ಸಾವರಕರರ ಬಗ್ಗೆ ಮತ್ತೊಂದಿಷ್ಟು :
ಯುದ್ಧವಿಲ್ಲದೇ ಸ್ವಾತಂತ್ರ್ಯ ದಕ್ಕದು ಗೆಳೆಯಾ!
ಸ್ವರಾಜ್ಯ ಬೇಕಿದ್ದರೆ, ತಗೋ ಕತ್ತಿ ತೋರು ಕೆಚ್ಚೆದೆಯಾ! !
-ಸ್ವಾತಂತ್ರ್ಯ ವೀರ ಸಾವರ್ಕರ್
ದೇಶವನ್ನು ಬಡಿದೆಚ್ಚರಿಸುವ ಸಾಹಿತ್ಯ ಬರಬೇಕು.
-ಸ್ವಾತಂತ್ರ್ಯ ವೀರ ಸಾವರ್ಕರ್
ಗೆಳೆಯರೊಂದಿಗೆ ನೇಣು ಸ್ವೀಕರಿಸುತ್ತೇನೆ , ಕಾಲಾಪಾನಿಯಾದರೂ ಸಹಿಸುತ್ತೇನೆ. ನಾನೇ ಮುಂದೆ ನಿಲ್ಲುವುದರಿಂದ ಜನರಿಗೆ ಇನ್ನೂ ಹೆಚ್ಚಿನ ಸ್ಫೂರ್ತಿ ದೊರೆಯುತ್ತದೆ. ಕ್ರಾಂತಿ ಇನ್ನೂ ಬೇಗ ಸಾಧ್ಯವಾಗುತ್ತದೆ.
-ಸ್ವಾತಂತ್ರ್ಯ ವೀರ ಸಾವರ್ಕರ್
ನಿನ್ನ ಕತ್ತಿ ಶತ್ರುವಿನ ಕತ್ತಿಗಿಂತ ಕಿರಿದಾಗಿದ್ದರೆ, ನೀನು ಒಂದು ಹೆಜ್ಜೆ ಮುಂದೆ ಹೋಗಿ ನಿಲ್ಲಬೇಕು ,ಆಗ ನಿನ್ನ ಕತ್ತಿ ಶತ್ರುವಿನ ರುಂಡ ಹಾರಿಸಬಲ್ಲದು.
-ಸ್ವಾತಂತ್ರ್ಯ ವೀರ ಸಾವರ್ಕರ್
ಸಿಂಧುವಿಲ್ಲದ ಹಿಂದುವಿಲ್ಲ ! ಅಖಂಡವಾಗಿಲ್ಲದಿದ್ದರೆ ಅದು ಹಿಂದುಸ್ಥಾನವೇ ಅಲ್ಲ!
-ಸ್ವಾತಂತ್ರ್ಯ ವೀರ ಸಾವರ್ಕರ್
ಸತ್ಯಾಗ್ರಹ – ಅಸಹಕಾರಗಳು ಸ್ವಾತಂತ್ರ್ಯದ ಮಾರ್ಗವಲ್ಲ . ಚರಖಾದಿಂದ ನೂಲಷ್ಟೇ ಬಂದೀತು. ಸ್ವಾತಂತ್ರ್ಯವಲ್ಲ.
-ಸ್ವಾತಂತ್ರ್ಯ ವೀರ ಸಾವರ್ಕರ್
ಸಾವರ್ಕರ್ ಘರ್ ವಾಪ್ಸಿ (ಮರಳಿ ಮಾತೃ ಧರ್ಮದ) ಕಾರ್ಯ ಮಾಡುತ್ತಿರುವಾಗ , ಒಬ್ಬ ಮುಸ್ಲಿಂ ನಾಯಕ ಶೌಕತ್ ಅಲಿ ವಿರೋಧ ಮಾಡ್ತಾನೆ. ಅವರಿಬ್ಬರ ನಡುವಿನ ಸಂವಾದ ಹೀಗಿದೆ,
ಶೌಕತ್ ಅಲಿ : ನಿಮ್ಮ ಹಿಂದು ಸಂಘಟನೆ, ಶುದ್ಧಿ ಚಳುವಳಿಗಳಿಂದ ನಾವೆಲ್ಲ ಕೋಪಗೊಂಡಿದ್ದೇವೆ. ಈಗಲೇ ತಿದ್ದಿಕೊಳ್ಳದಿದ್ದರೆ ಪರಿಣಾಮ ನೆಟ್ಟಗಾಗಲಿಕ್ಕಿಲ್ಲ.
