವಾಗಿದೆ. ನೀರೊಳಗೆ ಈಜಿ ಕಾರ್ಯಾಚರಣೆ ನಡೆಸಬಲ್ಲ ಸಾಮರ್ಥ್ಯವನ್ನು ಈ ಮಾರ್ಕೋಸ್ ಪಡೆ  ಹೊಂದಿದ್ದು, ಇದರಿಂದ ಭಯೋತ್ಪಾದಕರು ಭಾರತಕ್ಕೆ ನದಿಗಳ ಮೂಲಕ ಒಳನುಸುಳಲು ಸಾಧ್ಯವಾಗುವುದಿಲ್ಲ.
ನದಿಗಳ ಸುತ್ತ ಪೊದೆಗಳನ್ನೊಳಗೊಂಡ ಸಣ್ಣ ಅರಣ್ಯವಿದ್ದು, ಇಲ್ಲಿ ಉಗ್ರರು ಶಸ್ತ್ರಾಸ್ತ್ರ ಸಮೇತ ತಲೆಮರೆಸಿಕೊಳ್ಳುವ ಸಾಧ್ಯತೆ ಇರುವುದರಿಂದ ರಾಷ್ಟ್ರೀಯ ರೈಫಲ್ ಪಡೆಯೊಂದಿಗೆ ಮಾರ್ಕೋಸ್ ಪಡೆ ಕಾರ್ಯಾಚರಣೆ ನಡೆಸುತ್ತಿದೆ.
ಸಮುದ್ರ ಮಾರ್ಗ ಅನುಸರಿಸುವ ಉಗ್ರರು :
ಭೂ ಮಾರ್ಗವಾಗಿ ಬಂದರೆ ಭದ್ರತಾ ಪಡೆಗಳಿಗೆ ಸುಲಭವಾಗಿ ಸಿಕ್ಕಿಬೀಳಬಹುದು ಎಂಬ ಆತಂಕದಿಂದ ಉಗ್ರರು ನದಿ, ಸಮುದ್ರ ಮೂಲಕ ಭಾರತ ಪ್ರವೇಶಿಸಿ ದಾಳಿ ನಡೆಸಲು ಯತ್ನಿಸಿದ್ದಾರೆ. ಈ ಹಿಂದೆ 2008ರ ಮುಂಬೈ ದಾಳಿ  ವೇಳೆಯಲ್ಲೂ ಉಗ್ರ ಅಜ್ಮಲ್ ಕಸಬ್ ಸಹಿತ 10 ಉಗ್ರರು ಸಣ್ಣ ಬೋಟ್ ಮೂಲಕ ಸಮುದ್ರ ಮಾರ್ಗವಾಗಿ ಮುಂಬೈ ತಲುಪಿ ದಾಳಿ ನಡೆಸಿದ್ದರು. 2008ರ ಸೆಪ್ಟೆಂಬರ್​ ನಲ್ಲಿ ಉಗ್ರರು ಸಮುದ್ರ ಮಾರ್ಗದ ಮೂಲಕ ಬಂದು  ಭಾರತದಲ್ಲಿ ದಾಳಿ ನಡೆಸುವ ಸಂಚು ವಿಫಲವಾಗಿತ್ತು ಎಂದು ಜಾಗತಿಕ ಉಗ್ರ ಡೇವಿಡ್ ಹೆಡ್ಲಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ. ಇತ್ತೀಚೆಗೆ ಕಾಶ್ಮೀರದಲ್ಲಿ ಹಲವು ಉಗ್ರ ದಾಳಿಗಳು ನಡೆದಿದ್ದು, ಬಹುತೇಕ ಉಗ್ರರು ಪಾಕಿಸ್ತಾನದಿಂದ ನದಿ  ಮೂಲಕ ಕಾಶ್ಮೀರ ಪ್ರವೇಶಿಸಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ಕೆಲ ತಿಂಗಳ ಹಿಂದೆ ಗುಜರಾತ್​ ನ ಕಡಲ ತೀರದಲ್ಲಿ ಪಾಕಿಸ್ತಾನದ ಬೋಟ್ ಒಂದು ಪತ್ತೆಯಾಗಿತ್ತು. ಕರಾವಳಿ ರಕ್ಷಣಾ ಪಡೆಗಳು ಇವರನ್ನು ಬಂಧಿಸಲು ಮುಂದಾದಾಗ  ಬೋಟ್​ ನಲ್ಲಿದ್ದ ಶಂಕಿತ ಉಗ್ರರು ತಮ್ಮನ್ನೇ ಸ್ಪೋಟಿಸಿಕೊಂಡಿದ್ದರು.
250 ಚದರ ಕಿ.ಮೀ ವಿಸ್ತೀರ್ಣದ ವೂಲ್ಲರ್ ನದಿ ಸುತ್ತಲಿನ ಪ್ರದೇಶವನ್ನು ಅಡಗುತಾಣವಾಗಿಸಿಕೊಂಡಿದ್ದ ಉಗ್ರರನ್ನು ಸದೆಬಡಿಯಲು 1995ರಲ್ಲಿ ಮಾರ್ಕೋಸ್​ ಪಡೆಗಳನ್ನು ನಿಯೋಜಿಸಲಾಗಿತ್ತು. ವೂಲ್ಲರ್​ನಿಂದ ಶ್ರೀನಗರಕ್ಕೆ  ಕೇವಲ 100 ಕಿ.ಮೀ. ಅಂತರ ಇರುವುದರಿಂದ ಇಲ್ಲಿ ಅವರ ಕಾರ್ಯಚಟುವಟಿಕೆ ಭದ್ರತಾ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಯಾವುದೇ ರೀತಿಯ ಅಪಾಯಕಾರಿ  ಸನ್ನಿವೇಶಗಳಲ್ಲಿ ಶತ್ರುಗಳ ವಿರುದ್ಧ ಹೋರಾಡಲು ಇವರಿಗೆ ಕಠಿಣ ತರಬೇತಿಯನ್ನು ನೀಡಲಾಗಿರುತ್ತದೆ. ಚಾಕು, ಬಿಲ್ಲು, ಆಧುನಿಕ ರೈಫಲ್, ಬಂದೂಕು, ಗನ್ ಸಹಿತ ಎಲ್ಲ ಶಸ್ತ್ರಾಸ್ತ್ರಗಳ ತರಬೇತಿ ನೀಡಲಾಗುತ್ತದೆ. ಮಾರ್ಕೋಸ್​ ನಲ್ಲಿ  ಅತ್ಯುತ್ತಮ ಈಜುಪಟುಗಳಾಗಿದ್ದು (ಡೈವರ್), ನೀರೊಳಗೆ ಹಲವು ಕಿ.ಮೀ. ಈಜ ಬಲ್ಲರು. ಇದರಿಂದ ಸಮುದ್ರ ಮಾರ್ಗದ ಮೂಲಕ ಉಗ್ರ ಚಟುವಟಿಕೆ ನಡೆಸಲು ಭಯೋತ್ಪಾದಕರಿಗೆ ಕಷ್ಟವಾಗಲಿದೆ.
Source - Kannada Prabha
loading...

Veerakesari 17:55
ವಾಷಿಂಗ್ಟನ್‌: ಭಯೋತ್ಪಾದಕರಿಗೆ 'ಸುರಕ್ಷಿತ ನೆಲೆ'ಗಳನ್ನು ಒದಗಿಸುವ ದೇಶಗಳ ಪಟ್ಟಿಗೆ ಪಾಕಿಸ್ತಾನ ಸೇರ್ಪಡೆಯಾಗಿದೆ.
ಲಷ್ಕರೆ ತಯ್ಬಾ (ಎಲ್‌ಇಟಿ) ಮತ್ತು ಜೈಷೆ ಮೊಹಮ್ಮದ್‌ (ಜೆಇಎಂ) ನಂತಹ ಉಗ್ರ ಸಂಘಟನೆಗಳು ಪಾಕಿಸ್ತಾನದಲ್ಲಿ 2016ರಿಂದೀಚೆಗೆ ಬಹಿರಂಗವಾಗಿಯೇ ಕಾರ್ಯಾಚರಿಸುತ್ತಿದ್ದು, ಭಯೋತ್ಪಾದಕರ ನೇಮಕ, ತರಬೇತಿ ಹಾಗೂ ವಿಧ್ವಂಸಕ ಕೃತ್ಯಗಳಿಗೆ ನಿಧಿ ಸಂಗ್ರಹಣೆಯಂತಹ ಚಟುವಟಿಕೆಗಳಲ್ಲಿ ತೊಡಗಿವೆ.
'ಭಯೋತ್ಪಾದನೆ ಕುರಿತ ದೇಶಗಳ ವಾರ್ಷಿಕ ವರದಿ'ಯಲ್ಲಿ ವಿದೇಶಾಂಗ ಇಲಾಖೆ ಈ ವಿಷಯವನ್ನು ದೃಢೀಕರಿಸಿದ್ದು, ಪಾಕಿಸ್ತಾನದೊಳಗೆ ಭಯೋತ್ಪಾದಕ ಕೃತ್ಯಗಳನ್ನು ನಡೆಸಿದ 'ತೆಹ್ರೀಕ್‌ ಎ ತಾಲಿಬಾನ್ ಪಾಕಿಸ್ತಾನ್‌' ನಂತಹ ಸಂಘಟನೆಗಳ ವಿರುದ್ಧ ಪಾಕ್ ಮಿಲಿಟರಿ ಹಾಗೂ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿವೆ ಎಂದು ತಿಳಿಸಿದೆ.
'ಆದರೆ ಅಫ್ಘಾನ್ ತಾಲಿಬಾನ್ ಅಥವಾ ಹಕ್ಕಾನಿ ನೆಟ್‌ವರ್ಕ್‌ನಂತಹ ಅನ್ಯ ದೇಶಗಳಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಉಗ್ರ ಸಂಘಟನೆಗಳ ವಿರುದ್ಧ ಪಾಕ್‌ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ ಅವುಗಳನ್ನು ಪೋಷಿಸುತ್ತಿದೆ. ಅಫ್ಘಾನಿಸ್ತಾನದಲ್ಲಿ ಅಮೆರಿಕದ ಹಿತಾಸಕ್ತಿಗಳ ವಿರುದ್ಧ ಕಾರ್ಯಾಚರಿಸುವ ಉಗ್ರರ ನಿಗ್ರಹಕ್ಕೆ ಪಾಕ್‌ ನಿರ್ಲಕ್ಷ್ಯ ವಹಿಸಿದೆ' ಎಂದು ವಿದೇಶಾಂಗ ಇಲಾಖೆ ವರದಿ ತಿಳಿಸಿದೆ.
ಭಾರತ ಕೂಡ ಮಾವೋವಾದಿ ಉಗ್ರರು ಮತ್ತು ಪಾಕ್‌ ಮೂಲದ ಉಗ್ರರಿಂದ ಪದೇ ಪದೇ ದಾಳಿಗೆ ಗುರಿಯಾಗುತ್ತಿದೆ ಎಂದು ವರದಿ ಹೇಳಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕ್ ಪ್ರಾಯೋಜಿತ ಗಡಿಯಾಚೆಗಿನ ಭಯೋತ್ಪಾದನೆ ಕುರಿತ ಭಾರತದ ಆರೋಪ ನಿಜವಾಗಿದೆ ಎಂದು ಅಮೆರಿಕ ಹೇಳಿದೆ.
'ಜನವರಿಯಲ್ಲಿ ಭಾರತದ ಪಂಜಾಬ್‌ನ ಪಠಾಣ್‌ಕೋಟ್‌ ಸೇನಾ ನೆಲೆಯ ಮೇಲೆ ಜೈಷೆ ಮೊಹಮ್ಮದ್‌ ಉಗ್ರರು ದಾಳಿ ನಡೆಸಿದ್ದಾರೆ. 2016ರ ಬಳಿಕ ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಭಾರತ ಅಮೆರಿಕದೊಂದಿಗಿನ ಸಹಕಾರವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ' ಎಂದು ವಿದೇಶಾಂಗ ಇಲಾಖೆ ವರದಿ ಹೇಳಿದೆ.
ಐಸಿಸ್‌ನೊಂದಿಗೆ ಸಂಪರ್ಕ ಹೊಂದಿದ ಹಲವು ಉಗ್ರರನ್ನು ಭಾರತ ಬಂಧಿಸಿದ್ದು, ದೇಶದೊಳಗೆ ಐಸಿಸ್ ಜಾಲ ಬೆಳೆಯದಂತೆ ನಿಗಾವಹಿಸಿದೆ.
'ಪಾಕಿಸ್ತಾನ ಉಗ್ರರ ಸ್ವರ್ಗ' ಎಂಬ ಪ್ರತ್ಯೇಕ ಅಧ್ಯಾಯವನ್ನೇ ಈ ವರದಿ ಒಳಗೊಂಡಿದೆ. ಹಕ್ಕಾನಿ ನೆಟ್‌ವರ್ಕ್‌ (ಎಚ್‌ಕ್ಯುಎನ್‌), ಎಲ್‌ಇಟಿ ಮತ್ತು ಜೆಇಎಂ ಸೇರಿದಂತೆ ಹಲವು ಉಗ್ರ ಸಂಘಟನೆಗಳು 2016ರ ಬಳಿಕವೂ ಪಾಕಿಸ್ತಾನದೊಳಗೆ ಸುರಕ್ಷಿತ ನೆಲೆ ಕಂಡುಕೊಂಡಿವೆ.
'ಎಲ್‌ಇಟಿಯನ್ನು ಪಾಕಿಸ್ತಾನದೊಳಗೆ ನಿಷೇಧಿಸಿದ್ದರೂ, ಅದರ ಉಪ ಸಂಘಟನೆಗಳಾದ ಜಮಾತ್‌ ಉದ್‌ ದಾವಾ (ಜೆಯುಡಿ) ಮತ್ತು ಫಲಾಹ್‌ ಇ-ಇನ್ಸಾನಿಯತ್‌ ಫೌಂಡೇಶನ್‌ (ಎಫ್‌ಐಎಫ್‌) ಈಗಲೂ ಬಹಿರಂಗವಾಗಿಯೇ ಇಸ್ಲಾಮಾಬಾದ್‌ನಲ್ಲಿ ನಿಧಿ ಸಂಗ್ರಹಿಸುತ್ತಿವೆ' ಎಂದು ವರದಿ ಹೇಳಿದೆ.
'ಎಲ್ಇಟಿ ಮುಖ್ಯಸ್ಥ ಹಫೀಜ್‌ ಸಯೀದ್‌ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕನೆಂದು ವಿಶ್ವಸಂಸ್ಥೆ ಘೋಷಿಸಿದ್ದರೂ, ಈತ ಪಾಕಿಸ್ತಾನದಲ್ಲಿ ಅಲ್ಲಲ್ಲಿ ಬಹಿರಂಗ ರ‍್ಯಾಲಿಗಳನ್ನು ನಡೆಸುತ್ತಿದ್ದಾನೆ' ಎಂದು ಅಮೆರಿಕ ತಿಳಿಸಿದೆ.
Source - Vijaya Karnataka
loading...

Veerakesari 17:51
30 ದಿನದಿಂದ ಪ್ರತಿ 2 ಗಂಟೆಗೊಮ್ಮೆ ಯೋಧರ ಬದಲಾವಣೆ: ಮಾನವ ಸರಪಳಿ ಸ್ವರೂಪದಲ್ಲಿ ಕಾವಲು ಕಾಯುತ್ತಿರುವ ಸೇನೆ
ಕೋಲ್ಕತಾ: ಕಳೆದ 30 ದಿನಗಳಿಂದಲೂ ಸಿಕ್ಕಿಂ ಡೋಕ್ಲಾಮ್ ಗಡಿಯಲ್ಲಿ ಚೀನಾ ಸೇನೆಯ ಮೇಲೆ ಹದ್ದಿನ ಕಣ್ಣಿಟ್ಟಿರುವ ಭಾರತೀಯ ಸೇನೆಯ ಸುಮಾರು 350ಕ್ಕೂ ಹೆಚ್ಚು ಯೋಧರು ಮಾನವ ಸರಪಳಿ ಸ್ವರೂಪದಲ್ಲಿ ಕಾವಲು ಕಾಯುತ್ತಿದ್ದಾರೆಂದು ತಿಳಿದುಬಂದಿದೆ. 
