loading...
ವಿಷ್ಣುವಿನ ಏಳನೇ ಅವತಾರ ಪ್ರಭು ಶ್ರೀರಾಮ ಕೇವಲ ವೀರ ಅಷ್ಟೇ ಅಲ್ಲಾ ಮಹಾವೀರ ಆಗಿದ್ದ. ಹದಿನಾಲ್ಕು ಸಾವಿರ ರಾಕ್ಷಸರ ಸೈನ್ಯವನ್ನು ಕೇವಲ ಒಂದುವರೆ ಗಂಟೆ ಅವಧಿಯಲ್ಲಿ ನಾಶ ಮಾಡಿದ್ದ ಶೂರ. ಅಷ್ಟೇ ಅಲ್ಲದೆ ದೇವತೆಗಳೇ ಯುದ್ಧ ಮಾಡಲು ಹೆದರುತ್ತಿದ್ದ ಕುಂಭ ಕರ್ಣನು ಕೂಡ ರಾಮನಿಂದ ಹತನಾಗಿದ್ದ. ಕೊನೆಗೆ ತನ್ನನ್ನು ತಾನೂ ಮೂರು ಲೋಕಗಳಲ್ಲೇ ಶಕ್ತಿಶಾಲಿ ಎಂದು ಕರೆದುಕೊಳ್ಳುತ್ತಿದ್ದ ಲಂಕೆಯ ರಾಜ ರಾವಣ ಶ್ರೀರಾಮನ ಬಾಣಕ್ಕೆ ಸತ್ತುಬಿದ್ದಿದ್ದ.
ಅಯೋಧ್ಯೆಯ ಅಧಿಪತಿ ಶ್ರೀರಾಮನಿಗೆ ಋಷಿಮುನಿಗಳಲ್ಲೇ ಪ್ರಭಲರಾಗಿದ್ದ ವಿಶ್ವಾಮಿತ್ರರು ಯುದ್ಧ ತಂತ್ರಗಳು ಹಾಗೂ ಪ್ರಬಲ ಆಯುಧಗಳ ಬಳಕೆ ಬಗ್ಗೆ ತರಬೇತಿ ನೀಡಿದ್ದರು. ಶ್ರೀರಾಮ ಹಸಿವು ಮತ್ತು ನಿದ್ದೆ ಹೋಗಲಾಡಿಸುವ ಮಂತ್ರಗಳನ್ನು ಕೂಡ ತಿಳಿದುಕೊಂಡಿದ್ದ, ಇದು ಶ್ರೀರಾಮನಿಗೆ ರಣರಂಗದಲ್ಲಿ ಹೋರಾಡಲು ಮತ್ತಷ್ಟು ಶಕ್ತಿಯನ್ನು ನೀಡುತ್ತಿತ್ತು. ಆ ಸಮಯ ಬಿಲ್ಲುಗಾರಿಕೆಯಲ್ಲಿ ಶ್ರೀರಾಮನನ್ನು ಮೀರಿಸುವವರು ಬೇರೊಬ್ಬರು ಇರಲಿಲ್ಲ, ಜೊತೆಗೆ ಶ್ರೀರಾಮನ ಬಳಿ ಪ್ರಬಲ ಸಾರಂಗ ಬಿಲ್ಲುಬಾಣವಿತ್ತು.
ಆದರೆ ನಿಮಗೆ ಗೊತ್ತೇ...??? ಅಯೋಧ್ಯ ಅಧಿಪತಿ ಶ್ರೀರಾಮ ತನ್ನ ಎದುರಾಳಿಯೊಂದಿಗೆ ಒಂದು ಯುದ್ಧವನ್ನು ಸೋತಿರೋ ಬಗ್ಗೆ.
ರಾಮಾಯಣದಲ್ಲಿ ನಡೆದ ಘಟನೆಯೊಂದರಲ್ಲಿ ಶ್ರೀರಾಮ ತನ್ನ ಎದುರಾಳಿಯನ್ನು ಕೊಲ್ಲಲು ಎಷ್ಟೇ ಭಾಣ ಪ್ರಯೋಗ ಮಾಡಿದರು ಅದು ಎದುರಾಳಿಗೆ ಒಂದು ಸಣ್ಣ ಗಾಯವನ್ನು ಮಾಡುತ್ತಿರಲಿಲ್ಲ. ಕೊನೆಗೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದರೂ ಅದೂ ಎದುರಾಳಿಯ ಕಾಲ ಬುಡಕ್ಕೆ ಹೋಗಿ ಬಿದ್ದಿತ್ತು. ಎದುರಾಳಿಯ ದೇಹದಲ್ಲಿ ಒಂದು ಸಣ್ಣ ತರುಚಿದ ಗಾಯವನ್ನೂ ರಾಮನ ಬಾಣ ಉಂಟು ಮಾಡಿರಲಿಲ್ಲ.