ಸಾವರ್ಕರ್ : ಬಿಡಿ ಬಿಡಿ. ಸೂರ್ಯ ಮುಳುಗದ ಬ್ರಿಟಿಷ್ ಸಾಮ್ರಾಜ್ಯಕ್ಕೆ ಬೆದರಲಿಲ್ಲ, ಇನ್ನು ಮುಸ್ಲಿಂ ಗೂಂಡಾಗಳ ಚಾಕು-ಚೂರಿಗಳಿಗೆ ಹೆದರಬೇಕೆ? ಎಂದು ನಕ್ಕರು.
ಶೌಕತ್ ಅಲಿ: ನಮ್ಮ ರಕ್ಷಣೆಗೆ ಬೇಕಾದಷ್ಟು ರಾಷ್ಟ್ರಗಳಿವೆ . ನಾವು ಇಲ್ಲಿ ಸರಿಯಾಗಲಿಲ್ಲವೆಂದರೇ ಹೊರಟುಬಿಡುತ್ತೇವೆ.
ಸಾವರ್ಕರ್ : ನಮ್ಮ ತಡೆಯಿಲ್ಲ, ದಿನನಿತ್ಯವೂ ಫ್ರಾಂಟಿಯರ್ ರೈಲ್ ಅತ್ತಕಡೆಗೆ ಓಡುತ್ತದೆ ಹೋಗಿ ಹೋಗಿ ಎಂದರು ವ್ಯಂಗ್ಯಭರಿತ ದನಿಯಲ್ಲಿ.
ಶೌಕತ್ ಅಲಿ : ನಿಮ್ಮಂಥ ಕುಳ್ಳನನ್ನು ನಾನು ಒಂದೇ ಹೊಡೆತಕ್ಕೆ ಮುಗಿಸಬಲ್ಲೆ.
ಸಾವರ್ಕರ್ : ಅಫ್ಜಲ್ ಖಾನನ ಮುಂದೆ ಶಿವಾಜಿಯೂ ಕುಳ್ಳನೇ, ಅವರಿಬ್ಬರ ಭೇಟಿಯ ಫಲಶ್ರುತಿ ನಿಮಗೆ ಗೊತ್ತೇ ಇದೆ. ನಾನು ನಿಮ್ಮ ಸವಾಲನ್ನು ತಿರಸ್ಕರಿಸಲಾರೆ, ಬನ್ನಿ ಎಂದರು.
ತಾಯಿ ಭಾರತೀಯೂ ಮುಕ್ತಿಗಾಗಿ ಯಾರೂ ಮೂಸದ ನಮ್ಮ ಮನೆಯಂಗಳದ ಹೂಗಳನ್ನು ಕಿತ್ತು ಭಗವಂತನ ಚರಣಗಳಿಗೆ ಅರ್ಪಿಸುತ್ತಿದ್ದಾಳೆ. ಆಕೆ ಪದೇ-ಪದೇ ನಮ್ಮ ತೋಟಕ್ಕೆ ಬರಲಿ, ಹೂ ಕಿತ್ತು ಅರ್ಪಣೆಗೈಯ್ಯಲಿ. ನವರಾತ್ರಿಯ ಪರ್ವವನ್ನು ಆಕೆ ಹೆಮ್ಮೆಯಿಂದ ಆಚರಿಸಲಿ . ಪ್ರತಿ ದಿನ ಹೊಸದೊಂದು ಹೂ ಅರ್ಪಿಸಲಿ. ಅದು ನಮಗೆ ಹೆಮ್ಮೆಯ ವಿಚಾರ.