ಕೆಲವೇ ಮೀಟರ್ ಗಳ ಅಂತರದಲ್ಲಿ 2 ಸಾಲುಗಳಲ್ಲಿ ನಿಂತಿರುವ ಭಾರತೀಯ ಯೋಧರು ಶಸ್ತ್ರಾಸ್ತ್ರ ಹೊಂದಿದ್ದಾರಾದರೂ, ಬಂದೂಕುಗಳನ್ನು ಕೆಳಮುಖವಾಗಿ ಹಿಡಿದಿದ್ದಾರೆಂದು ಹೇಳಲಾಗುತ್ತಿದೆ. 
ನಾಥು ಲಾ ಪಾಸ್ ನಿಂದ ಕೇವಲ 15 ಕಿ.ಮೀ ದೂರದಲ್ಲಿನ ಪ್ರದೇಶದಲ್ಲಿ ಸುಮಾರು 500 ಮೀಟರ್ ಉದ್ದಕ್ಕೆ ಇಂತಹ ಸಾಲು ನಿಲ್ಲಿಸಲಾಗಿದೆ. ಜೂ.6 ರಿಂದ ಯೋಧರ ಈ ಸಾಲು ಈ ರೀತಿ ನಿಲ್ಲಿಸಲಾಗಿದೆ. ಚೀನಾ ಸೇನೆಯೂ ಇದೇ ಮಾದರಿಯಲ್ಲಿ ಯೋಧರ ಮಾನವ ಸರಪಳಿ ರೂಪಿಸಿದೆ. ಡ್ರೋನ್ ಪರಿಶೀಲನೆಯಲ್ಲಿ ಈ ಮಾಹಿತಿ ಲಭ್ಯವಾಗಿದೆ ಎಂದು ವರದಿಗಳಿ ತಿಳಿಸಿವೆ. 
ಉಭಯ ರಾಷ್ಟ್ರಗಳ ನಡುವೆ ಸೃಷ್ಟಿಯಾಗಿರುವ ಬಿಕ್ಕಟ್ಟು ಸುಧಾರಣೆಗೆ ರಾಜತಾಂತ್ರಿಕ ಸಂಪರ್ಕ ಸೇರಿದಂತೆ ಭಾರತ ವಿವಿಧ ಪ್ರಯತ್ನಗಳನ್ನು ನಡೆಸುತ್ತಿದೆಯಾದರೂ, ಪರಿಸ್ಥಿತಿ ಯಥಾಸ್ಥಿತಿಯಲ್ಲಿದೆ ಎಂಬ ಮಾತುಗಳು ಕೇಳಿಬರತೊಡಗಿವೆ. 
ಈ ಗಡಿ ಪ್ರದೇಶ ಸಮುದ್ರ ಮಟ್ಟದಿಂದ 4,500 ಮೀಟರ್ ಎತ್ತರದಲ್ಲಿದ್ದು, ಇಲ್ಲಿ ಗಾಳಿ ವಿರಳವಾಗಿದೆ. ಪ್ರತಿ ಎರಡು ಗಂಟೆಗೊಮ್ಮೆ ಭಾರತೀಯ ಸೇನಾ ಸಿಬ್ಬಂದಿಗಳು ತಮ್ಮ ಪಾಳಿ ಬದಲಾಯಿಸಿಕೊಳ್ಳುತ್ತಾರೆ. ಈ ರೀತಿ ಮುಖಾಮುಖಿ ದಿನದುದ್ದಕ್ಕೂ ಮುಂದುವರಿಯುತ್ತದೆ. ಚೀನಾದ ಗುರಿ ಡೋಕ್ಲಾಂ ಜಾಂಫರಿ ರಿಡ್ಜ್ ಆಗಿದ್ದು, ಇಲ್ಲಿ ಹಿಡಿತ ಸಾಧಿಸಿದರೆ ಚೀನಾಕ್ಕೆ ಭಾರತದ ಈಶಾನ್ಯ ರಾಜ್ಯಗಳ ನಡುವೆ ಸಂಪರ್ಕ ಸಾಧಿಸುವುದಕ್ಕೆ ಅನುಕೂಲವಾಗುತ್ತದೆ ಎಂದು ವರದಿಗಳು ತಿಳಿಸಿವೆ. ಡೋಕ್ಲಾಮ್ ನಲ್ಲಿ ಚೀನಾ ರಸ್ತೆ ನಿರ್ಮಾಣಕ್ಕೆ ಯತ್ನಿಸಿರುವುದು ಉಭಯ ರಾಷ್ಟ್ರಗಳ ಯೋಧರ ನಡುವೆ ಘರ್ಷಣೆಗೆ ಕಾರಣವಾಗಿದೆ. 
Source - Kannada Prabha
loading...

Veerakesari 17:48
ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ನಡೆಸುತ್ತಿದ್ದ ಅಪ್ರಚೋದಿತ ಗುಂಡಿನ ದಾಳಿಯಿಂದಾಗಿ ಕಟ್ಟದೊಳಗೆ ಸಿಲುಕಿ ಹಾಕಿಕೊಂಡಿದ್ದ 200 ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಭಾರತೀಯ ಸೇನೆ ರಕ್ಷಣೆ ಮಾಡಿದ್ದು, ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿರುವ ಘಟನೆ ಮಂಗಳವಾರ ನಡೆದಿದೆ. 
ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡು ಹಾಗೂ ಶೆಲ್ ಗಳ ದಾಳಿ ನಡೆಸುತ್ತಿತ್ತು. ಇದರ್ದೆ. ಕಾಶ್ಮೀರದ ಗುರೇಜ್ ಸೆಕ್ಟರ್ ಬಳಿ ಉಗ್ರರು ಗಡಿ ನುಸುಳಲು ಯತ್ನ ನಡೆಸುತ್ತಿದ್ದರು. 
ಗಡಿಯಲ್ಲಿರುವ ಕಟ್ಟಡವೊಂದರಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿದ್ದರು. ಪಾಕಿಸ್ತಾನ ಸೇನೆ ನಡೆಸುತ್ತಿದ್ದ ಅಪ್ರಚೋದಿತ ಗುಂಡಿನ ದಾಳಿಗೆ ಕಟ್ಟಡದಿಂದ ಹೊರ ಬರಲಾರದೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರಾಣಾಪಾಯದಲ್ಲಿ ಸಿಲುಕಿಕೊಂಡಿದ್ದರು. ಈ ವೇಳೆ ಅಪ್ರಚೋದಿತ ಗುಂಡಿನ ದಾಳಿಗೆ ದಿಟ್ಟ ಉತ್ತರ ನೀಡಿದ ಭಾರತೀಯ ಸೇನೆ 200 ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ರಕ್ಷಣೆ ಮಾಡಿದೆ. ಅಲ್ಲದೆ, ಗಡಿ ನುಸುಳಲು ಯತ್ನ ನಡೆಸುತ್ತಿದ್ದ ಇಬ್ಬರು ಉಗ್ರರನ್ನು ಸದೆಬಡಿದಿದೆ. ಗುಂಡಿನ ಚಕಮಕಿ ವೇಳೆ ಇಬ್ಬರು ಭಾರತೀಯ ಯೋಧರೂ ಕೂಡ ಹುತಾತ್ಮರಾಗಿದ್ದಾರೆಂದು ತಿಳಿದುಬಂದಿದೆ. 
ಈ ಕುರಿತಂತೆ ಮಾಹಿತಿ ನೀಡಿರುವ ಶ್ರೀನಗರ ರಕ್ಷಣಾ ವಕ್ತಾರ ಕರ್ನಲ್ ರಾಜೇಶ್ ಕಲಿಯಾ ಅವರು, ಕುಪ್ವಾರ ಜಿಲ್ಲೆಯ ನೌಗಾಂ ಸೆಕ್ಟರ್ ಬಳಿಯಿರುವ ಗಡಿ ನಿಯಂತ್ರ ರೇಖೆ ಬಳಿ ಭಾರತೀಯ ಸೇನೆಯನ್ನು ಗುರುಯಾಗಿಸಿಕೊಂಡು ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿತ್ತು. ಈ ವೇಳೆ ಭಾರತೀಯ ಸೇನೆ ಕೂಡ ದಿಟ್ಟ ಉತ್ತರವನ್ನು ನೀಡಿದೆ. ಗುಂಡಿನ ಚಕಮಕಿ ವೇಳೆ 2 ಯೋಧರು ಹುತಾತ್ಮರಾಗಿದ್ದಾರೆಂದು ತಿಳಿಸಿದ್ದಾರೆ. 
ಗಡಿಯಲ್ಲಿ ಪಾಕಿಸ್ತಾನ ಸೇನೆ ನಡೆಸುತ್ತಿದ್ದ ಗುಂಡಿನ ದಾಳಿಗೆ ವಿಮಲ್ ಸಿಂಜಾಲಿ ಎಂಬ ಯೋಧ ಹುತಾತ್ಮರಾಗಿದ್ದಾರೆ. ಮತ್ತೊಬ್ಬ ಯೋಧನಿಗೆ ಗಂಭೀರವಾಗಿ ಗಾಯಗಳಾಗಿತ್ತು. ಗಾಯಗೊಂಡ ಯೋಧನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಂಜೆ ಹುತಾತ್ಮರಾದರು ಎಂದು ತಿಳಿಸಿದ್ದಾರೆ. 
ಗಡಿಯಲ್ಲಿ ಪಾಕಿಸ್ತಾನ ಸೇನೆ ನಡೆಸುತ್ತಿದ್ದ ನಿರಂತರ ಅಪ್ರಚೋದಿತ ಗುಂಡಿನ ದಾಳಿ ಹಿನ್ನಲೆಯಲ್ಲಿ ನೌಶೆರಾ ಹಾಗೂ ರಜೌರಿ ಜಿಲ್ಲೆಗಳ ಕಡಾಲಿ, ಸೆಹಾರ್ ಮತ್ತು ಭವಾನಿ ಪ್ರದೇಶದಲ್ಲಿದ್ದ ಮೂರು ಶಾಲೆಗಳ ಕಟ್ಟಡಗಳಲ್ಲಿ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಿಲುಕಿಕೊಂಡಿದ್ದರು. 
ಕಡಾಲಿ ಪ್ರಾಥಮಿಕ ಶಾಲೆಯಲ್ಲಿ 12 ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದರು. ನಂತರ ಶಾಲೆಯ ಆಡಳಿತ ಮಂಡಳಿಯ ಅಧಿಕಾರಿಗಳು ಗುಂಡಿನ ದಾಳಿಗಳ ನಡುವೆಯೂ ಸ್ಥಳೀಯರ ಸಹಾಯದೊಂದಿಗೆ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿದ್ದಾರೆ. ಕಟ್ಟಡದೊಳಗೆ ಸಿಲುಕಿಕೊಂಡಿದ್ದ ವಿದ್ಯಾರ್ಥಿಗಳ ರಕ್ಷಣೆಗಾಗಿ ಸೇನೆ ಹಾಗೂ ಪೊಲೀಸರ 5 ಬುಲೆಟ್ ಫ್ರೂಫ್ ವಾಹನಗಳನ್ನು ಬಳಕೆ ಮಾಡಲಾಯಿತು. 
ಇದಾದ ಬಳಿಕ ಭವಾನಿ ಪ್ರದೇಶದಲ್ಲಿದ್ದ ಸರ್ಕಾರಿ ಶಾಲೆಯೊಂದರ ಕಟ್ಟದಲ್ಲಿ 150 ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದರು. ನಂತರ ವಿದ್ಯಾರ್ಥಿಗಳನ್ನು ನೌಶೆರಾಗೆ ಸ್ಥಳಾಂತರ ಮಾಡಲಾಯಿತು. ಮತ್ತೊಂದು ಶಾಲೆಯಲ್ಲಿ 55 ವಿದ್ಯಾರ್ಥಿಗಳು ಸಿಲುಕಿಹಾಕಿಕೊಂಡಿದ್ದರು. ಗುಂಡಿನ ಚಕಮಕಿಗಳ ನಡುವೆಯೂ ಎಲ್ಲಾ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಯಿತು. ಪ್ರಸ್ತುತ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ಮುಂದುವರೆದಿರುವ ಹಿನ್ನಲೆಯಲ್ಲಿ ನೌಶೆರಾ ಹಾಗೂ ಮಂಜಕೋಟೆ ಸೆಕ್ಟರ್ ಬಳಿಯಿರುವ ಶಾಲೆಗಳನ್ನು ಬಂದ್ ಮಾಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
Source : Kannada Prabha
loading...

Veerakesari 17:46
ತಿರುವನಂತಪುರ: ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರಿಗೊಂದು ಸಿಹಿ ಸುದ್ದಿ. ಶಬರಿಮಲೆ ದೇವಸ್ಥಾನಕ್ಕೆ ಬರುವ ಲಕ್ಷಾಂತರ ಯಾತ್ರಿಕರ ಅನುಕೂಲಕ್ಕಾಗಿ ಶಬರಿಮಲೆಯಿಂದ 48 ಕಿ.ಮೀ.ದೂರದಲ್ಲಿ ವಿಮಾನ ನಿಲ್ದಾಣಕ್ಕೆ ನಿರ್ಮಾಣ ಪ್ರಸ್ತಾವಕ್ಕೆ ಕೇರಳ ಸಚಿವ ಸಂಪುಟ ಬುಧವಾರ ಅನುಮತಿ ನೀಡಿದೆ.
ಶಬರಿಮಲೆ ದೇವಸ್ಥಾನದಿಂದ 48 ಕಿ.ಮೀ. ದೂರದಲ್ಲಿರುವ ಎರುಮಲೆಯ ಹರಿಸನ್ಸ್ ಪ್ಲಾಂಟೆಷನ್ಸ್ ನ ಚೆರುವ್ಯಾಲಿ ಎಸ್ಟೇಟ್ ನಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ನೇತೃತ್ವದ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ಪ್ರಸ್ತೂತ ಯಾತ್ರಿಕರು ರಸ್ತೆ ಮಾರ್ಗವಾಗಿ ಮಾತ್ರವೇ ಶಬರಿಮಲೆಗೆ ಹೋಗಬಹುದಾಗಿದೆ. ಇತ್ತೀಚಿಗೆ ಶಬರಿಮಲೆಗೆ ಹೋಗುವ ಯಾತ್ರಿಕರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಯಾತ್ರಿಕರ ಅನುಕೂಲಕ್ಕಾಗಿ ಕೇರಳ ಸರ್ಕಾರ ಕೊಟ್ಟಾಯಂ ಜಿಲ್ಲೆಯ ಕಂಜಿರಪಾಳ್ಯ ತಾಲೂಕಿನಲ್ಲಿ ಸುಮಾರು 2,263 ಎಕರೆ ಜಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಮುಂದಾಗಿದೆ.
Source - Kannada Prabha
loading...

Veerakesari 17:44
ನವದೆಹಲಿ: ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ ಐಎ) ಮುಂದೆ ವಿಚಾರಣೆಗೆ ಹಾಜರಾಗಲು ವಿಫಲವಾದ ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಡಾ. ಝಾಕಿರ್  ನಾಯಕ್ ಪಾಸ್ ಪೋರ್ಟ್ ಅನ್ನು ಮಂಗಳವಾರ ರದ್ದುಗೊಳಿಸಲಾಗಿದೆ.
ವಿದೇಶಾಂಗ ಸಚಿವಾಲಯದ ಸೂಚನೆ ಹಿನ್ನೆಲೆಯಲ್ಲಿ ಮುಂಬೈನ ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿ ಇಂದು ಝಾಕಿರ್ ನಾಯಕ್ ಪಾಸ್ ಪೋರ್ಟ್ ಅನ್ನು ರದ್ದುಗೊಳಿಸಿದೆ.