ರಾಮ ಯುದ್ಧ ಮಾಡಿದ ಆ ಎದುರಾಳಿ ಯಾರು ಗೊತ್ತೇ...??? ಬೇರಾರು ಅಲ್ಲ ರಾಮ ಭಕ್ತ ಹನುಮಂತ.
ರಾಮನ ಭಕ್ತನಾಗಿದ್ದರೂ ಹನುಮಂತ ರಾಮನ ವಿರುದ್ಧ ನಿಲ್ಲಲು ಕಾರಣ ಏನು ಗೊತ್ತೇ...??? ಇಲ್ಲಿದೆ ನೋಡಿ ಆ ಮಾಹಿತಿ.
ಕಾಶಿಯ ರಾಜನಾಗಿದ್ದ ಸುರತ ಒಮ್ಮೆ ಪ್ರಭು ಶ್ರೀರಾಮನನ್ನು ಬೇಟಿಯಾಗಲು ಅಯೋಧ್ಯೆಗೆ ಪ್ರಯಾಣ ಬೆಳೆಸುತ್ತಾನೆ. ಆದರೆ ಕಾಶಿಯ ರಾಜ ಸುರತನಿಗೆ ಅಯೋಧ್ಯೆಗೆ ತೆರಳುವ ದಾರಿ ಮಧ್ಯೆ ನಾರದ ಮುನಿಗಳು ಸಿಗುತ್ತಾರೆ. ನಾರದ ಮುನಿಗಳು ಸುರತ್ ಬಳಿ ಆಜ್ಞೆಯೊಂದನ್ನು ಮಾಡುತ್ತಾರೆ " ನೀನು ಅಯೋಧ್ಯೆಗೆ ತಲುಪಿದ ನಂತರ ಅಲ್ಲಿರುವ ಪ್ರತಿಯೊಬ್ಬರಿಗೆ ಸ್ವಾಗತಿಸಿ ವಂದಿಸಿ ಕುಶಲೋಪರಿ ವಿಚಾರಿಸು ಆದರೆ ರಾಮನ ಗುರು ವಿಶ್ವಾಮಿತ್ರರಿಗೆ ವಂದಿಸಬಾರದು. ವಿಶ್ವಾಮಿತ್ರರಿಗೆ ಅದೆಲ್ಲ ಇಷ್ಟವಾಗೋದಿಲ್ಲ" ಎಂದು ಹೇಳುತ್ತಾರೆ.
ಕಾಶಿಯ ರಾಜ ನಾರದ ಮುನಿಗಳ ಮಾತನ್ನು ಒಪ್ಪುತ್ತಾನೆ ಹಾಗೂ ನಾರದ ಮುನಿಗಳಿಗೆ ವಂದಿಸಿ ಅಲ್ಲಿಂದ ಪ್ರಯಾಣ ಬೆಳೆಸುತ್ತಾನೆ.
ಅಯೋಧ್ಯೆಯಲ್ಲಿನ ರಾಮನ ಆಸ್ಥಾನ ತಲುಪಿದ ಸುರತ ಅಲ್ಲಿರುವ ಪ್ರತಿಯೊಬ್ಬರಿಗೆ ವಂದಿಸಿ ಕುಶಲೋಪರಿ ವಿಚಾರಿಸುತ್ತಾನೆ ಆದರೆ ನಾರದ ಮುನಿಗಳ ಮಾತಿನಂತೆ ರಾಮನ ಗುರು ವಿಶ್ವಾಮಿತ್ರರನ್ನು ವಂದಿಸುವುದಿಲ್ಲ ಕಡೆಗಣಿಸುತ್ತಾನೆ. ಕಾಶಿ ರಾಜ ಸುರತನ ಈ ನಡವಳಿಕೆಯಿಂದ ವಿಶ್ವಾಮಿತ್ರರಿಗೆ ತುಂಬಾ ಕೋಪ ಉಂಟಾಗುತ್ತೆ. ತಕ್ಷಣ ಶ್ರೀರಾಮನಲ್ಲಿ "ಕಾಶಿಯ ರಾಜ ನನ್ನನ್ನು ಕಡೆಗಣಿಸುವ ಮೂಲಕ ಅಯೋದ್ಯೆಯ ರಾಜ ಸಭೆಗೆ ಕಳಂಕವುಂಟು ಮಾಡಿದ್ದಾನೆ" ಎನ್ನುತ್ತಾರೆ. ತನ್ನ ಗುರುವಿಗೆ ಅವಮಾನ ಮಾಡಿದ್ದರಿಂದ ಕೆಂಡಾಮಂಡಲವಾದ ಶ್ರೀರಾಮ ಸೂರ್ಯಸ್ತದ ಮುಂಚೆ ಕಾಶಿಯ ರಾಜನಿಗೆ ತಕ್ಕ ಪಾಠ ಕಲಿಸೋದಾಗಿ ಪ್ರತಿಜ್ಞೆ ಮಾಡುತ್ತಾನೆ.