-ಸ್ವಾತಂತ್ರ್ಯ ವೀರ ಸಾವರ್ಕರ್ ( ಮಗ ತೀರಿಕೊಂಡಾಗ ಹೇಳಿದ ಮಾತು)
ಅಖಂಡವಾಗದೆ ಮಣ್ಗೂಡಿದರೂ ಚಿಂತೆಯಿಲ್ಲ . ನಿನ್ನ ಸೇವೆಗೈಯ್ಯುತ್ತೇವೆಂಬ ಶಪಥವನ್ನು ನಾವು ಪೂರ್ಣಗೊಳಿಸಿದ್ದೇವೆ . ಅದೇ ಹೆಮ್ಮೆ. ನಾವು ಆಲೋಚಿಸಿ ಈ ಹಾದಿ ಹಿಡಿದಿದ್ದೇವೆ. ಎಲ್ಲದರ ಅರಿವಿದ್ದೆ ವೀರಕಂಕಣ ತೊಟ್ಟಿದ್ದೇವೆ.
-ಸ್ವಾತಂತ್ರ್ಯ ವೀರ ಸಾವರ್ಕರ್
ಸಿಂಧೂ ಉಗಮಸ್ಥಾನದಿಂದ ಹಿಡಿದು ದಕ್ಷಿಣದ ಸಾಗರದವರೆಗಿನ ಭಾರತ ಭೂಮಿಯನ್ನು ಪಿತೃಭೂಮಿ ಹಾಗೂ ಪುಣ್ಯಭೂಮಿ ಎಂದು ಕಾಣುವವನೇ “#ಹಿಂದುತ್ವ#
-ಸ್ವಾತಂತ್ರ್ಯ ವೀರ ಸಾವರ್ಕರ್
ದೇಶಭಕ್ತಿಯ ಅಪರಾಧಕ್ಕಾಗಿ ವಿದ್ಯಾಲಯವೊಂದರ ಹಾಸ್ಟೆಲ್ಲಿನಿಂದ ಹೊರದಬ್ಬಲ್ಪಟ್ಟ ಮೊದಲ ವಿದ್ಯಾರ್ಥಿ #ಸಾವರ್ಕರ್.
ಹುಳುಗಳಂತೆ ಹುಟ್ಟುತ್ತಾರೆ, ಬದುಕಲಿಕ್ಕಾಗಿ ಬದುಕುತ್ತಾರೆ.
ಯಾರು ದೇಶಕ್ಕಾಗಿ ಸಾಯುತ್ತಾರೋ ಅವರು ಮಹಾಪುರುಷರ ಸಾಲಿಗೇರುತ್ತಾರೆ.
-ಸ್ವಾತಂತ್ರ್ಯ ವೀರ ಸಾವರ್ಕರ್
ರಾಜಕಾರಣ ಹಿಂದುತ್ವ ಪ್ರೇರಿತವಾಗಬೇಕು, ಹಿಂದು ಸಮಾಜದ ಸೈನಿಕೀಕರಣವಾಗಬೇಕು.
-ಸ್ವಾತಂತ್ರ್ಯ ವೀರ ಸಾವರ್ಕರ್
ಸ್ವಾತಂತ್ರ್ಯಾ ನಂತರ ಕ್ರಾಂತಿಕಾರಿಗಳ ನೆನಪೇ ಉಳಿಬಾರದೆಂದು ಬಯಸಿದ ಆ ದೇಶದ್ರೋಹಿ ನೆಹರೂವಿನ ಸರ್ಕಾರ ಅಂಡಮಾನಿನ ಸೆಲ್ಯುಲಾರ್ ಜೈಲನ್ನು ನಿರ್ನಾಮ ಮಾಡಬೇಕೆಂದು ಕೊಂಡಿತ್ತು.