ಝಾಕಿರ್ ನಾಯಕ್ ವಿರುದ್ಧದ ಭಯೋತ್ಪಾದನೆಗೆ ಹಣಕಾಸು ನೆರವು ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ ಐಎ ಆರೋಪಿಯ ಪಾಸ್ ಪೋರ್ಟ್ ರದ್ದುಗೊಳಿಸುವಂತೆ ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವಾಲಯ ಕಳೆದ ವಾರ ಝಾಕಿರ್ ನಾಯಕ್ ಪಾಸ್ಟ್ ರದ್ದುಗೊಳಿಸುವಂತೆ ಮುಂಬೈ ಪ್ರಾದೇಶಿಕ ಕಚೇರಿಗೆ ಸೂಚಿಸಿತ್ತು. 
ಕೋಮುವಾದ ಮತ್ತು ಭಯೋತ್ಪಾದನೆ ಪ್ರಚೋದಕ ಭಾಷಣ ಹಾಗೂ ಹಣಕಾಸು ನೆರವು ನೀಡಿದ ಆರೋಪದ ಮೇಲೆ ನವೆಂಬರ್ 18, 2016ರಂದು ಝಾಕಿರ್ ನಾಯಕ್ ವಿರುದ್ಧ ಎನ್ ಐಎ ಕ್ರಿಮಿನಲ್ ಕೇಸ್ ದಾಖಲಿಸಿತ್ತು. 
ಇನ್ನು ನಾಯಕ್‌ ಒಡೆತನದ ಇಸ್ಲಾಮಿಕ್‌ ರಿಸರ್ಚ್‌ ಫೌಂಡೇಷನ್‌ (ಐಆರ್‌ಎಫ್‌) ಸಂಸ್ಥೆಯನ್ನು ಕಾನೂನುಬಾಹಿರ ಚಟುವಟಿಕೆ ಕಾಯ್ದೆ ಅಡಿ ಕೇಂದ್ರ ಸರ್ಕಾರ ನಿಷೇಧ ಹೇರಿದೆ.
Source - Kannada Prabha
loading...

Veerakesari 17:13
ಸಪ್ತಗಿರಿ ವಾಸ ಶ್ರೀ ಶ್ರೀನಿವಾಸ ತಿರುಮಲ ತಿರುಪತಿ ಒಡೆಯ ತಿಮ್ಮಪ್ಪನ ಆಲಯ 60 ವರ್ಷಗಳ ಹಿಂದೆ ಹೇಗಿತ್ತು ಎಂಬುದನ್ನು ಈ ವಿಡಿಯೋದಲ್ಲಿ ನೋಡಿದರೆ ಚಕಿತರಾಗುತ್ತೀರ. ನಿತ್ಯ ಭಕ್ತರೊಂದಿಗೆ ತುಂಬು ತುಳುಕಿರುವ ತಿಮ್ಮಪ್ಪನ ಸನ್ನಿಧಿ ಕಾಲಕ್ರಮೇಣ ಅದೆಷ್ಟೋ ಬದಲಾವಣೆಗಳಿಗೆ ಒಳಗಾಗಿರುವುದು ನಿಮ್ಮ ಅರಿವಿಗೆ ಬರುತ್ತದೆ.
ಅರುವತ್ತು ವರ್ಷಗಳ ಹಿಂದೆ ತಿರುಪತಿ ಹೀಗಿತ್ತಾ ಎಂದರೆ ನಂಬುವುದು ಕಷ್ಟ. ಆಗಿನಿಂದಲೂ ಸ್ವಾಮಿಗೆ ಬ್ರಹ್ಮೋತ್ಸವ, ಪೂಜೆಗಳ ಸಂಪ್ರದಾಯ ನಡೆಯುತ್ತಾ ಬಂದಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.
ಈ ವಿಡಿಯೋವನ್ನು ಸ್ವತಃ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಬಿಡುಗಡೆ ಮಾಡಿದೆ. ಸುಮಾರು ಎರಡೂವರೆ ಗಂಟೆಗಳ ಕಾಲಾವಧಿಯ ಈ ವಿಡಿಯೋದಲ್ಲಿ ಬಹಳಷ್ಟು ವಿಶೇಷಗಳು, ಶ್ರೀನಿವಾಸನ ದರ್ಶನಭಾಗ್ಯವನ್ನೂ ಪಡೆಯಬಹುದು.
ಮೂಲ ವಿಗ್ರಹದ ಫೋಟೋ ಈಗಲೂ ಎಲ್ಲೂ ಸಿಗಲ್ಲ. ಆದರೆ ಇಲ್ಲಿ ದೇವರಿಗೆ ಮಹಾಮಂಗಳಾರತಿ ಮಾಡುವುದನ್ನು ಕಣ್ಣು ತುಂಬಿಕೊಳ್ಳಬಹುದು. ಆಕಾಶಗಂಗೆ ಜಲಪಾತದ ಬಳಿ ಭಕ್ತರ ಸ್ನಾನ, ತಿರುಮಲಕ್ಕೆ ಹೋಗುವ ಬಸ್ಸುಗಳು, ಅಂದಿನ ಕಾಲದ ಕಾರುಗಳು, ಘಾಟಿ ರಸ್ತೆಯಲ್ಲಿನ ಪ್ರಯಾಣ ನೋಡುತ್ತಿದ್ದರೆ ಮೈ ಝುಂ ಎನ್ನುತ್ತದೆ. ಇನ್ನೇಕೆ ತಡ ವಿಡಿಯೋ ನೋಡಿ.
Source - Vijaya Karnataka
loading...


​ನಿನ್ನ ಕತ್ತಿ ಶತ್ರುವಿನ ಕತ್ತಿಗಿಂತ ಕಿರಿದಾಗಿದ್ದರೆ, ನೀನು ಒಂದು ಹೆಜ್ಜೆ ಮುಂದೆ ಹೋಗಿ ನಿಲ್ಲಬೇಕು  ,ಆಗ ನಿನ್ನ ಕತ್ತಿ ಶತ್ರುವಿನ ರುಂಡ ಹಾರಿಸಬಲ್ಲದು.
ನಾನು ಉಸಿರಾಡುವ ಒಂದೊಂದು ಕ್ಷಣವೂ ಮಾತೃಭೂಮಿಯ ಶ್ರೇಯಸ್ಸಿಗಾಗಿಯೇ ಮುಡಿಪು. ಧ್ಯೇಯವಿಲ್ಲದ, ತ್ಯಾಗವಿಲ್ಲದ, ಬಲಿದಾನವಿಲ್ಲದ ರೋಗಕೂಪದಿಂದ ದೊರಕುವ ಯಕಃಶ್ಚಿತ್ ಸಾವು ನನಗೆ ಬೇಡ.”
ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ದಿಟ್ಟ ಸವಾಲಾಗಿ ನಿಂತು ಬೆಳಗಿದ, ರಾಷ್ಟ್ರಕ್ಕಾಗಿ ತಮ್ಮ ಬದುಕನ್ನು, ತಮ್ಮ ಇಡೀ ಕುಟುಂಬವನ್ನು ಸಮರ್ಪಿಸಿದ, ತಮ್ಮ ಹೆಸರು ಕೇಳಿದರೇ ಬ್ರಿಟಿಷರ ಎದೆ ನಡುಗುವಂತೆ ಮಾಡಿದ, ಮತ್ತು ಆ ಕಾರಣಕ್ಕಾಗಿಯೇ ವಿಶ್ವದ ಇತಿಹಾಸದಲ್ಲೇ ಮೊದಲ ಬಾರಿ 50 ವರ್ಷಗಳ ಘೋರ ಕರಿನೀರಿನ ಶಿಕ್ಷೆಗೆ ಒಳಗಾದ ಈ ದೇಶದ ಒಬ್ಬ ಮಹಾನ್ ಕ್ರಾಂತಿಕಾರಿಯನ್ನು, ಅಪ್ರತಿಮ ದೇಶಭಕ್ತನನ್ನು ಸ್ವಾತಂತ್ರ್ಯ ಬಂದ ಕೇವಲ 50 ವರ್ಷಗಳಲ್ಲಿ ಮರೆತುಬಿಟ್ಟೆವೆಂದರೆ ಅದಕ್ಕಿಂತ, ನೋವಿನ ಸಂಗತಿ ಬೇರೇನಿದ್ದೀತು? ತಮ್ಮ ಕೋಟ್‌ಗೆ ಕೆಂಪು ಗುಲಾಬಿ ಹೂವು ಸಿಕ್ಕಿಸಿಕೊಂಡು ಅದು ಒಂದು ಚೂರೂ ಬಾಡದಂತೆ ಬಹಳ ಎಚ್ಚರಿಕೆಯಿಂದ ‘ಸ್ವಾತಂತ್ರ್ಯ ಹೋರಾಟ’ ಮಾಡಿದ ಈ ದೇಶದ ಮಹಾನ್ ನಾಯಕ ಪಂಡಿತ್ ಜವಹರಲಾಲ್ ನೆಹರು ಅಲಿಯಾಸ್ ಚಾಚಾ ನೆಹರು, ಮತ್ತವರ ಕುಟುಂಬದ ಬಗ್ಗೆ ಹೇಳಿದ ಶೇಕಡಾ 10 ರಷ್ಟನ್ನಾದರೂ ಸಾವರ್ಕರ್ ಕುರಿತು ಹೇಳಿದ್ದರೆ ದೇಶದ ಬಗ್ಗೆ ನಾವಿಷ್ಟು ನಿರಭಿಮಾನಿಗಳೂ, ನಿರ್ವೀಯರೂ, ವಿದೇಶಿ ಚಿಂತನೆಗಳ ಆರಾಧಕರೂ ಆಗಿರುತ್ತಿರಲಿಲ್ಲವೇನೋ.
ವಿಶ್ವದ ಚರಿತ್ರೆಯಲ್ಲಿ 50 ವರ್ಷಗಳ ಕರಿನೀರಿನ ಶಿಕ್ಷೆಗೆ ಗುರಿಯಾದ ಮೊಟ್ಟ ಮೊದಲ ಸ್ವಾತಂತ್ರ್ಯ ಸೇನಾನಿ ಸಾವರ್ಕರ್. ಅಹಿಂಸೆಯ ಹೆಸರಲ್ಲಿ ಬ್ರಿಟಿಷರ ಕಾಲಿಗೆ ಬಿದ್ದು ಬಿದ್ದು ಆತ್ಮಾಭಿಮಾನವನ್ನೇ ಕಳೆದುಕೊಂಡಿದ್ದವರ ಮಧ್ಯೆ ಇಂಗ್ಲೆಂಡಿಗೇ ತೆರಳಿ ಬ್ರಿಟಿಷರ ಎದೆನಡುಗುವಂತೆ ಕ್ರಾಂತಿಕಾರ್ಯ ಸಂಘಟಿಸಿ ನೂರಾರು ತರುಣ ದೇಶಭಕ್ತರ ಪಡೆ ರಚಿಸಿದ ಮೊದಲ ಕ್ರಾಂತಿಕಾರಿ ಸಾವರ್ಕರ್. ಸತತ 11 ಬಾರಿ ಕಠಿಣ ಸೆರೆವಾಸಕ್ಕೆ ಗುರಿಯಾದ ಅದ್ವಿತೀಯ ಸೇನಾನಿ ಸಾವರ್ಕರ್. ದುರಂತವೆಂದರೆ ಸ್ವಾತಂತ್ರ್ಯ ಬಂದ ಮೇಲೂ ಭಾರತ ಸರ್ಕಾರದಿಂದಲೇ ಬಂಧನಕ್ಕೆ ಒಳಗಾದ, ಇಲ್ಲಿನ ವ್ಯವಸ್ಥೆಗೆ ನೊಂದು 21 ದಿನಗಳ ಉಪವಾಸದ ಮೂಲಕ ಪ್ರಾಯೋಪವೇಶ ಮಾಡಿ ಆತ್ಮಾರ್ಪಣೆಗೈದ ಮೊದಲ ಚೇತನ ಸಾವರ್ಕರ್.
ಅಪ್ರತಿಮ ಸ್ವಾತಂತ್ರ್ಯ ಯೋಧರಾದ ‘ವೀರ ಸಾವರಕರ್’ ಎಂದೇ ಖ್ಯಾತರಾಗಿದ್ದ ವಿನಾಯಕ ದಾಮೋದರ ಸಾವರಕರ್ ಅವರು ಮೇ 28, 1883ರ ವರ್ಷದಲ್ಲಿ ಮಹಾರಾಷ್ಟ್ರದ ನಾಸಿಕ್ ಬಳಿಯ ಗ್ರಾಮದಲ್ಲಿ ಜನಿಸಿದರು. ಅವರು ತಮ್ಮ ಕ್ರಾಂತಿಕಾರಿ ಚಟುವಟಿಕೆಯಿಂದ ‘ವೀರ’ ಎಂಬ ಬಿರುದಿಗೆ ಪಾತ್ರರಾಗಿದ್ದರು.
ಭಾರತ ಮತ್ತು ಇಂಗ್ಲೆಂಡಿನಲ್ಲಿ ವಿದ್ಯಾರ್ಜನೆ ಮಾಡುತ್ತಿರುವಾಗಲೇ ಬ್ರಿಟಿಷರ ವಿರುದ್ಧ ಸಾವರಕರ್ ಸಿಡಿದೆದ್ದಿದ್ದರು. ಬಾಲ್ಯದಿಂದಲೂ ಬ್ರಿಟಿಷರ ಆಳ್ವಿಕೆಯನ್ನು ವಿರೋಧಿಸುತ್ತ ಬಂದಿದ್ದ ಅವರು ಉತ್ತಮ ಬರಹಗಾರ, ಬ್ಯಾರಿಸ್ಟರ್‌,ಸಂಸ್ಕೃತ ಪಂಡಿತ, ಕವಿ, ಸಮಾಜ ಸುಧಾರಕ ಹಾಗೂ ದಾರ್ಶನಿಕರು.
ಸಾವರಕರ್ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟ 1857ರ ಸಿಪಾಯಿ ದಂಗೆ ಬಗ್ಗೆ ‘ದಿ ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್’ ಪುಸ್ತಕ ಬರೆದು ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿದ್ದರು. ನಂತರ ಆ ಪುಸ್ತಕವನ್ನು ಆಂಗ್ಲ ಆಡಳಿತ ನಿಷೇಧಿಸಿತ್ತು. ಕ್ರಾಂತಿಕಾರಿ ಸಂಘಟನೆ ಇಂಡಿಯಾ ಹೌಸ್ ಜೊತೆ ಗುರುತಿಸಿಕೊಂಡಿದ್ದಕ್ಕಾಗಿ ಬ್ರಿಟಿಷರು ಅವರನ್ನು 1910ರಲ್ಲಿ ಬಂಧಿಸಿದ್ದರು. ಬ್ರಿಟಿಷರ ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪದ ಮೇಲೆ ಅವರಿಗೆ 50 ವರ್ಷ ಕಠಿಣ ಶಿಕ್ಷೆಯಾಗಿ ‘ಕಾಲಾಪಾನಿ’ ಶಿಕ್ಷೆಗೆ ಪ್ರಸಿದ್ಧಿ ಪಡೆದಿದ್ದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಸೆಲ್ಯುಲಾರ್ ಜೈಲಿನಲ್ಲಿ ಬಂಧಿಸಿಡಲಾಯಿತು.