ರಾಮನ ಕೋಪವನ್ನು ನೋಡಿ ಭಯಭೀತನಾದ ಸುರತ ಪ್ರಾಣ ಭಯದಿಂದ ಅಲ್ಲಿಂದ ತಪ್ಪಿಸಿಕೊಂಡು ನಾರದ ಮುನಿಗಳಲ್ಲಿಗೆ ಬಂದು ರಕ್ಷಣೆಗಾಗಿ ಅಂಗಲಾಚುತ್ತಾನೆ. ಸುರತನಿಗೆ ಸಮಾಧಾನ ಮಾಡಿದ ನಾರದ ಮುನಿಗಳು ಹನುಮಂತನ ತಾಯಿ ಅಂಜನಾ ಬಳಿ ಸಹಾಯ ಯಾಚಿಸುವಂತೆ ಕಳಿಸುತ್ತಾರೆ.
ನಾರದ ಮುನಿಗಳ ಮಾತಿನಂತೆ ಮಾತೆ ಅಂಜನಾ ಬಳಿ ಬಂದ ಸುರತ ನಡೆದ ಘಟನೆ ವಿವರಿಸಿ ತನ್ನ ಪ್ರಾಣ ಕಾಪಾಡುವಂತೆ ಅಂಗಲಾಚುತ್ತಾನೆ. ಮಾತೆ ಅಂಜನಾ ಅಲ್ಲೇ ಇದ್ದ ಮಗ ಹನುಮಂತನನ್ನು ಕರೆದು ಸುರತನ ರಕ್ಷಣೆಯ ಹೊಣೆಯನ್ನು ಒಪ್ಪಿಸುತ್ತಾಳೆ.
ಹೇಗೂ ಹನುಮಂತ ಮೊದಲೇ ರಾಮನ ಭಕ್ತ, ರಾಮನಿಗಾಗಿ ಪ್ರಾಣ ಕೊಡೋಕು ತಯಾರಿರುವಾತನಿಗೆ ರಾಮನ ವಿರುದ್ಧ ಸೆಣೆಸಲು ಇಷ್ಟವಿರಲಿಲ್ಲ ಅಲ್ಲದೆ ರಾಮನ ಕ್ರೊಧವನ್ನು ಮೊದಲೇ ಕಂಡಿದ್ದ ಹನುಮಂತನಿಗೆ ಆತನ ವಿರುದ್ಧ ನಿಲ್ಲಲು ಭಯವೂ ಇತ್ತು. ಆದರೆ ತಾಯಿಯ ಆಜ್ಞೆಯ ವಿರುದ್ಧ ಎಂದೂ ಹೋಗಿರಲಿಲ್ಲ, ಹಾಗಾಗಿ ತನ್ನ ಪ್ರಾಣ ನೀಡಿಯಾದರು ಕಾಶಿಯ ರಾಜ ಸುರತನನ್ನು ರಕ್ಷಿಸೋದಾಗಿ ತಾಯಿಗೆ ಭಾಷೆ ನೀಡುತ್ತಾನೆ.
ಅಲ್ಲೇ ಪ್ರಾಣ ಭಯದಿಂದ ನಿಂತಿದ್ದ ಸುರತನಲ್ಲಿ ಹನುಮಂತ, ರಾಮ ಜಪ ಮಾಡುತ್ತ ತನ್ನ ಹಿಂಬದಿ ನಿಲ್ಲುವಂತೆ ಆಜ್ಞೆ ಮಾಡುತ್ತಾನೆ. ಅದೇ ಸಮಯಕ್ಕೆ ಶ್ರೀರಾಮ ಸುರತನನ್ನು ಹುಡುಕಿಕೊಂಡು ಹನುಮಂತನಿರುವಲ್ಲಿಗೆ ಬರುತ್ತಾನೆ ಆದರೆ ಹನುಮಂತ ರಾಮ ಮತ್ತು ಸುರತನ ಮಧ್ಯೆ ತಡೆಗೋಡೆಯಾಗಿ ನಿಂತಿದ್ದ. ಹನುಮಂತ ತನ್ನ ಕೈಕಟ್ಟಿಕೊಂಡು ತಾನೂ ಕೂಡ ಶ್ರೀರಾಮನ ಜಪದಲ್ಲಿ ನಿರತನಾಗಿದ್ದ.