ಅಂದಹಾಗೆ ಆ ಅಂಡಮಾನ್ ಸೆಲ್ಯುಲಾರ್ ಜೈಲ್ ಸಾವರ್ಕರ್ ಅವರನ್ನು ಬಂಧಿಸಿಟ್ಟಿದ್ದ ಜೈಲು. ಭಾರತೀಯರ ಶ್ರದ್ಧಾಕೇಂದ್ರ.
ಆದ ಕಾರಣವೇ ನೆಹರೂ ಅದನ್ನು ನಿರ್ನಾಮ ಮಾಡಲು ಬಯಸಿದ್ದ.
ಅಂದಹಾಗೆ ಆ ಅಂಡಮಾನ್ ಸೆಲ್ಯುಲಾರ್ ಜೈಲ್ ಸಾವರ್ಕರ್ ಅವರನ್ನು ಬಂಧಿಸಿಟ್ಟಿದ್ದ ಜೈಲು. ಭಾರತೀಯರ ಶ್ರದ್ಧಾಕೇಂದ್ರ.
ಆದ ಕಾರಣವೇ ನೆಹರೂ ಅದನ್ನು ನಿರ್ನಾಮ ಮಾಡಲು ಬಯಸಿದ್ದ.
“ದೇಶಭಕ್ತಿಯ ಈ ವ್ರತವನ್ನು ನಾವು ಕಣ್ಣುಜ್ಜಿ ಸ್ವೀಕರಿಸಿಲ್ಲ. ಇತಿಹಾಸದ ಪ್ರಖರ ಬೆಳಕಿನಲ್ಲಿ ಈ ಮಾರ್ಗವನ್ನು ಪರೀಕ್ಷಿಸಿದ್ದೇವೆ. ದೃಢಪ್ರತಿಜ್ಞೆಯೊಂದಿಗೆ ಈ ದಿವ್ಯಾಗ್ನಿಯಲ್ಲಿ ಭಸ್ಮಗೊಳ್ಳುವ ನಿಶ್ಚಯ ಮಾಡಿದ್ದೇವೆ. ಆತ್ಮ ಬಲಿದಾನದ ವ್ರತವನ್ನು ನಾವು ಸ್ವೀಕರಿದ್ದೇವೆ.”
-ಸ್ವಾತಂತ್ರ್ಯ ವೀರ ಸಾವರ್ಕರ್
ಜಗತ್ತಿನಲ್ಲಿ ಎಲ್ಲೂ ಹಾಳೆಯ ಮೇಲೆ ಸ್ವಾತಂತ್ರ್ಯ ಬಂದಿಲ್ಲ, ಬರುವುದೂ ಇಲ್ಲ. ಬಂದೂಕಿನಿಂದ ಯೋಜನೆ ಮಂಡಿಸಿದಾಗ ಮಾತ್ರ ನೀವು ಸ್ವಾತಂತ್ರ್ಯ ಪಡೆಯಬಲ್ಲಿರಿ.
-ಸ್ವಾತಂತ್ರ್ಯ ವೀರ ಸಾವರ್ಕರ್
ಎರಡೆರಡು ಆಜನ್ಮ ಶಿಕ್ಷೆ ಪಡೆದಿರುವ ಜಗತ್ತಿನ ಮೊದಲ ಕೈದಿ #ಸಾವರ್ಕರ್.