ನಿಲ್ಲಲು ಹೊತ್ತಿಲ್ಲದಂತೆ ಎಲ್ಲೆಲ್ಲಿಯೂ ಸದಾಕಾಲವೂ ಅಲೆಯಾಗುವ ಸಮುದ್ರದ ನಟ್ಟನಡುವೆ ವೃತ್ತಾಕಾರದಲ್ಲಿ 7 ಕಕ್ಷೆಗಳಲ್ಲಿ ಕಟ್ಟಲಾಗಿದ್ದ ಸೆಲ್ಯುಲಾರ್ ಬಂಧಿಖಾನೆಗೆ ಅಂದಿದ್ದ ಹೆಸರು “ಕಾಲಾಪಾನಿ”. 222 ಕೋಣೆಗಳಿದ್ದ ಇಲ್ಲಿ 600ಕ್ಕೂ ಹೆಚ್ಚು ಸ್ವಾತಂತ್ರ್ಯ ಸೇನಾನಿಗಳು ಕಣ್ಣೀರಾಗಿದ್ದಾರೆ. ಕಾಲು ಚಾಚಿ ಮಲಗುವುದಿರಲಿ ತಲೆ ಎತ್ತಿ ಕುಳಿತುಕೊಳ್ಳಲೂ ಆಗದ ಕೋಣೆಗಳಲ್ಲಿ ಮಿಣುಕು ಬೆಳಕು ಬೀರುವ ಗವಾಕ್ಷಿಗಳಿವೆ. ಕಣ್ಣು ತೆರೆದಿರುವಾಗಲೆಲ್ಲಾ ಅಲ್ಲಿದ್ದವರಿಗೆ ಕಾಣುತ್ತಿದ್ದದ್ದು ಸಮುದ್ರ ಮತ್ತು ಸಮುದ್ರ ಮಾತ್ರ. ನೆತ್ತಿ ಕುದಿಸುವ ಬಿಸಿಲಿನಲ್ಲಿ ಬ್ರಿಟೀಷ್ ಅಧಿಕಾರಿಗಳು ಕೊಟ್ಟಾಗ ಕೊಡುವಷ್ಟು ನೀರನ್ನು ಕುಡಿದು ದಿನಕ್ಕೆ 18 ಗಂಟೆಗಳ ಕಾಲ ಮರದ ದಿಮ್ಮಿಗಳನ್ನು ಬೆನ್ನ ಮೇಲೆ ಹೊತ್ತು ತಂದು ಕತ್ತರಿಸಿ ಸಾಗಿಸಬೇಕಾದ ಕೆಲಸ ಸೇನಾನಿಗಳಿಗೆ. ಅಕ್ಕಪಕ್ಕದವರೊಡನೆ ಮಾತನಾಡುವುದು ನಿಷಿದ್ಧ. ಅಧಿಕಾರಿಗಳ ಮನೋಯಿಚ್ಛೆಯಂತೆ ಛಡಿ ಏಟುಗಳು, ಕಾದ ಮರಳಿನಲ್ಲಿ ಬೆತ್ತಲೆ ಮೈನ ಉಜ್ಜಾಟ. ಇವು ಸೌಮ್ಯ ಸ್ವರೂಪದ ಶಿಕ್ಷೆಗಳೆನಿಸಿದ್ದರೆ, ಕೈಕಾಲುಗಳನ್ನು ಕಟ್ಟಿ ನಳಿಕೆಯ ಮೂಲಕ ಶ್ವಾಸಕೋಶಗಳಿಗೆ ಬಿಸಿ ಹಾಲನ್ನು ಹುಯ್ಯುವುದು ತೀವ್ರ ರೂಪದ ಶಿಕ್ಷೆಯಾಗಿತ್ತು.ಇಂತಹ ಭಯಾನಕ ವಾತಾವರಣದಲ್ಲಿ ಜುಲೈ 4, 1911ರಿಂದ 1924ರವರೆಗೂ ಬಂಧಿಯಾಗಿದ್ದದ್ದು ವೀರ ಸಾವರ್ಕರ್.
ಅವತ್ತಿನ ಮಟ್ಟಿಗೆ ಕರಿನೀರಿನ ಶಿಕ್ಷೆ ಎಂದರೆ ಅದು ಸಾವಿನ ಮನೆ ಅಂತಲೇ ಅರ್ಥ. ಹೊರಗಿನ ಯಾರ ಸಂಪರ್ಕವೂ ಇಲ್ಲದ, ದೇಶದಿಂದ ಬಹುದೂರದ ಅಂಡಮಾನಿನ ಆ ಕ್ರೂರ ಜೈಲಿನಿಂದ ಮರಳಿ ಬರುವ ನಂಬಿಕೆಯೇ ಇರಲಿಲ್ಲ. ಅದೂ 50 ವರ್ಷಗಳು !. ಎದೆ ಬಿರಿಯುವ ಶಿಕ್ಷೆ ಕೇಳಿದಾಗಲೂ ಅವರು ವಿಚಲಿತರಾಗಲಿಲ್ಲ. ಈ ಸಮುದ್ರ ಈಜಿದ ಸಾಹಸಿಯನ್ನು ಅಣಕಿಸಲೆಂದೇ ಅಲ್ಲಿನ ಜೈಲರ್ ‘ಹೆದರಬೇಡಿ ಬ್ಯಾರಿಸ್ಟರ್ ಸಾಹೇಬರೇ, 1960 ರಲ್ಲಿ ನಮ್ಮ ಪರಮ ಕೃಪಾಳು ಸರ್ಕಾರ ಖಂಡಿತಾ ನಿಮ್ಮನ್ನು ಬಿಡುಗಡೆ ಮಾಡುತ್ತದೆ’ ಎಂದಾಗ ಸಾವರ್ಕರ್ ಜೋರಾಗಿ ನಕ್ಕು ’50 ವರ್ಷಗಳ ಕಾಲ ನಿಮ್ಮ ಸರ್ಕಾರ ಇದ್ದರೆ ತಾನೇ ?’ ಎಂದು ಮರುಪ್ರಶ್ನಿಸಿ ಗತ್ತಿನಿಂದಲೇ ನಡೆದಿದ್ದರು.
ಅದೇ ಸಮಯದಲ್ಲಿ ಸೆಗಾರ್ ಖಾನ್‍ನೊಡನೆ ನಿಕಟ ಸ್ನೇಹ ಬೆಳೆಯಿತು. ಆದರೆ ಅಲ್ಲೇ ಹತ್ತಿರದ ವೈಪರ್ ದ್ವೀಪದಲ್ಲಿ ಸೆಗಾರ್ ಖಾನ್‍ನನ್ನು ನೇಣಿಗೇರಿಸಿದ್ದನ್ನು ಕಣ್ಣಾರೆ ಕಂಡ ಸಾವರ್ಕರ್ ಹೆಚ್ಚು ಹೆಚ್ಚು ಅಂತರ್ಮುಖಿಯಾಗಿದ್ದು. 1913ರಲ್ಲಿ ಕಾಲಾಪಾನಿಗೆ ಭೇಟಿಯಿತ್ತ ಮಹಾತ್ಮ ಗಾಂಧಿಯವರನ್ನು ಸಾವರ್ಕರ್ ಕೇಳಿದ ಒಂದೇ ಮಾತು “ಇಲ್ಲಿನ ಬಂಧಿಗಳಿಗೆ ಅಕ್ಷರ ಕಲಿಸಿಕೊಡಲು ಅನುವು ಮಾಡಿಸಿಕೊಡಿ”.ಅಂತೂ ಅನುಮತಿ ಸಿಕ್ಕಿತ್ತು. ಸಾವರ್ಕರ್ ಜೊತೆಯವರನ್ನು ಸಾಕ್ಷರರನ್ನಾಗಿ ಮಾಡಿದ್ದಲ್ಲದೆ, ಈಗ ಜಗತ್ತಿನ 17 ಭಾಷೆಗಳಿಗೆ ಭಾಷಾಂತರಗೊಂಡಿರುವ “ಕಾಲಾಪಾನಿ” ಎನ್ನುವ ಕಥನವನ್ನೂ ರಚಿಸಿದ್ದು ಇಲ್ಲಿನ ಕೋಣೆಯಲ್ಲೇ. ಕವಿ, ನಾಟಕಕಾರ, ವಿಮರ್ಶಕ, ಚಿಂತಕ ಎಂದೆಲ್ಲಾ ಹೆಸರು ಮಾಡಿದ್ದ ಸಾವರ್ಕರ್ ಇಂಗ್ಲಿಷ್ ಕಲಿತು “Transportation of my Life” ಎನ್ನುವ ಕೃತಿಯನ್ನು ರಚಿಸಿದ್ದು ಹಾಗು ಹಲವಾರು ಕವನಗಳನ್ನು ಭಾಷಾಂತರಗೊಳಿಸಿದ್ದು ಈ ಜೇಲಿನಲ್ಲಿದ್ದಾಗಲೇ. ಲಂಡನ್‍ನಿಂದ ಪ್ರಕಟವಾಗುತ್ತಿದ್ದ ಮರಾಠಿ ಪಾಕ್ಷಿಕಕ್ಕೆ ಅಂಡಮಾನಿನ ಜೇಲಿನಿಂದ ಬರೆಯುತ್ತಿದ್ದ ಏಕೈಕ ಪತ್ರಕರ್ತ ವೀರ ಸಾವರ್ಕರ್.ಗಾಂಧಿ ಮತ್ತು ಪಟೇಲರ ಮನವಿಯಂತೆ 1924ರಲ್ಲಿ ಸಾವರ್ಕರ್‌ನನ್ನು ಪುಣೆಯ ಬಂಧಿಖಾನೆಗೆ ವರ್ಗಾಯಿಸಲಾಯಿತು. ಗಾಂಧಿ ಹತ್ಯೆಯಲ್ಲಿ ಒಂದೊಮ್ಮೆ ಹಿಂದೂ ಮಹಾಸಭೆಯ ಅಧ್ಯಕ್ಷನಾಗಿದ್ದ ಸಾವರ್ಕರ್‌ನ ಪಾತ್ರವೂ ಇದೆ ಎನ್ನುವ ಆಪಾದನೆಯಿಂದ ಸಾಕಷ್ಟು ಮನನೊಂದ ವೀರ ತಮ್ಮ 83ನೇ ವಯಸ್ಸಿನಲ್ಲಿ 1966ರ ಫ಼ೆಬ್ರವರಿ 1ರಂದು ಆಮರಣಾಂತ ಉಪಾವಾಸ ಕೈಗೊಂಡು ಫೆ. 26ನೇ ದಿನಾಂಕ ಬೆಳಗ್ಗೆ 10.30ಕ್ಕೆ ದೇಹತ್ಯಾಗ ಮಾಡಿ ಅಮರರಾಗಿದ್ದು ಇತಿಹಾಸ. ಸಮವಸ್ತ್ರ ಧರಿಸಿದ 2500 ಸ್ವಯಂಸೇವಕರಿಂದ ಗೌರವ ಪಡೆದ ಏಕೈಕ ಸ್ವಾತಂತ್ರ್ಯ ಯೋಧ ವೀರ ಸಾವರ್ಕರ್ ಬರೆದ ಕೊನೆಯ ಕವಿತೆಯ ಸಾಲೊಂದು ಹೇಳುತ್ತೆ “ಘಳಿಗೆಯಲಿ ಕ್ಷಣವೊಂದು ಕಳೆದು ಹೋದಂತೆ, ಓ ಗೆಳೆಯಾ, ಒಮ್ಮೆ ಕಳೆದದ್ದು ಮತ್ತೆಂದೂ ಬಾರದಂತೆ.
ದೇಶಕ್ಕಾಗಿ ತನ್ನ ಜೀವನಪೂರ್ತಿ ಕಷ್ಟಪಟ್ಟು ಹಗಲಿರುಳೂ ಕಷ್ಟಗಳ ನೆರಳಿನಲ್ಲಿ ಬದುಕಿದ ಈ ಸ್ವಾತಂತ್ರ್ಯ ಹೋರಾಟಗಾರರ ಚೇತನಕ್ಕೆ ನಮ್ಮ ನಮನ.
ಆ ಮಹಾನ್ ನಾಯಕನನ್ನು ಈ ದೇಶ, ಇಲ್ಲಿನ ಸರಕಾರ ನಡೆಸಿಕೊಂಡ ರೀತಿ ಮಾತ್ರ ಅತ್ಯಂತ ಹೇಯ. ಗಾಂಧಿ ಹತ್ಯೆಯ ಸುಳ್ಳು ಆರೋಪ ಹೊರಿಸಿ ಅವರನ್ನು ಬಂಧಿಸಲಾಯಿತು. ಮುಂದೆ ನ್ಯಾಯಾಲಯ ಅವರನ್ನು ನಿರ್ದೋಷಿ ಎಂದು ಘೋಷಿಸಿತು. 1950 ರಲ್ಲಿ ಲಿಯಾಖತ್ ಅಲಿ ಭಾರತ ಭೇಟಿಗೆ ಬಂದಾಗ ಹಿಂದುತ್ವ ನಿಷ್ಠರಾಗಿದ್ದರು ಎಂಬ ಏಕೈಕ ಕಾರಣಕ್ಕೆ ದೈಹಿಕವಾಗಿ ಜರ್ಜರಿತರಾಗಿದ್ದ ಅರವತ್ತೇಳು ವರ್ಷದ ವೃದ್ಧ ಸಾವರ್ಕರ್‌ರನ್ನು ಬಂಧಿಸಿ ಸರ್ಕಾರ ಬೆಳಗಾವಿ ಜೈಲಿಗೆ ಕಳಿಸಿತು. ಬ್ರಿಟಿಷರು ವಶಪಡಿಸಿಕೊಂಡಿದ್ದ ಸಾವರ್ಕರ್ ಮನೆಯನ್ನು ಸ್ವಾತಂತ್ರ್ಯಾ ನಂತರವೂ ಹಿಂದಿರುಗಿಸುವ ಸೌಜನ್ಯವನ್ನು ನೆಹರೂ ಸರ್ಕಾರ ತೋರಲಿಲ್ಲ. ಸಾವರ್ಕರ್ ಬಿಡುಗಡೆಗೆ ಆಗ್ರಹಿಸಿ ಸಹಿ ಸಂಗ್ರಹ ಮಾಡಿ ತಂದಾಗ ನೆಹರು ಅದನ್ನು ಹರಿದೆಸೆದಿದ್ದರು. ಸಾವರ್ಕರ್ ಗೌರವಾರ್ಥ ಅವರ ಅಭಿಮಾನಿಗಳು ‘ಮೃತ್ಯುಂಜಯ ದಿವಸ’ ಆಚರಿಸಿದಾಗ ಅದರ ವರದಿಯನ್ನು ಆಕಾಶವಾಣಿ ಬಿತ್ತರಿಸದಂತೆ ನೆಹರೂ ನೋಡಿಕೊಂಡರು. ಕೊನೆಗೆ ಸಾವರ್ಕರ್ ನಿಧನರಾದಾಗಲೂ ಅವರ ಪಾರ್ಥಿವವನ್ನು ಹೊತ್ತೊಯ್ಯಲು ಗನ್-ಕ್ಯಾರೇಜ್ ಸಿಗದಂತೆ ಮಾಡಲಾಯಿತು. ಸಂಸತ್ತಿನಲ್ಲಿ ಕನಿಷ್ಠ ಶ್ರದ್ಧಾಂಜಲಿಯನ್ನೂ ಅರ್ಪಿಸಲಿಲ್ಲ. ಅವರು ಸಂಸತ್ತಿನ ಸದಸ್ಯರಲ್ಲ ಎಂಬ ಪೊಳ್ಳು ನೆಪ ನೀಡಿದ್ದರು ನೆಹರು. ಆದರೆ ರಷ್ಯಾದ ಸ್ಟಾಲಿನ್ ಸತ್ತಾಗ ಸಂಸತ್ತು ಕಂಬನಿ ಮಿಡಿದಿತ್ತು. 3 ವರ್ಷಗಳ ಹಿಂದೆ ಅಂಡಮಾನಿನ ಜೈಲಿನಲ್ಲಿ ಸಾವರ್ಕರ್ ಸ್ಮರಣೆಗಾಗಿ ಹಾಕಿದ್ದ ಫಲಕವನ್ನು ಕಿತ್ತೆಸೆಯುವ ನೀಚ ಕಾರ್ಯಕ್ಕೂ ನೆಹರು ವಂಶದ ಸರ್ಕಾರ ಮುಂದಾಯಿತು.ಇಂತಹ ನಿರಭಿಮಾನಿಗಳ ದೇಶದಲ್ಲಿ ಹುಟ್ಟಿದ್ದೇ ಸಾವರ್ಕರ್ ಮಾಡಿದ ತಪ್ಪೇನೋ?
ದೇಶಕ್ಕಾಗಿ ತನ್ನ ಜೀವನಪೂರ್ತಿ ಕಷ್ಟಪಟ್ಟು ಹಗಲಿರುಳೂ ಕಷ್ಟಗಳ ನೆರಳಿನಲ್ಲಿ ಬದುಕಿದ ಈ ಸ್ವಾತಂತ್ರ್ಯ ಹೋರಾಟಗಾರರ ಚೇತನಕ್ಕೆ ನಮ್ಮ ನಮನ.
