loading...
ಕಂಬಳದ ಪರ ಕನ್ನಡಿಗರು ಸಿಡಿದೆದ್ದಿದ್ದಾರೆ, ಎಲ್ಲೆಡೆ ಕಂಬಳದ ಪರ ಪ್ರತಿಭಟನೆಗಳು ನಡೆಯುತ್ತಿವೆ. ನಮ್ಮ ಸಾಂಸ್ಕೃತಿಕ ಆಚರಣೆಗಳನ್ನು ತಡೆಯಲು ಯತ್ನಿಸುತ್ತಿರುವ ಸೋಕಾಲ್ಡ್ ಪ್ರಾಣಿದಯಾ ಸಂಘಕ್ಕೆ ಈಗ ಜನತೆ ತಮ್ಮ ವಿರುದ್ಧ ತಿರುಗಿ ಬಿದ್ದಿರುವುದರಿಂದ ಎಲ್ಲೆಡೆ ಉರಿತ ಶುರುವಾಗಿದೆ.
ಕಂಬಳದ ಮೇಲಿರುವ ನಿಷೇಧದ ತೆರವಿಗೆ ಇಡೀ ಕರ್ನಾಟಕ ರಾಜ್ಯವೇ ಒಗ್ಗೂಡಿದೆ. ಎಲ್ಲಾ ರಾಜಕೀಯ ಪಕ್ಷಗಳು ಪಕ್ಷ ಬೇಧ ಮರೆತು ಕಂಬಳದ ಪರ ನಿಂತಿದ್ದಾರೆ . ಅಷ್ಟೇ ಅಲ್ಲದೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಕಂಬಳಕ್ಕೆ ಜೈ ಎಂದಿದ್ದಾರೆ.
ಈಗ ತಮ್ಮ ಗಂಜಿಗೆ ಕುತ್ತು ಬಂದಿರುವುದರಿಂದ ಸೋಕಾಲ್ಡ್ ಪ್ರಾಣಿದಯಾ ಸಂಘದ ಅಧ್ಯಕ್ಷ ರವಿ ಕಂಬಳ ಪ್ರೀಯರಿಗೆ "ಮನುಷ್ಯರ ಹೆಗಲಿಗೆ ನೊಗ ಕಟ್ಟಿ ಕಂಬಳದಲ್ಲಿ ಓಡಿಸಿ, ತಾಕತ್ತು ಇದ್ದರೆ ಆಯುಧ ಪೂಜೆ, ಬಕ್ರೀದ್ ಗೆ ಪ್ರಾಣಿ ಬಲಿ ತಡೆಯಿರಿ " ಎಂದು ಸವಾಲು ಒಂದನ್ನು ಹಾಕಿದ್ದಾರೆ.
ನಿಜವಾಗಿಯೂ ಈ ಸೋಕಾಲ್ಡ್ ಪ್ರಾಣಿ ದಯಾ ಸಂಘ ತನ್ನ ಕರ್ತವ್ಯ ಮರತಂತಿದೆ, ಕಂಬಳ ಪ್ರಿಯರ ಒಗ್ಗಟ್ಟು ಕಂಡು ತಲೆಯೇ ಕೆಟ್ಟು ಹೋಗಿದೆ . ತಾನು ಮಾಡಬೇಕಾದ ಕೆಲಸವನ್ನು ಇನ್ನೊಬ್ಬರ ತಲೆಗೆ ಕಟ್ಟಲು ಹೊರಟಿದೆ. ತಮ್ಮ ಹೋರಾಟ ಯಾರ ವಿರುದ್ಧ ಎಂಬುದೇ ಇವರಿಗೆ ಗೊತ್ತಿಲ್ಲ, ವಿದೇಶದಿಂದ ಬರೋ ಎಂಜಲು ದುಡ್ಡಿಗೆ ಕೈಯೊಡ್ಡಿ ಭಾರತೀಯ ಸಂಸ್ಕೃತಿ, ಆಚರಣೆಗಳನ್ನು ನಾಶ ಮಾಡಲು ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದೆ. ಇದಕ್ಕೆ ನಮ್ಮ ಭಾರತೀಯ ಕಾನೂನು ವ್ಯವಸ್ಥೆ ತಲೆ ಆಡಿಸುತ್ತಿದೆ.
ಕಂಬಳದಲ್ಲಿ ಕೋಣಕ್ಕೆ ನೊಗ ಕಟ್ಟಿ ಎಳೆದರೆ ಪ್ರಾಣಿ ಹಿಂಸೆ ಆಗುತ್ತೇ ಎಂದಾದರೆ ರೈತ ಗದ್ದೆ ಉಳುವಾಗಲೂ ಕೊಣಕ್ಕೆ ನೊಗ ಕಟ್ಟಿಯೇ ಎಳೆಯುವುದು. ಪ್ರಾಣಿ ಹಿಂಸೆ ಆಗುತ್ತೇ ಎಂದು ಗದ್ದೆ ಊಳದೇ ಹೋದರೆ, ಬೆಳೆ ಬೆಳೆಯಲು ಸಾಧ್ಯವಿಲ್ಲ. ಆವಾಗ ಏನು ಮಣ್ಣು ತಿನ್ನುತ್ತೀರ...??? ಇವರಿಗೆ ಕುದುರೆ ರೇಸ್ ನಲ್ಲಿ ಕುದುರೆಗೆ ಬೀಳುವ ಚಡಿ ಏಟು ಕಾಣುವುದಿಲ್ಲ, ಕಸಾಯಿ ಖಾನೆಗಳಲ್ಲಿ ಗೋವಿಗೆ ಬೀಳೋ ಕೊಡಲಿ ಏಟು ಕಾಣುವುದಿಲ್ಲ ...ಯಾಕೆಂದರೆ ಅವೆಲ್ಲಾ ಇವರ ಲೆಕ್ಕದಲ್ಲಿ ಪ್ರಾಣಿ ಹಿಂಸೆಯಲ್ಲಾ ಕೇವಲ ಕಂಬಳದಲ್ಲಿ ಕೋಣಕ್ಕೆ ನೊಗ ಕಟ್ಟಿ ಎಳೆಯುವುದು ಪ್ರಾಣಿಹಿಂಸೆ.
ಈ ಸೋಕಾಲ್ಡ್ ಪ್ರಾಣಿ ದಯಾ ಸಂಘಕ್ಕೆ ನಮ್ಮದೊಂದು ಸವಾಲು ಇದೆ... ನೀವೆಲ್ಲರೂ ನಿಜವಾಗಿಯೂ ನಿಮ್ಮ ಅಪ್ಪನಿಗೆ ಹುಟ್ಟಿದ್ದರೆ ದೇಶದಲ್ಲಿ ನಡೆಯೋ ಗೋಹತ್ಯೆಯನ್ನು ತಡೆಯಿರಿ ಇಲ್ಲವಾದರೆ "ಗಾಂಡು ದಯಾ ಸಂಘ" ಅಂತ ಹೆಸರು ಬದಲಾಯಿಸಿ ಮೂಲೆ ಸೇರಿ.
#veerakesari
loading...
Post a Comment