ಮೊದಲೇ ಕ್ರೋಧಾವಸ್ಥೆಯಲ್ಲಿದ್ದ ಶ್ರೀರಾಮ ಯಾವುದನ್ನೂ ಗಮನಿಸದೆ ತನ್ನ ಗುರುವಿಗೆ ರಾಜ ಸಭೆಯಲ್ಲಿ ಅಪಮಾನ ಮಾಡಿದ ಸುರತನಿಗೆ ಗುರಿಯಾಗಿಸಿ ತನ್ನ ಬಿಲ್ಲು ಪ್ರಯೋಗ ಮಾಡುತ್ತಾನೆ. ರಾಮ ಅದೆಷ್ಟೇ ಭಾಣ ಪ್ರಯೋಗ ಮಾಡಿದರೂ ಅದು ಹನುಮಂತನನ್ನು ದಾಟಿ ಮುಂದೆ ಹೋಗುತ್ತಿರಲಿಲ್ಲ. ಹನುಮಂತ ನಿಂತಿರೋ ಜಾಗದಲ್ಲಿಯೇ ಬಿದ್ದು ಹೋಗುತ್ತಿತ್ತು. ಕೊನೆಗೆ ಮತ್ತಷ್ಟು ಕೋಪಗೊಂಡ ಶ್ರೀರಾಮ ಹಿಂದೂ ಮುಂದು ನೋಡದೆ ತನ್ನ ಪ್ರಭಲ ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಿ ಬಿಟ್ಟಿದ್ದ. ಆದರೆ ರಾಮ ಜಪದಲ್ಲಿ ನಿರತನಾಗಿದ್ದ ಹನುಮಂತನ ಮುಂದೆ ಬ್ರಹ್ಮಾಸ್ತ್ರವೂ ನಡೆಯಲಿಲ್ಲ.
ಇದನ್ನೆಲ್ಲ ದೂರದಿಂದ ಗಮನಿಸುತ್ತಿದ್ದ ನಾರದ ಮುನಿಗಳು ತಕ್ಷಣ ಓಡೋಡಿ ಅಲ್ಲಿಗೆ ಬರುತ್ತಾರೆ. ರಾಮನನ್ನು ಸಮಾಧಾನಪಡಿಸಿದ ನಾರದ ಮುನಿಗಳು, ಇದೊಂದು ನಾನು ಹೆಣೆದ ತಂತ್ರವಾಗಿದೆ. ನಾನು ಇದರಿಂದ ವಿಶ್ವಕ್ಕೆ ತಿಳಿಸಬಯಸಿದ್ದೇನೆಂದರೆ "ಜಗತ್ತಿನಲ್ಲಿರುವ ಯಾರಿಗೂ ಏನೂ ಸ್ವತಃ ಶ್ರೀರಾಮನಿಗೂ ತನ್ನನ್ನು ಭಕ್ತಿಯಿಂದ ಪೂಜಿಸುವವರಿಗೆ ಏನೂ ಮಾಡಲು ಸಾಧ್ಯವಿಲ್ಲ" ಎನ್ನುತ್ತಾರೆ.
ಕೊನೆಗೆ ಶ್ರೀರಾಮನ ಗುರು ವಿಶ್ವಾ ಮಿತ್ರರ ಕಾಲಿಗೆ ಕಾಶಿಯ ರಾಜ ಸುರತ ನಮಸ್ಕಾರ ಮಾಡಿ ತನ್ನ ತಪ್ಪಿಗೆ ಕ್ಷಮೆ ಕೇಳುತ್ತಾನೆ. ಹಾಗೂ ಶ್ರೀರಾಮ ಹನುಮಂತನನ್ನು ತಬ್ಬಿಕೊಳ್ಳುತ್ತಾನೆ.
(ಈ ಲೇಖನದ ಮೂಲ ಇಂಗ್ಲಿಷ್ ಭಾಷೆಯಾಗಿದ್ದು ನಾವು ಅದನ್ನು ಕನ್ನಡಕ್ಕೆ ಅನುವಾದಿಸಿದ್ದೇವೆ, ನಾವು ಅನುವಾದಿಸುವಾಗ ಲೇಖನದಲ್ಲಿ ಏನಾದರು ತಪ್ಪಾಗಿದ್ದರೆ ದಯವಿಟ್ಟು ತಿಳಿಸಿ - veerakesari.212@gmail.com)
loading...
Post a Comment