ನನ್ನಲ್ಲಿ ದೇಶ ಭಕ್ತಿಯ ಮತ್ತು ದೇಶ ಪ್ರೇಮದ ಕಿಚ್ಚನ್ನು ಹೊತ್ತಿಸಿದ ಹೆಮ್ಮಯ ಭಾರತಾಂಬೆಯ ಪುತ್ರ...ದೇಶಕ್ಕಾಗಿ ತನ್ನ ಜೀವನಪೂರ್ತಿ ಕಷ್ಟಪಟ್ಟು ಹಗಲಿರುಳೂ ಕಷ್ಟಗಳ ನೆರಳಿನಲ್ಲಿ ಬದುಕಿದ ಈ ಸ್ವಾತಂತ್ರ್ಯ ಹೋರಾಟಗಾರರ ಚೇತನಕ್ಕೆ ನಮ್ಮ ನಮನ.

​ಸಾವರಕರರ ಬಗ್ಗೆ ಮತ್ತೊಂದಿಷ್ಟು :
ಯುದ್ಧವಿಲ್ಲದೇ ಸ್ವಾತಂತ್ರ್ಯ ದಕ್ಕದು ಗೆಳೆಯಾ! 
ಸ್ವರಾಜ್ಯ ಬೇಕಿದ್ದರೆ, ತಗೋ ಕತ್ತಿ ತೋರು ಕೆಚ್ಚೆದೆಯಾ! !
-ಸ್ವಾತಂತ್ರ್ಯ ವೀರ ಸಾವರ್ಕರ್
ದೇಶವನ್ನು ಬಡಿದೆಚ್ಚರಿಸುವ ಸಾಹಿತ್ಯ ಬರಬೇಕು.
-ಸ್ವಾತಂತ್ರ್ಯ ವೀರ ಸಾವರ್ಕರ್
ಗೆಳೆಯರೊಂದಿಗೆ ನೇಣು ಸ್ವೀಕರಿಸುತ್ತೇನೆ , ಕಾಲಾಪಾನಿಯಾದರೂ ಸಹಿಸುತ್ತೇನೆ.  ನಾನೇ ಮುಂದೆ ನಿಲ್ಲುವುದರಿಂದ ಜನರಿಗೆ ಇನ್ನೂ ಹೆಚ್ಚಿನ ಸ್ಫೂರ್ತಿ ದೊರೆಯುತ್ತದೆ. ಕ್ರಾಂತಿ ಇನ್ನೂ ಬೇಗ ಸಾಧ್ಯವಾಗುತ್ತದೆ.
-ಸ್ವಾತಂತ್ರ್ಯ ವೀರ ಸಾವರ್ಕರ್
ನಿನ್ನ ಕತ್ತಿ ಶತ್ರುವಿನ ಕತ್ತಿಗಿಂತ ಕಿರಿದಾಗಿದ್ದರೆ, ನೀನು ಒಂದು ಹೆಜ್ಜೆ ಮುಂದೆ ಹೋಗಿ ನಿಲ್ಲಬೇಕು  ,ಆಗ ನಿನ್ನ ಕತ್ತಿ ಶತ್ರುವಿನ ರುಂಡ ಹಾರಿಸಬಲ್ಲದು.
-ಸ್ವಾತಂತ್ರ್ಯ ವೀರ ಸಾವರ್ಕರ್
ಸಿಂಧುವಿಲ್ಲದ ಹಿಂದುವಿಲ್ಲ ! ಅಖಂಡವಾಗಿಲ್ಲದಿದ್ದರೆ ಅದು ಹಿಂದುಸ್ಥಾನವೇ ಅಲ್ಲ!
-ಸ್ವಾತಂತ್ರ್ಯ ವೀರ ಸಾವರ್ಕರ್
ಸತ್ಯಾಗ್ರಹ – ಅಸಹಕಾರಗಳು ಸ್ವಾತಂತ್ರ್ಯದ ಮಾರ್ಗವಲ್ಲ . ಚರಖಾದಿಂದ ನೂಲಷ್ಟೇ ಬಂದೀತು. ಸ್ವಾತಂತ್ರ್ಯವಲ್ಲ.
-ಸ್ವಾತಂತ್ರ್ಯ ವೀರ ಸಾವರ್ಕರ್
ಸಾವರ್ಕರ್ ಘರ್ ವಾಪ್ಸಿ (ಮರಳಿ ಮಾತೃ ಧರ್ಮದ) ಕಾರ್ಯ ಮಾಡುತ್ತಿರುವಾಗ , ಒಬ್ಬ ಮುಸ್ಲಿಂ ನಾಯಕ ಶೌಕತ್ ಅಲಿ ವಿರೋಧ ಮಾಡ್ತಾನೆ. ಅವರಿಬ್ಬರ ನಡುವಿನ ಸಂವಾದ ಹೀಗಿದೆ,
ಶೌಕತ್ ಅಲಿ : ನಿಮ್ಮ ಹಿಂದು ಸಂಘಟನೆ, ಶುದ್ಧಿ ಚಳುವಳಿಗಳಿಂದ ನಾವೆಲ್ಲ ಕೋಪಗೊಂಡಿದ್ದೇವೆ. ಈಗಲೇ ತಿದ್ದಿಕೊಳ್ಳದಿದ್ದರೆ ಪರಿಣಾಮ ನೆಟ್ಟಗಾಗಲಿಕ್ಕಿಲ್ಲ.
ಸಾವರ್ಕರ್ : ಬಿಡಿ ಬಿಡಿ.  ಸೂರ್ಯ ಮುಳುಗದ ಬ್ರಿಟಿಷ್ ಸಾಮ್ರಾಜ್ಯಕ್ಕೆ ಬೆದರಲಿಲ್ಲ, ಇನ್ನು ಮುಸ್ಲಿಂ ಗೂಂಡಾಗಳ ಚಾಕು-ಚೂರಿಗಳಿಗೆ ಹೆದರಬೇಕೆ? ಎಂದು ನಕ್ಕರು.
ಶೌಕತ್ ಅಲಿ: ನಮ್ಮ ರಕ್ಷಣೆಗೆ ಬೇಕಾದಷ್ಟು ರಾಷ್ಟ್ರಗಳಿವೆ .  ನಾವು ಇಲ್ಲಿ ಸರಿಯಾಗಲಿಲ್ಲವೆಂದರೇ ಹೊರಟುಬಿಡುತ್ತೇವೆ. 
ಸಾವರ್ಕರ್ : ನಮ್ಮ ತಡೆಯಿಲ್ಲ, ದಿನನಿತ್ಯವೂ ಫ್ರಾಂಟಿಯರ್ ರೈಲ್ ಅತ್ತಕಡೆಗೆ ಓಡುತ್ತದೆ ಹೋಗಿ ಹೋಗಿ ಎಂದರು ವ್ಯಂಗ್ಯಭರಿತ ದನಿಯಲ್ಲಿ.
ಶೌಕತ್ ಅಲಿ : ನಿಮ್ಮಂಥ ಕುಳ್ಳನನ್ನು ನಾನು ಒಂದೇ ಹೊಡೆತಕ್ಕೆ ಮುಗಿಸಬಲ್ಲೆ.
ಸಾವರ್ಕರ್ : ಅಫ್ಜಲ್ ಖಾನನ ಮುಂದೆ ಶಿವಾಜಿಯೂ ಕುಳ್ಳನೇ, ಅವರಿಬ್ಬರ ಭೇಟಿಯ ಫಲಶ್ರುತಿ ನಿಮಗೆ ಗೊತ್ತೇ ಇದೆ. ನಾನು ನಿಮ್ಮ ಸವಾಲನ್ನು ತಿರಸ್ಕರಿಸಲಾರೆ,  ಬನ್ನಿ ಎಂದರು.
ತಾಯಿ ಭಾರತೀಯೂ ಮುಕ್ತಿಗಾಗಿ ಯಾರೂ ಮೂಸದ ನಮ್ಮ ಮನೆಯಂಗಳದ ಹೂಗಳನ್ನು ಕಿತ್ತು ಭಗವಂತನ ಚರಣಗಳಿಗೆ ಅರ್ಪಿಸುತ್ತಿದ್ದಾಳೆ. ಆಕೆ ಪದೇ-ಪದೇ ನಮ್ಮ ತೋಟಕ್ಕೆ ಬರಲಿ, ಹೂ ಕಿತ್ತು ಅರ್ಪಣೆಗೈಯ್ಯಲಿ. ನವರಾತ್ರಿಯ ಪರ್ವವನ್ನು ಆಕೆ ಹೆಮ್ಮೆಯಿಂದ ಆಚರಿಸಲಿ . ಪ್ರತಿ ದಿನ ಹೊಸದೊಂದು ಹೂ ಅರ್ಪಿಸಲಿ. ಅದು ನಮಗೆ ಹೆಮ್ಮೆಯ ವಿಚಾರ.
-ಸ್ವಾತಂತ್ರ್ಯ ವೀರ ಸಾವರ್ಕರ್ ( ಮಗ ತೀರಿಕೊಂಡಾಗ ಹೇಳಿದ ಮಾತು)
ಅಖಂಡವಾಗದೆ ಮಣ್ಗೂಡಿದರೂ ಚಿಂತೆಯಿಲ್ಲ . ನಿನ್ನ ಸೇವೆಗೈಯ್ಯುತ್ತೇವೆಂಬ ಶಪಥವನ್ನು ನಾವು ಪೂರ್ಣಗೊಳಿಸಿದ್ದೇವೆ . ಅದೇ ಹೆಮ್ಮೆ.  ನಾವು ಆಲೋಚಿಸಿ ಈ ಹಾದಿ ಹಿಡಿದಿದ್ದೇವೆ.  ಎಲ್ಲದರ ಅರಿವಿದ್ದೆ ವೀರಕಂಕಣ ತೊಟ್ಟಿದ್ದೇವೆ.
-ಸ್ವಾತಂತ್ರ್ಯ ವೀರ ಸಾವರ್ಕರ್
ಸಿಂಧೂ ಉಗಮಸ್ಥಾನದಿಂದ ಹಿಡಿದು ದಕ್ಷಿಣದ ಸಾಗರದವರೆಗಿನ ಭಾರತ ಭೂಮಿಯನ್ನು ಪಿತೃಭೂಮಿ ಹಾಗೂ ಪುಣ್ಯಭೂಮಿ ಎಂದು ಕಾಣುವವನೇ “#ಹಿಂದುತ್ವ#
 -ಸ್ವಾತಂತ್ರ್ಯ ವೀರ ಸಾವರ್ಕರ್
ದೇಶಭಕ್ತಿಯ ಅಪರಾಧಕ್ಕಾಗಿ ವಿದ್ಯಾಲಯವೊಂದರ ಹಾಸ್ಟೆಲ್ಲಿನಿಂದ ಹೊರದಬ್ಬಲ್ಪಟ್ಟ ಮೊದಲ ವಿದ್ಯಾರ್ಥಿ #ಸಾವರ್ಕರ್.
ಹುಳುಗಳಂತೆ ಹುಟ್ಟುತ್ತಾರೆ, ಬದುಕಲಿಕ್ಕಾಗಿ ಬದುಕುತ್ತಾರೆ.
ಯಾರು ದೇಶಕ್ಕಾಗಿ ಸಾಯುತ್ತಾರೋ ಅವರು ಮಹಾಪುರುಷರ ಸಾಲಿಗೇರುತ್ತಾರೆ.
-ಸ್ವಾತಂತ್ರ್ಯ ವೀರ ಸಾವರ್ಕರ್
ರಾಜಕಾರಣ ಹಿಂದುತ್ವ ಪ್ರೇರಿತವಾಗಬೇಕು, ಹಿಂದು ಸಮಾಜದ ಸೈನಿಕೀಕರಣವಾಗಬೇಕು.
-ಸ್ವಾತಂತ್ರ್ಯ ವೀರ ಸಾವರ್ಕರ್
ಸ್ವಾತಂತ್ರ್ಯಾ ನಂತರ ಕ್ರಾಂತಿಕಾರಿಗಳ ನೆನಪೇ ಉಳಿಬಾರದೆಂದು ಬಯಸಿದ ಆ ದೇಶದ್ರೋಹಿ ನೆಹರೂವಿನ ಸರ್ಕಾರ ಅಂಡಮಾನಿನ ಸೆಲ್ಯುಲಾರ್ ಜೈಲನ್ನು ನಿರ್ನಾಮ ಮಾಡಬೇಕೆಂದು ಕೊಂಡಿತ್ತು.
ಅಂದಹಾಗೆ ಆ ಅಂಡಮಾನ್ ಸೆಲ್ಯುಲಾರ್ ಜೈಲ್ ಸಾವರ್ಕರ್ ಅವರನ್ನು ಬಂಧಿಸಿಟ್ಟಿದ್ದ ಜೈಲು. ಭಾರತೀಯರ ಶ್ರದ್ಧಾಕೇಂದ್ರ.
ಆದ ಕಾರಣವೇ ನೆಹರೂ ಅದನ್ನು ನಿರ್ನಾಮ ಮಾಡಲು ಬಯಸಿದ್ದ.
“ದೇಶಭಕ್ತಿಯ ಈ ವ್ರತವನ್ನು ನಾವು ಕಣ್ಣುಜ್ಜಿ ಸ್ವೀಕರಿಸಿಲ್ಲ.  ಇತಿಹಾಸದ ಪ್ರಖರ ಬೆಳಕಿನಲ್ಲಿ ಈ ಮಾರ್ಗವನ್ನು ಪರೀಕ್ಷಿಸಿದ್ದೇವೆ. ದೃಢಪ್ರತಿಜ್ಞೆಯೊಂದಿಗೆ ಈ ದಿವ್ಯಾಗ್ನಿಯಲ್ಲಿ ಭಸ್ಮಗೊಳ್ಳುವ ನಿಶ್ಚಯ ಮಾಡಿದ್ದೇವೆ. ಆತ್ಮ ಬಲಿದಾನದ ವ್ರತವನ್ನು ನಾವು ಸ್ವೀಕರಿದ್ದೇವೆ.”
-ಸ್ವಾತಂತ್ರ್ಯ ವೀರ ಸಾವರ್ಕರ್
ಜಗತ್ತಿನಲ್ಲಿ ಎಲ್ಲೂ ಹಾಳೆಯ ಮೇಲೆ ಸ್ವಾತಂತ್ರ್ಯ ಬಂದಿಲ್ಲ, ಬರುವುದೂ ಇಲ್ಲ.  ಬಂದೂಕಿನಿಂದ ಯೋಜನೆ ಮಂಡಿಸಿದಾಗ ಮಾತ್ರ ನೀವು ಸ್ವಾತಂತ್ರ್ಯ ಪಡೆಯಬಲ್ಲಿರಿ.
-ಸ್ವಾತಂತ್ರ್ಯ ವೀರ ಸಾವರ್ಕರ್
ಎರಡೆರಡು ಆಜನ್ಮ ಶಿಕ್ಷೆ ಪಡೆದಿರುವ ಜಗತ್ತಿನ ಮೊದಲ ಕೈದಿ #ಸಾವರ್ಕರ್.
ಸಾವರ್ಕರ್ ನಿಧನರಾದಾಗ ಲೋಕಸಭೆ ಅವರಿಗೆ ಗೌರವಾರ್ಪಣೆ ಮಾಡಬೇಕೆಂಬ ಪ್ರಸ್ತಾವನೆ ಬಂದಾಗ ಅದನ್ನು ಆಗಿನ ದೇಶದ್ರೋಹಿ ನೆಹರು ಪೋಷಿತ ಸಭಾಧ್ಯಕ್ಷರು ತಿರಸ್ಕರಿಸಿದರು. ಸಾವರ್ಕರ್ ಈ ಸಂಸತ್ತಿನ ಸದಸ್ಯರಾಗಿತಲಿಲ್ಲ ಎಂಬ ಕಾರಣ ನೀಡಿ. ಆದರೇ ಅದೇ ಸಂಸತ್ತು ಸದಸ್ಯರಲ್ಲದ ಗಾಂಧೀಜಿಗು, ಈ ದೇಶದವನೇ ಅಲ್ಲದ ಸ್ಟಾಲಿನ್ನನಿಗೂ ಗೌರವಾರ್ಪಣೆ ಮಾಡಿತ್ತು.
