loading...
ಜಮ್ಮು ಕಾಶ್ಮೀರದ ಗಂದೇರ್ ಬಲ್ ಜಿಲ್ಲೆಯ ಸೋನಾಮಾರ್ಗ್ ಎಂಬಲ್ಲಿ ಸೇನೆಯ ಕ್ಯಾಂಪ್ ಮೇಲೆ ಹಿಮಕುಸಿತದ ಪರಿಣಾಮ ಸೇನಾಧಿಕಾರಿ ಹುತಾತ್ಮರಾಗಿದ್ದಾರೆ. ಎಂಟು ಸೈನಿಕರನ್ನು ಹಿಮದ ರಾಶಿಯಿಂದ ರಕ್ಷಣೆ ಮಾಡಲಾಗಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. ಇನ್ನೂ ಹಲವರು ಮಂಜಿನ ಅಡಿಯಲ್ಲಿ ಸಿಲುಕಿರುವ ಶಂಕೆಯಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಜಮ್ಮು ಕಾಶ್ಮೀರದ ಪರ್ವತ ಶ್ರೇಣಿಗಳಲ್ಲಿ ಬಾರೀ ಹಿಮಪಾತವಾಗುತ್ತಿದ್ದು ಈಗಾಗಲೇ ತಜ್ಞರು ಹಿಮ ಕುಸಿತದ ಎಚ್ಚರಿಕೆ ನೀಡಿದ್ದಾರೆ.
loading...
Post a Comment