ಪ್ರಚ್ಛನ್ನ ಸಮರ ಸಾಕು, ಪ್ರತ್ಯಕ್ಷ ಯುದ್ಧದತ್ತ ಹೆಜ್ಜೆ ಹಾಕು.
-ಸ್ವಾತಂತ್ರ್ಯ ವೀರ ಸಾವರ್ಕರ್
ನಮ್ಮ ದೇಶ ದಾಸ್ಯದ ಕೂಪದಲ್ಲಿ ನರಳುತ್ತಿದೆವ. ನಾನು ಹೊರದೇಶಕ್ಕೆ ಹೋಗುತ್ತಿರುವ ಉದ್ದೇಶ ಒಂದೇ, ಹಿಂದುಸ್ಥಾನದ ಋಣ ತೀರಿಸಲು.
-ಸ್ವಾತಂತ್ರ್ಯ ವೀರ ಸಾವರ್ಕರ್
ನಾವು ರಾಮಾಯಣ, ಭಾಗವತಗಳನ್ನು ಪಾರಾಯಣ ಮಾಡುವಂತೆ , ಸ್ವಾತಂತ್ರ್ಯ ಲಕ್ಷ್ಮಿಯ ಇತಿಹಾಸವನ್ನು ಪಾರಾಯಣ ಮಾಡಬೇಕು.
-ಸ್ವಾತಂತ್ರ್ಯ ವೀರ ಸಾವರ್ಕರ್
ಸಾವರ್ಕರ್ ಅನುಭವಿಸಿದಷ್ಟು ಕಷ್ಟ, ಕೋಟಲೆಗಳನ್ನು, ದೀರ್ಘಕಾಲದ ಕಠಿಣ ಕಾರಾಗೃಹವನ್ನು ಅನುಭವಿಸಿದವರು ಭಾರತದಲ್ಲಿರಲಿ ,ಜಗತ್ತಿನಲ್ಲಿಯೇ ವಿರಳ. ಎಲ್ಲವೂ ದೇಶಕ್ಕಾಗೇ.
ಯಾವಾಗ ಕಣ್ಣು ತೆರೆಯುತ್ತೋ ಆಗ ಭೂಮಿ ಹಿಂದೂಸ್ಥಾನದಾಗಿರಲಿ
ಯಾವಗ ಕಣ್ಣು ಮುಚ್ಚುತ್ತೋ.. ಆಗ ವಿಚಾರ ಹಿಂದೂಸ್ಥಾನದಾಗಿರಲಿ
ನಾನು ಸತ್ತೋದರು ಚಿಂತಯಿಲ್ಲ  ಆದರೆ ಸಾಯೋವಾಗಲು ಮಣ್ಣು  ಹಿಂದೂಸ್ಥಾನದಾಗಿರಲಿ. ….
-ಸ್ವಾತಂತ್ರ್ಯ ವೀರ ಸಾವರ್ಕರ್
ಸಾವರ್ಕರ್ ಅವರ ಹಿತೈಷಿಗಳು ಕಾಂಗ್ರೆಸ್ಸನ್ನು ಸೇರುವಂತೆ ಕೇಳಿಕೊಂಡಾಗ ಸಾವರ್ಕರ್ ಹೇಳ್ತಾರೆ.
ನಾನು ಕಾಂಗ್ರೆಸ್ಸಿನ ಅನುಯಾಯಿಗಲು ಒಪ್ಪಿದರೆ ಆತ್ಮ ದ್ರೋಹಿಯು, ರಾಷ್ಟ್ರದ್ರೋಹಿಯು ಆಗಿರುತ್ತಿದ್ದೆ.
ನಿಮಗೆಲ್ಲ ಶತ್ರು ಯಾರೆಂದು ಗೊತ್ತಿದೆ. ಈಗ ನೇರವಾಗಿ ಸೈನ್ಯಕ್ಕೆ ಸೇರಿ. ಸರಿಯಾದ ಸಮಯಕ್ಕೆ ಆಯುಧಗಳನ್ನು ಶತ್ರುವಿನಡೆಗೆ ತಿರುಗಿಸಿ ಅಷ್ಟೇ !!
ಒಪ್ಪಂದಗಳ ಬಗ್ಗೆ ಚಿಂತಿಸಬೇಡಿ. ಆ ಒಪ್ಪಂದಗಳನ್ನು ತಿರುಗಿಸಿದರೆ ಅದು ಬರಿಯ ಹಾಳೆ. ಅಲ್ಲಿ ಹೊಸದೊಂದು ಒಪ್ಪಂದ ಬರೆದರಾಯಿತು!
ಜಗತ್ತಿನಲ್ಲಿ ಎಲ್ಲೂ ಹಾಳೆಯ ಮೇಲೆ ಸ್ವತಂತ್ರ ಬಂದಿಲ್ಲ, ಬರುವುದೂ ಇಲ್ಲ.
( ಭಾರತೀಯರಿಗೆ ಸೈನ್ಯಕ್ಕೆ ಸೇರಲು ಸಾವರ್ಕರ್ ಪ್ರೇರೆಪಿಸುತ್ತಿದ್ದ ಮಾತುಗಳು )
ಸಾವರ್ಕರ್ ಸಿಕ್ಕ ಸಿಕ್ಕಲ್ಲಿ ಗುಂಡು ಹೊಡೆದು ಅದನ್ನೆ ಕ್ರಾಂತಿ ಎನ್ನುತ್ತಿರಲಿಲ್ಲ. ,
ಲೇಖನಿ ಹಿಡಿದರೆ ಆ ಕಾಲಘಟ್ಟದ ಮಹಾಮಹಿಮರ ಲೇಖಕರನ್ನು ಮೀರಿಸುವಷ್ಟು ಪ್ರತಿಭಾವಂತ,  ಪಿಸ್ತೂಲು ಹಿಡಿದರೆ ಎದುರಾಳಿಗಳ ರಕ್ತವೇ ತಣ್ಣಗಾಗುತ್ತಿತ್ತು,  ಮಾತಿಗೆ ನಿಂತರೆ ಮೈಯೆಲ್ಲಾ ಕಿವಿಯಾಗಿ ಕೇಳಬೇಕೆನ್ನಿಸುವ ಮಧುರ ದನಿ.

“ಎಲೈ ಮೃತ್ಯುವೇ, ಬರುವುದಿದ್ದರೆ ನೀನೊಬ್ಬನೇ ಬಾ, ನಿನ್ನೊಂದಿಗೆ ರೋಗದ ಸೇನೆಯನ್ನು ಕರೆತಂದು ನನ್ನನ್ನು ನಿಷ್ಕ್ರಿಯನನ್ನಾಗಿ ಮಾಡದಿರು! ನಾನು ಉಸಿರಾಡುವ ಒಂದೊಂದು ಕ್ಷಣವೂ ಮಾತೃಭೂಮಿಯ ಶ್ರೇಯಸ್ಸಿಗಾಗಿಯೇ ಮುಡಿಪು. ಧ್ಯೇಯವಿಲ್ಲದ, ತ್ಯಾಗವಿಲ್ಲದ, ಬಲಿದಾನವಿಲ್ಲದ ರೋಗಕೂಪದಿಂದ ದೊರಕುವ ಯಕಃಶ್ಚಿತ್ ಸಾವು ನನಗೆ ಬೇಡ.”
– ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್
Mahesh Hiremath

Veerakesari 21:30
​ಕಣಿವೆ ರಾಜ್ಯ ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಕುಟುಂಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಾರತೀಯ ಸೇನಾಧಿಕಾರಿಯನ್ನು ಅಪಹರಿಸಿ ಗುಂಡಿಟ್ಟು ಕೊಲ್ಲಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ನಲ್ಲಿ ಸೇನಾಧಿಕಾರಿ ಉಮರ್ ಫಯಾಜ್ ಮೃತದೇಹ ಪತ್ತೆಯಾಗಿದ್ದು, ದೇಹಕ್ಕೆ ಹಲವು ಬಾರಿ ಗುಂಡಿಕ್ಕಲಾಗಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಉಮರ್ ಫಯಾಜ್ ಅವರು  ಕುಟುಂಬದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಈ ವೇಳೆ ಅವರು ಏಕಾಂಗಿಯಾಗಿದ್ದ ಸಂದರ್ಭದಲ್ಲಿ ಉಗ್ರರು ಅವರನ್ನು ಅಪಹರಿಸಿದ್ದಾರೆ. ಬಳಿಕ ಅವರನ್ನು ಗುಂಡಿಟ್ಟು ಕೊಂದು ಶೋಪಿಯಾನ್ ನಲ್ಲಿ ಬಿಸಾಡಿ  ಹೋಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಕಳೆದ ವಾರವಷ್ಟೇ ಇದೇ ಶೋಪಿಯಾನ್ ನಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಹಲವು ನಾಗರಿಕರು ಗಾಯಗೊಂಡಿದ್ದರು. ಈ ಘಟನೆ ಬಳಿಕ ಶೋಪಿಯಾನ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಾರಿ ಪ್ರಮಾಣದ  ಸೇನಾ ಶೋಧ ಕಾರ್ಯ ನಡೆಸಲಾಗಿತ್ತು. ಇದೀಗ ಮತ್ತೆ ಉಗ್ರರು ನುಸುಳಿದ್ದು, ಸೇನೆ ವಿರುದ್ಧ ದಾಳಿ ಮಾಡುತ್ತಿದ್ದಾರೆ.
Source - Kannada Prabha
loading...

Veerakesari 04:40

ಇಡೀ ಪ್ರಪಂಚದಲ್ಲಿಯೇ ಅತ್ಯಂತ ಶಕ್ತಿವಂತ, ಸಂಪನ್ನ ದೊರೆ ಎಂದು ಕರೆಸಿಕೊಳ್ಳುತ್ತಿದ್ದ ಅಕ್ಬರ್. ಅಂತಹ ಅಕ್ಬರನಿಗೆ ಸಡ್ಡು ಹೊಡೆದು ನಿಂತ ಸ್ವಾಭಿಮಾನಿ ಸಿಂಹವೇ ರಾಣಾಪ್ರತಾಪ.
ಎಂತಹ ಸ್ಥಿತಿ ಬಂದರೂ ರಜಪೂತರು ತಲೆ ಬಾಗುವದಿಲ್ಲಾ ಕೊನೆ ಉಸಿರಿರೋವರೆಗೂ ತಾಯ್ನಾಡು ಮಾತೃಭೂಮಿ ತಮ್ಮ ಧರ್ಮವನ್ನು ರಕ್ಷಿಸುತ್ತಾರೆ. ಹೀಗೆ ಗುಡುಗಿದ್ದು ಭಾರತೀಯ ಇತಿಹಾಸದ ಅಪ್ರತಿಮ ಶೂರ.

ಮಹಾರಾಣಾ ಪ್ರತಾಪ ಸಿಂಹ :

9ಮೇ ೧೫೪೦ ರಲ್ಲಿ ರಾಜಸ್ಥಾನದ ಮೇವಾಡದ ಸೂರ್ಯವಂಶದಲ್ಲಿ ಜನಿಸಿದ ಪ್ರತಾಪ್ ಸಿಂಹ ,ತನ್ನ ವಂಶದಲ್ಲಿ ನೀಡುವ ದಕ್ಷ ಮತ್ತು ಶೌರ್ಯ ಪರಾಕ್ರಮಿಗೆ ನೀಡುವ ರಾಣಾ ಹೆಸರಿನೊಂದಿಗೆ “ಮಹಾರಾಣ” ಎಂದೆನಿಸಿಕೊಂಡ.
ಬಾಲ್ಯದಿಂದಲೂ ಶೂರತನಕ್ಕೆ ಚತುರತೆಗೆ ಹೆಸರಾದ ಮಹಾರಾಣಾ ಪ್ರತಾಪಜೀ 1568 ರಿಂದ 1597 ರವರೆಗೆ 29 ವರ್ಷ ಕಾಲ ಸೂರ್ಯವಂಶಿಯ ಸಿಸೋದಿಯಾ ರಾಜವಂಶದ ರಜಪೂತ ಮನೆತನದ ಹೆಮ್ಮೆಯ ಪ್ರಜಾಹಿತ ರಾಜನಾಗಿ ಹಿಂದೂಧರ್ಮದ ರಕ್ಷಕನಾಗಿ ರಾಜ್ಯಭಾರ ಮಾಡಿದನು.
ಆ ಸಮಯದಲ್ಲಿ ಬಹುತೇಕ ಇಡೀ ಉತ್ತರಭಾರತವನ್ನೇ ತನ್ನ ಕೈವಶ ಮಾಡಿಕೊಂಡಿದ್ದ ಅಕ್ಬರ್. ಆದರೆ ಆತನಿಗೆ ಚಿಕ್ಕ ಮೇವಾಡವನ್ನು ತನ್ನ ತೆಕ್ಕೆಗೆ ಕೊಳ್ಳಲಾಗಿರಲಿಲ್ಲ. ಅಕ್ಬರನಾದರೋ ಅಸಂಖ್ಯ ಸೇನೆ, ಸಿರಿ-ಸಂಪತ್ತಿನಿಂದ ಮೆರೆಯುತ್ತಿದ್ದ ಶ್ರೀಮಂತ ಚಕ್ರವರ್ತಿ.
ಮಹಾರಾಣಾ ಪ್ರತಾಪ ಸಿಂಹ ಹೆಸರಿಗೆ ಅವನು ರಾಜ. ಆದರೆ ಆಳಲು ರಾಜ್ಯವಿರಲಿಲ್ಲ. ರಾಜ್ಯವನ್ನು ಗೆದ್ದುಕೊಳ್ಳಲು ಯುದ್ಧ ಮಾಡೋಣವೆಂದರೆ ಸೈನ್ಯವಿಲ್ಲ. ಸೈನ್ಯ ಕಟ್ಟೋಣವೆಂದರೆ ಕೈಯಲ್ಲಿ ಹಣವಿಲ್ಲ. ಯಾರಾದರೂ ರಾಜರ ಸಹಾಯ ಕೇಳೋಣವೆಂದರೆ ಅವರೆಲ್ಲಾ ನಾಚಿಕೆ, ಸ್ವಾಭಿಮಾನಗಳನ್ನು ತೊರೆದು ಅಕ್ಬರನಿಗೆ ಶರಣಾಗಿ ಅವನಿಗೆ ಡೊಗ್ಗು ಸಲಾಮು ಹೊಡೆಯುತ್ತಾ ತಮ್ಮ ರಾಜ್ಯ-ಸಿರಿ-ಸ್ತ್ರೀಯರನ್ನು ಅಕ್ಬರನಿಗೆ ಗಿರವಿ ಇಟ್ಟಿದ್ದಾರೆ.
ಪ್ರತಾಪನೋ ಬರಿಗೈ ದಾಸ. ಆವರೆಗೆ ಮೇವಾಡದ ರಾಣಾರಿಗೆ ಬೆಂಬಲವಾಗಿ ನಿಂತಿದ್ದ ಜೋಧಪುರ, ಅಂಬೇರ್, ಬಿಕಾನೀರ್, ಬುಂದೀ ಸಾಮ್ರಾಜ್ಯಗಳ ರಾಜರೆಲ್ಲರೂ ಅಕ್ಬರನ ಪಕ್ಷವಹಿಸಿದ್ದರು. ಅರಣ್ಯವೇ ಅವನಿಗೆ ಅರಮನೆ. ಯಾವಾಗ ಎಲ್ಲಿಂದ ದಾಳಿ ನಡೆಯುತ್ತದೋ ಎಂದು ಎಚ್ಚರಿಕೆಯಿಂದ ಗಮನಿಸುತ್ತಾ, ಮುನ್ಸೂಚನೆ ಇಲ್ಲದೆಯೇ ವಾಸಸ್ಥಳ ಬದಲಾಯಿಸಬೇಕಾದ ಪರಿಸ್ಥಿತಿ. ಕೆಲವೊಮ್ಮೆ ಅಡುಗೆ ಮಾಡಲು ಯಾವ ಧಾನ್ಯವೂ ಸಿಗುತ್ತಿರಲಿಲ್ಲ. ಕಾಡಿನಲ್ಲಿ ಏನಾದರೂ ಸಿಕ್ಕರೆ ಸರಿ, ಇಲ್ಲದಿದ್ದಲ್ಲಿ ಬರೀ ಹೊಟ್ಟೆಯೇ ಗತಿ. ಒಮ್ಮೊಮ್ಮೆ ಊಟಕ್ಕೆ ಕುಳಿತ ಕೂಡಲೇ ಶತ್ರುಗಳು ಬರುವುದನ್ನು ತಿಳಿದು ಎತ್ತಿದ ತುತ್ತನ್ನು ಬಾಯಲ್ಲಿಡದೆ ಕರದಲ್ಲಿ ಖಡ್ಗ ಹಿರಿದು ಬರಿದೇ ಓಡಬೇಕಾದ ದುಃಸ್ಥಿತಿ. ಗುಹೆಗಳಲ್ಲೋ, ಕಣಿವೆಗಳಲ್ಲೋ ಮಡದಿ ಮಕ್ಕಳನ್ನು ಬಚ್ಚಿಡಬೇಕಾದ ಅನಿವಾರ್ಯತೆ. ಅರಾವಳಿ ಬೆಟ್ತಗಳ ಮರಗಳಿಗೆ ರಾಜಕುಮಾರರ ಉಯ್ಯಾಲೆಗಾಗಿ ಕಟ್ಟಿದ ಕೊಕ್ಕೆಗಳು ಇಂದಿಗೂ ಇವೆ. ಒಮ್ಮೆಯಂತೂ ಐದು ಬಾರಿ ಒಲೆ ಹೊತ್ತಿಸಬೇಕಾಯಿತು. ದೇಶಭಕ್ತ ವೀರರನ್ನು, ವನವಾಸಿ ಭಿಲ್ಲರನ್ನು ಸಂಘಟಿಸಿ ಶತ್ರು ಸೈನ್ಯದ ಮೇಲೆ ಮುಗಿಬಿದ್ದು ಪ್ರಚಂಡವಾಗಿ ಹೋರಾಡಿದರೂ ನೂರು-ಸಾವಿರ ಸಂಖ್ಯೆಯಲ್ಲಿ ಅವನ ಸೈನ್ಯಕ್ಕೆ ನಷ್ಟವಾಗುತ್ತಿತ್ತು. ಆ ನಷ್ಟವನ್ನು ಭರಿಸಲು ಮತ್ತೆ ಸಮಯ ಹಿಡಿಯುತ್ತಿತ್ತು.
ಪ್ರತಾಪನನ್ನು ತನ್ನ ಕಡೆಗೆ ಸೆಳೆದುಕೊಳ್ಳಲು ಅಕ್ಬರ್ ನಾನಾ ತಂತ್ರಗಳನ್ನು ಹೂಡಿದ. ಅದಕ್ಕಾಗಿ ಯಾವ ಉಡುಗೊರೆಯನ್ನಾದರೂ ಕೊಡುವುದಾಗಿ ಪದೇ ಪದೇ ರಾಯಭಾರ ಕಳುಹಿಸಿದ. ಬೇರಾವ ಹಿಂದೂ ರಾಜರಿಗೆ ನೀಡದಂತಹ ವಿಶೇಷ ಸ್ಥಾನಮಾನ ನೀಡುವುದಾಗಿ ಪ್ರಲೋಭನೆಯೊಡ್ಡಿದ. ಪ್ರತಾಪ ಬಗ್ಗಲಿಲ್ಲ.ಎಂತಹುದೇ ಸ್ಥಿತಿಯಲ್ಲೂ ವಿದೇಶೀಯನೊಬ್ಬನಿಗೆ ತಲೆಬಾಗಲಾರೆ ಎಂದುಬಿಟ್ಟರಾಜಾ ಮಾನ್ ಸಿಂಗ್ ಅಕ್ಬರನ ರಾಯಭಾರಿಯಾಗಿ ರಾಣಾ ಪ್ರತಾಪನನ್ನು ಓಲೈಸಿ ಒಪ್ಪಿಸಲೆಂದು ಬಂದಾಗ ಪ್ರತಾಪ ಆತನೊಡನೆ ಸಹಪಂಕ್ತಿ ಭೋಜನವನ್ನು ಮಾಡದೆ ಸ್ವಾಭಿಮಾನ ಮೆರೆದ.
ಪರಿಸ್ಥಿತಿಯೊಂದಿಗೆ ರಾಜೀ ಮಾಡಿಕೊಂಡು ಅಕ್ಬರನಿಗೆ ಡೊಗ್ಗು ಸಲಾಮು ಹಾಕುತ್ತಿದ್ದ ಹಿಂದೂ ರಾಜರು, ರಾಜ ಪ್ರಮುಖರು ಕೂಡಾ ಪ್ರತಾಪನ ಧೈರ್ಯ ಸಾಹಸಗಳಿಗೆ ಹೆಮ್ಮೆ ಪಡುತ್ತಿದ್ದರು.
ಬಲಿಷ್ಟ ಮೊಗಲ್ ಸಾಮ್ರಾಜ್ಯವನ್ನು ಎದುರಿಗೆ ಹಾಕಿಕೊಂಡ ಪ್ರತಾಪ ಸಾಂಪ್ರದಾಯಿಕ ಯುದ್ಧ ತಂತ್ರವನ್ನು ಅನುಸರಿಸುತ್ತಿದ್ದರೆ ಮಿಕ್ಕ ರಾಜರಂತೆ ಅಕ್ಬರನ ಅಡಿಯಾಳಾಗಿರಬೇಕಿತ್ತೇನೋ. ಪರಿಸ್ಥಿತಿಯನ್ನನುಸರಿಸಿ ವ್ಯೂಹಗಳನ್ನು ಬದಲಾಯಿಸುತ್ತಾ, ಆತ್ಮಹತ್ಯಾ ಸದೃಶವಾದ ಹೋರಾಟದ ಪದ್ದತಿಗಳನ್ನು ವರ್ಜಿಸಿ ಪ್ರತಿಕೂಲತೆಗಳನ್ನು ಅನುಕೂಲತೆಗಳಾಗಿ ಪರಿವರ್ತಿಸಿ ಅಸಾಧಾರಣಾ ಜಾಣತನದಿಂದ, ತಾಳ್ಮೆಯಿಂದ, ಗೆರಿಲ್ಲಾ ಯುದ್ಧತಂತ್ರವನ್ನು ಅಳವಡಿಸಿದುದರಿಂದ ಪ್ರತಾಪನಿಗೆ ಅಕ್ಬರನ ಬೃಹತ್ ಸೇನೆಯನ್ನು ಕಾಲು ಶತಮಾನಗಳಿಗೂ ಅಧಿಕ ಕಾಲ ಎದುರಿಸಿ ಮಣ್ಣುಮುಕ್ಕಿಸಿ ವಿಜಯಪಥದಲ್ಲಿ ಸಾಗಲು ಸಾಧ್ಯವಾಯಿತು.
ಜೂನ್‌ 21 1576ರಂದು (ಇನ್ನೊಂದು ಲೆಕ್ಕಾಚಾರದ ಪ್ರಕಾರ ಜೂನ್‌ 18), ಈಗಿನ ರಾಜಸ್ಥಾನದಲ್ಲಿರುವ ಗೊಗುಂಡಾ ಸಮೀಪವಿರುವ ಹಲ್ಡಿಘಾಟಿಯಲ್ಲಿ ಎರಡು ಸೈನ್ಯಗಳು ಎದುರಾದವು. ಎರಡು ಸೈನ್ಯದ ನಿಖರ ಬಲಾಬಲದ ಲೆಕ್ಕಗಳಲ್ಲಿ ವ್ಯತ್ಯಾಸವಿದ್ದರೂ, ಮೊಘಲರ ಸೇನೆಯು ಪ್ರತಾಪ್‌ನ ಸೇನೆಗಿಂತ ಸಂಖ್ಯಾಬಲದಲ್ಲಿ ಮೀರಿಸಿತ್ತೆಂದು ಎಲ್ಲ ಮೂಲಗಳು ಹೇಳಿವೆ.. ರಜಪೂತಚರಿತ್ರಾಪುಟಗಳಲ್ಲಿ [[ಹಲ್ಡಿ ಘಾಟಿ ಕದನ]]ವು ಒಂದು ಐತಿಹಾಸಿಕ ಘಟನೆಯಾಗಿದ್ದು,ಯುದ್ಧವು ಕೇವಲ ನಾಲ್ಕು ಗಂಟೆಗಳಲ್ಲಿ ಕೊನೆಗೊಂಡಿತು. ಈ ಅಲ್ಪ ಅವಧಿಯಲ್ಲಿ, ಪ್ರತಾಪ್‌ನ ಕಡೆಯ ಸೈನಿಕರು ರಣರಂಗದಲ್ಲಿ ವೀರಾವೇಶದ ಸಾಹಸಕಾರ್ಯಗಳನ್ನು ಮಾಡಿದ್ದರು.
ಪ್ರತಾಪ್‌ ಸ್ವತಃ ಮಾನ್‌ ಸಿಂಗ್‌ನ ಮೇಲೆ ದಾಳಿಯನ್ನು ಮಾಡಿದನು: ಅವನ ಕುದುರೆ ಚೇತಕ್‌ ಮಾನ್‌ ಸಿಂಗ್‌ನ ಆನೆಯ ಸೊಂಡಿಲಿನ ಮೇಲೆ ಮೇಲೆ ತನ್ನ ಮುಂಗಾಲುಗಳನ್ನಿರಿಸಿತು ಮತ್ತು ಪ್ರತಾಪ್‌ ಮಾನ್‌ ಸಿಂಗ್‌ನ ಮೇಲೆ ಈಟಿಯನ್ನು ಎಸೆದನು. ಮಾನ್‌ ಸಿಂಗ್‌ ಈಟಿಗೆ ಬಲಿಯಾದ.
ಹಲ್ದೀಘಾಟ್ ನಲ್ಲಿ ಮೊಘಲರ 80ಸಾವಿರ ಯೋಧರ ಬೃಹತ್ ಸೈನ್ಯಕ್ಕೆದುರಾದಾಗ ಪ್ರತಾಪನ ಕಡೆ ಇದ್ದವರು ಬರೇ ಇಪ್ಪತ್ತು ಸಾವಿರ ಸೈನಿಕರು. ಆನೆಯ ಮೇಲೆ ಹಾರಿ ಮಾನ್ ಸಿಂಗನ ಮೇಲೆ ದಾಳಿ ಮಾಡಲು ಹೊರಟಾಗ ಪ್ರತಾಪನ ಕುದುರೆಗೆ ತೀವ್ರ ಗಾಯವಾಗಿ ಪರಿಸ್ಥಿತಿ ಬದಲಾಯಿತು.ಮಾರ್ವಾರಿ ತಳಿ ಕುದುರೆಯಾಗಿದ್ದ (ದೇಶೀಯ ಭಾರತೀಯ ತಳಿ) ಚೇತಕ್‌ ಬಿಳಿ ಕುದುರೆಯು, ಚಿಕ್ಕ ಕುತ್ತಿಗೆ, ಪೊದೆಯಂತೆ ದಟ್ಟವಾದ ಕೂದಲುಳ್ಳ ಬಾಲ, ಕಿರಿದಾದ ಬೆನ್ನು, ದೊಡ್ಡ ಕಣ್ಣುಗಳು, ಗಟ್ಟಿಮುಟ್ಟಾದ ಭುಜಗಳು, ಅಗಲವಾದ ಹಣೆ ಮತ್ತು ಎದೆಯನ್ನು ಹೊಂದಿತ್ತು. ಸುಂದರ ಮತ್ತು ಕಾವ್ಯಾತ್ಮಕವಾಗಿ ದೈವಸ್ವರೂಪಿ ಎಂದು ಪರಿಗಣಿಸಲಾದ ಈ ಕುದುರೆಯು ಸಮತೋಲಿತ ಸ್ನಾಯುಬಲದ ದೇಹ ಹೊಂದಿದ್ದು,ಜನ್ಮತಃ “ಹಾರುವ” ಕಾಲುಗಳೊಂದಿಗೆ ಅತ್ಯಂತ ಸುಂದರವಾಗಿ ಕಾಣುತ್ತಿತ್ತು. ಚೇತಕ್‌ ಅಪರೂಪದ ತೀವ್ರ ಬುದ್ಧಿವಂತಿಕೆ,ಸಂಯಮ ಮತ್ತು ಧೈರ್ಯದ ಜತೆ ಒಡೆಯನಿಗೆ ಅತೀವ ನಿಷ್ಠೆಯನ್ನು ಹೊಂದಿತ್ತೆಂದು ವರ್ಣಿಸಲಾಗಿತ್ತು.
ಮಹಾರಾಣಾ ಪ್ರತಾಪ್‌ನ ಕುದುರೆ ಚೇತಕ್‌ ಹಳ್ಡಿಘಾಟಿ ಕದನದಲ್ಲಿ ಪರಾಕ್ರಮವನ್ನು ಮೆರೆದು ಸತ್ತಾಗ, ಪ್ರತಾಪ್‌ ಅಳುತ್ತಾನೆ ಹಾಗೂ ತನ್ನ ದೇವರನ್ನು ಪ್ರಾರ್ಥಿಸುತ್ತಾನೆ.
ಮೊಗಲರಿಗೆ ಗೆಲುವು ಸಿಕ್ಕಿದರೂ ಬಹುಪಾಲು ಸೈನ್ಯ ನಾಶವಾಗಿತ್ತು. ಪ್ರತಾಪ ತನ್ನ ಸೋಲು ಅನಿವಾರ್ಯ ಎಂದು ಅರಿವಾದಾಗ ಗೋಗೋಂಡ್ ಕೋಟೆಯನ್ನು ತೆರವುಗೊಳಿಸಿದ. ಗೆಲುವಿನಿಂದ ಉಬ್ಬಿ, ಕೊಬ್ಬಿ ಮೊಗಲರು ಕೋಟೆ ಪ್ರವೇಶಿಸಿದಾಗ ಅಲ್ಲಿ ನರಪಿಳ್ಳೆಯೂ ಇರಲಿಲ್ಲ! ಮುಂದೆ ಕುಂಭಲಗಢ, ಉದಯಪುರ ಕೋಟೆಗಳನ್ನು ಗೆದ್ದು ಪ್ರತಾಪನ ಬೆನ್ನ ಹಿಂದೆ ಬಿದ್ದು ಹಲವು ರೀತಿ ಬೇಟೆಯಾಡಿದರೂ ಸ್ವತಃ ತಾನೇ ಅಜ್ಮೀರ್ ನಲ್ಲಿ ಕುಳಿತು ಮೇಲ್ವಿಚಾರಣೆ ಮಾಡುತ್ತಾ ಮಗ ಸಲೀಂ ಸಹಿತ ಭಾರೀ ಸರದಾರರ ಸೈನ್ಯವನ್ನು ಉಪಯೋಗಿಸಿದರೂ ಪ್ರತಾಪನ ಎದುರು ಅಕ್ಬರನ ಆಟ ನಡೆಯಲಿಲ್ಲ. ಆಕ್ರಮಿಸಿದ ಕೋಟೆಗಳಲ್ಲಿ ನೆಲೆಸೋಣವೆಂದರೆ ಅನ್ನ-ನೀರು ಸಿಗುತ್ತಿರಲಿಲ್ಲ. ಕೋಟೆಯಿಂದ ಹೊರ ಬರೋಣವೆಂದರೆ ಪ್ರತಾಪ ಯಾವಾಗ ಯಾವ ದಿಕ್ಕಿನಿಂದ ಯಾವ ರೀತಿ ಆಕ್ರಮಣ ಮಾಡುತ್ತಾನೋ ತಿಳಿಯದ ಸಂಧಿಗ್ಧ ಸ್ಥಿತಿ. ಹಿಂದೆ ಹಿಂದೂ ರಾಜರ ಕೋಟೆಗಳಿಗೆ ಮುತ್ತಿಗೆ ಹಾಕಿ ಹಿಂಸಿಸುತ್ತಿದ್ದ ಮೊಘಲರ ತಂತ್ರವನ್ನು ಅವರಿಗೆ ತಿರುಗಿ ಪ್ರಯೋಗಿಸಿದ ಪ್ರತಾಪ! ತನ್ನ ರಾಜ್ಯದ ಪ್ರಜೆಗಳನ್ನು ಪರ್ವತ ಪ್ರದೇಶಗಳಿಗೆ ತೆರಳುವಂತೆ ಮಾಡಿದುದರಿಂದ ಮೊಘಲ್ ಸೈನ್ಯ ಅನ್ನ ನೀರು ಸಿಗದೆ ತಳಮಳಿಸಿತು. ದಿಲ್ಲಿಯಿಂದ ಬಂದ ಸಾಮಗ್ರಿಗಳಾಗಲೀ ಗುಜರಾತ್ ಬಂದರಿನಿಂದ ದೆಹಲಿಗೆ ಹೋಗುತ್ತಿದ್ದ ಅಮೂಲ್ಯ ವಸ್ತುಗಳೆಲ್ಲಾ ಪ್ರತಾಪನ ಗೆರಿಲ್ಲಾ ಸೈನ್ಯದ ವಶವಾಗುತ್ತಿತ್ತು.
ಹೀಗೆ ದಶಕಗಳ ಪರ್ಯಂತ ಹೋರಾಡಿದರೂ ಪ್ರತಾಪನನ್ನು ಗೆಲ್ಲದೆ ವಿಫಲನಾದ ಅಕ್ಬರ್  ಪ್ರತಾಪನನ್ನು ಮಣಿಸುವ ವಿಚಾರವನ್ನೇ ಕೈಬಿಟ್ಟ. ಅಷ್ಟರಲ್ಲಾಗಲೇ ಕಳೆದುಕೊಂಡ ಎಲ್ಲಾ ಕೋಟೆಗಳನ್ನು ವಶಪಡಿಸಿಕೊಂಡು, ಅಂಬೇರನ್ನು ಜಯಿಸಿ ಮಾನಸಿಂಗನ ದರ್ಪವನ್ನು ಮುರಿದು ಚಾವಂದ್ ಅನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಮೇವಾಡಕ್ಕೆ ಮತ್ತೆ ಅಧಿಕಾರವನ್ನು ಒದಗಿಸಿಕೊಟ್ಟಿದ್ದ ಪ್ರತಾಪ. ಹಾಳುಬಿದ್ದಿದ್ದ ಊರುಗಳಲ್ಲೆಲ್ಲಾ ಜನವಸತಿ ಆರಂಭವಾಯಿತು. ಪಾಳುಬಿದ್ದಿದ್ದ ಹೊಲಗಳು ನಳನಳಿಸಿದವು. ವ್ಯಾಪಾರ ವಹಿವಾಟುಗಳೆಲ್ಲಾ ಆರಂಭಗೊಂಡು ನಗರಗಳಲ್ಲಿ ಸಿರಿ ಸಂಪತ್ತು ನೆಲೆಗೊಂಡಿತು. ಕಲಾ ಪೋಷಕನಾಗಿ, ಭವ್ಯಕಟ್ಟಡಗಳ ನಿರ್ಮಾತೃವಾಗಿ, ದಕ್ಷ ಪ್ರಜಾಪರಿಪಾಲಕನಾಗಿ ತನ್ನ ಐವತ್ತೇಳನೆಯ ವಯಸ್ಸಿನಲ್ಲಿ29 ಜನೇವರಿ 1597ರಂದು ಇಹಲೋಕ ತ್ಯಜಿಸಿದ ರಾಣಾಪ್ರತಾಪ. ಆದರೆ ಚಿತ್ತೋಡನ್ನು ಗೆಲ್ಲುವ ಅವನ ಕನಸು ಕನಸಾಗಿಯೇ ಉಳಿದಿತ್ತು. ಮರಣ ವಾರ್ತೆ ಕೇಳಿದಾಗ ಮತಾಂಧ ಅಕ್ಬರನೇ ಸ್ವತಃ ಕಣ್ಣೀರಿಟ್ಟಿದ್ದನೆಂದರೆ ರಾಣಾನ ಪ್ರತಾಪ ಎಷ್ಟಿದ್ದಿರಬಹುದು?
ಯಾವ ರೀತಿಯಿಂದ ನೋಡಿದರೂ ಪ್ರತಾಪ ಈ ರಾಷ್ಟ್ರ ಪೂಜಿಸಬೇಕಾದ ಮಹಾಪುರುಷ. ಸ್ವಾತಂತ್ರ್ಯಾಕಾಂಕ್ಷೆ, ಸ್ವಾಭಿಮಾನ, ರಾಷ್ಟ್ರೀಯ ಭಾವನೆ, ಭಾರತದ ಆಶೋತ್ತರ-ಧ್ಯೇಯೋದ್ದೇಶಗಳಿಗೆ ಆತ ಪ್ರತೀಕ. ಪ್ರತಾಪನಿಗಿದ್ದ ಧೈರ್ಯ-ಸಾಹಸ-ಸ್ವಾಭಿಮಾನ-ಸ್ಥೈರ್ಯ-ಮುನ್ನುಗ್ಗುವ ಸ್ವಭಾವ-ಸಮರ ನೈಪುಣ್ಯತೆ-ದಕ್ಷತೆ ಉಳಿದ ಹಿಂದೂ ರಾಜರಲ್ಲಿ ತಿಲಾಂಶವಾದರೂ ಇದ್ದಿದ್ದರೆ ನಮ್ಮ ಚರಿತ್ರೆಯೇ ಬದಲಾಗುತ್ತಿತ್ತು.
ಪ್ರಾಣ ಹೋದರೂ ಸರಿಯೆ, ವಿದೇಶೀಯನೊಬ್ಬನಿಗೆ ತಲೆಬಾಗಲಾರೆನೆಂಬ ಪ್ರತಿಜ್ಞೆ ಇತ್ತು. ಹಾಗಾಗಿಯೇ ಆತ ಕಾಡುಮೇಡುಗಳಲ್ಲಿ ಅಲೆಯುತ್ತಾ, ಬೆಟ್ಟಗಳಿಂದ ಬೆಟ್ಟಗಳಿಗೆ ಹಾರುತ್ತಾ, ಹಣ್ಣು ಹಂಪಲುಗಳಿಂದ ಸಂಸಾರದ ಹೊಟ್ಟೆ ಹೊರೆಯುತ್ತಾ, ಕ್ರೂರ ಮೃಗಗಳು ಅವುಗಳಿಗಿಂತಲೂ ಕ್ರೂರರಾದ ಮತಾಂಧ ರಾಕ್ಷಸರಿಂದ ಎಳೆಯ ಮಗು ಅಮರನನ್ನು ಕಾಪಾಡುತ್ತಾ, ಕಾಲು ಶತಮಾನಗಳ ಕಾಲ, ಇಡೀ ಉತ್ತರಾಪಥವನ್ನು ತನ್ನ ಪದಾಕ್ರಾಂತ ಮಾಡಿದ್ದ ಬೃಹತ್ ಮೊಘಲ್ ಸಾಮ್ರಾಜ್ಯಕ್ಕೆ ಸಿಂಹ ಸ್ವಪ್ನನಾಗಿ ನಿಂತು ಅಜೇಯನಾಗಿಯೇ ಉಳಿದು ರಾಷ್ಟ್ರದ ಪ್ರಜೆಗಳ ಹೃದಯದಲ್ಲಿ ಆರಾಧಿಸಲ್ಪಟ್ಟ.
ರಾಣಾ ಪ್ರತಾಪನ ಜೀವನದ ಕೆಲವು ಪ್ರಮುಖ ಘಟನಾವಳಿ…….
  • ಚಿಟಿಕೆ ಹೊಡೆಯುವಷ್ಟರಲ್ಲಿ ಮೆಚ್ಚಿನ ಕುದುರೆ ‘ಚೇತಕ’ ಮೇಲೆ ಕುಳಿತು ಶತ್ರು ಸೈನ್ಯದ ರುಂಡ ಚಂಡಾಡುತ್ತಿದ್ದ.
  • ಪ್ರತಾಪರ ಬರ್ಚಿ ತೂಕ್ ಬರೋಬ್ಬರಿ 80 ಕೆಜಿ ರಕ್ಷಾ ಕವಚ 80 ಕೆಜಿ ಒಟ್ಟಾರೆ ಕವಚ ಬರ್ಚಿ ಖಡ್ಗ ಢಾಲ್ ಸೇರಿ 270 ಕೆಜಿ ಇತ್ತು ಈಗಲೂ ಇವುಗಳನ್ನು ಉದಯಪುರದ ರಾಜಮನೆತನದ ಸಂಗ್ರಹಾಲಯದಲ್ಲಿ ಕಾಣಬಹುದು.
  • ಅಕ್ಬರ್ ಹೇಳಿದ್ದನಂತೆ ಒಂದು ವೇಳೆ ಮಹಾರಾಣಾ ಪ್ರತಾಪ ನನಗೆ ಶಿರಬಾಗಿದರೆ ಅರ್ಧ ಹಿಂದೂಸ್ತಾನದ ಉಸ್ತುವಾರಿ ನಿಡುತ್ತೆನೆ ನನ್ನ ಆಡಳಿತದ ಕೆಳಗೆ ರಾಜ್ಯಭಾರ ಮಾಡಲಿ ಎಂದು ಆಗ ಮಹಾರಾಣಾ ಎಂತಹ ಸ್ಥಿತಿ ಬಂದರೂ ರಜಪೂತರೂ ತಲೆ ಬಾಗುವದಿಲ್ಲ ಕೊನೆ ಉಸಿರಿರೋವರೆಗೂ ಮಾತೃಭೂಮಿ ರಕ್ಷಕನಾಗುತ್ತಾರೆ ಹೊರತು ಗುಲಾಮರಾಗೊಲ್ಲ ಎಂದು ಖಡಕ್ ಉತ್ತರ ನೀಡಿದ್ದನಂತೆ.
  • ಪ್ರತಾಪ ಸಿಂಹ್ 20 ವರ್ಷ್ ತನ್ನ ಮಹಲ್ ರಾಜವೈಭೋಗ ತೊರೆದು ಸೈನ್ಯ ಕಟ್ಟಲು ಕಾಡುಮೇಡು ಸುತ್ತಿದನು ರಾಜನ ಈ ಸ್ಥಿತಿಗೆ ಮರುಗಿ ‘ಲೋಹಾರ’ ಜನಾಂಗದ ಕೆಲವರು ತಮ್ಮ ಮನೆ ತೊರೆದು ಕಾಡಿನಲ್ಲಿ ರಾಜನಿಗಾಗಿ ಖಡ್ಗ ಬರ್ಚಿ ತಯಾರಿಸಲೂ ಹಗಲೂ ರಾತ್ರಿ ಶ್ರಮಿಸಿದರು ಈ ಜನಾಂಗ ಇಂದಿಗೂ ರಾಜಸ್ಥಾನದಲ್ಲಿ ‘ಗಾಡಿಯಾ ಲೋಹಾರ’ ಎಂಬ ಹೆಸರಿನೊಂದಿಗೆ ಇದೆ.
  • ಹಳದಿಘಾಟ್ (1576 ಜೂನ್ 18 ) ಯುದ್ದದ 300 ವರ್ಷಗಳ ನಂತರವೂ ಭೂಮಿಲಿ ಯುದ್ಧಸಾಮಾಗ್ರಿ ದೊರೆಯುತ್ತಿವೆ. 1985 ರಲ್ಲಿ ಉತ್ಖನನ ಸಮಯದಿ ಖಡ್ಗದ ರಾಶಿಯೆ ದೊರೆತಿತ್ತು.
  • ಮುಸ್ಲಿಂ ರಾಜರ ಉಪಟಳದಿಂದ ಬೇಸತ್ತಿದ್ದ ಮಹಾರಾಣಾ ತನ್ನ 8000 ಸೈನಿಕರೊಂದಿಗೆ 60,000 ಶತ್ರು ಸೈನ್ಯ ದೊಂದಿಗೆ ಹೋರಾಡಿ ಮೋಘಲರ 40000 ಸೈನ್ಯ ಸದೆಬಡಿದು ವಿಜಯಿಯಾಗಿದ್ದನ್ನು .
  • ಬಿಲ್ವಿದ್ಯೆಯಲ್ಲಿ ಪರಿಣಿತರಾದ ಆದಿವಾಸಿ ಭೀಲ್ ( ಬಿಲ್ಲವ) ಸಮೂದಾಯ ಸದಾ ಮಹಾರಾಣಾ ನೊಂದಿಗೆ ಇರುತ್ತಿತ್ತು. ಆಯೋಗದ ಸಮೂದಾಯ ಪ್ರತಾಪನನ್ನು ತಮ್ಮ ಮಗನಂತೆ ಕಾಣುತ್ತಿದ್ದರು ಮೇವಾಡದ ರಾಜಚಿಹ್ನೇಯಲ್ಲಿ ಒಂದು ಕಡೆ ರಜಪೂತರು ಇನ್ನೊಂದು ಕಡೆ ಈ ಸಮೂದಾಯದ ಚಿತ್ರವಿದೆ.
  • ಮಹಾರಾಣಾನ ಮೆಚ್ಚಿನ ಕುದುರೆ ‘ಚೇತಕ’ ಒಂದು ಸಂದರ್ಭದಲ್ಲಿ ತನ್ನ ಒಂದು ಕಾಲು ಮುರಿದಿದ್ದರೂ 26 ಅಡಿಯ ಬೆಟ್ಟ ಹಾರಿ ತನ್ನ ರಾಜನಿಗೆ ನಿಷ್ಟೆ ತೋರಿ ಸಾವನ್ನಪ್ಪಿತು ಅದು ವೀರಮರಣ ಅಪ್ಪಿದ ಸ್ಥಳದಲ್ಲಿ ‘ಖೋಡಿ ಇಮಲಿ’ ಎಂಬ ಗಿಡವನ್ನು ನೆಟ್ಟು ಅದಕ್ಕಾಗಿ ಮಂದಿರವನ್ನು ನಿರ್ಮಿಸಲಾಗಿದೆ.
  • ಮಹಾರಾಣಾ ಸಾವಿಗೂ ಮುನ್ನ ತಾನು ಕಳೆದುಕೊಂಡ ಪ್ರದೇಶದಲ್ಲಿ 85% ದಷ್ಟು ಮತ್ತೆ ಹೋರಾಡಿ ಗೆದ್ದುಕೊಂಡನು. ಇದಕ್ಕಾಗಿ ಮಹಾರಾಣಾನು 20 ವರ್ಷಗಳ ಕಾಲ ಕಾಡುಮೇಡು ಸುತ್ತಿ ಸೈನ್ಯ ಕಟ್ಟಿದ್ದನು.
  • ಮಹಾರಾಣಾ ಪ್ರತಾಪನ ಸೈನಿಕರು ಅಜಾನುಬಾಹು ದೇಹಿಗಳಾಗಿದ್ದರು.
  • ಮಹಾರಾಣಾನಿಗೆ ಶಸ್ತ್ರಾಸ್ತ್ರ ವಿದ್ಯೆ ಕಲಿಸಿದವನು ಜೈಮೇಲ್ ಮೆಡತಿಯಾ
  • ಅಪ್ರತಿಮ ಶೂರ ವೀರ ದೊರೆ ಮಹಾರಾಣಾ ಪ್ರತಾಪ ವೀರಭೂಮಿಗೆ ತನ್ನ ದೇಹ ಅರ್ಪಿಸಿದ್ದು 29 ಜನೇವರಿ 1597 ರ ಪುಣ್ಯ ದಿನದಲ್ಲಿ.
  • ಮಹಾರಾಣಾ ಮರಣದ ಕಾಲದಲ್ಲಿ ಅಕ್ಬರನೂ ಸಹ ಕಣ್ಣಿರು ಹಾಕಿದ್ದ
#ಮಹಾರಾಣಾ_ಪ್ರತಾಪಸಿಂಹರಿಗೆ
#ಶತ_ಶತ_ನಮನಗಳು
Article by : Mahesh Hiremath
Submit your article @ veerakesari.212@gmail.com or veerakesari FB
loading...
Powered by Blogger.