ಸಾವರ್ಕರ್ ನಿಧನರಾದಾಗ ಲೋಕಸಭೆ ಅವರಿಗೆ ಗೌರವಾರ್ಪಣೆ ಮಾಡಬೇಕೆಂಬ ಪ್ರಸ್ತಾವನೆ ಬಂದಾಗ ಅದನ್ನು ಆಗಿನ ದೇಶದ್ರೋಹಿ ನೆಹರು ಪೋಷಿತ ಸಭಾಧ್ಯಕ್ಷರು ತಿರಸ್ಕರಿಸಿದರು. ಸಾವರ್ಕರ್ ಈ ಸಂಸತ್ತಿನ ಸದಸ್ಯರಾಗಿತಲಿಲ್ಲ ಎಂಬ ಕಾರಣ ನೀಡಿ. ಆದರೇ ಅದೇ ಸಂಸತ್ತು ಸದಸ್ಯರಲ್ಲದ ಗಾಂಧೀಜಿಗು, ಈ ದೇಶದವನೇ ಅಲ್ಲದ ಸ್ಟಾಲಿನ್ನನಿಗೂ ಗೌರವಾರ್ಪಣೆ ಮಾಡಿತ್ತು.
ಪ್ರಚ್ಛನ್ನ ಸಮರ ಸಾಕು, ಪ್ರತ್ಯಕ್ಷ ಯುದ್ಧದತ್ತ ಹೆಜ್ಜೆ ಹಾಕು.
-ಸ್ವಾತಂತ್ರ್ಯ ವೀರ ಸಾವರ್ಕರ್
ನಮ್ಮ ದೇಶ ದಾಸ್ಯದ ಕೂಪದಲ್ಲಿ ನರಳುತ್ತಿದೆವ. ನಾನು ಹೊರದೇಶಕ್ಕೆ ಹೋಗುತ್ತಿರುವ ಉದ್ದೇಶ ಒಂದೇ, ಹಿಂದುಸ್ಥಾನದ ಋಣ ತೀರಿಸಲು.
-ಸ್ವಾತಂತ್ರ್ಯ ವೀರ ಸಾವರ್ಕರ್
ನಾವು ರಾಮಾಯಣ, ಭಾಗವತಗಳನ್ನು ಪಾರಾಯಣ ಮಾಡುವಂತೆ , ಸ್ವಾತಂತ್ರ್ಯ ಲಕ್ಷ್ಮಿಯ ಇತಿಹಾಸವನ್ನು ಪಾರಾಯಣ ಮಾಡಬೇಕು.
-ಸ್ವಾತಂತ್ರ್ಯ ವೀರ ಸಾವರ್ಕರ್
ಸಾವರ್ಕರ್ ಅನುಭವಿಸಿದಷ್ಟು ಕಷ್ಟ, ಕೋಟಲೆಗಳನ್ನು, ದೀರ್ಘಕಾಲದ ಕಠಿಣ ಕಾರಾಗೃಹವನ್ನು ಅನುಭವಿಸಿದವರು ಭಾರತದಲ್ಲಿರಲಿ ,ಜಗತ್ತಿನಲ್ಲಿಯೇ ವಿರಳ. ಎಲ್ಲವೂ ದೇಶಕ್ಕಾಗೇ.
ಯಾವಾಗ ಕಣ್ಣು ತೆರೆಯುತ್ತೋ ಆಗ ಭೂಮಿ ಹಿಂದೂಸ್ಥಾನದಾಗಿರಲಿ
ಯಾವಗ ಕಣ್ಣು ಮುಚ್ಚುತ್ತೋ.. ಆಗ ವಿಚಾರ ಹಿಂದೂಸ್ಥಾನದಾಗಿರಲಿ
ನಾನು ಸತ್ತೋದರು ಚಿಂತಯಿಲ್ಲ ಆದರೆ ಸಾಯೋವಾಗಲು ಮಣ್ಣು ಹಿಂದೂಸ್ಥಾನದಾಗಿರಲಿ. ….
-ಸ್ವಾತಂತ್ರ್ಯ ವೀರ ಸಾವರ್ಕರ್
ಸಾವರ್ಕರ್ ಅವರ ಹಿತೈಷಿಗಳು ಕಾಂಗ್ರೆಸ್ಸನ್ನು ಸೇರುವಂತೆ ಕೇಳಿಕೊಂಡಾಗ ಸಾವರ್ಕರ್ ಹೇಳ್ತಾರೆ.
ನಾನು ಕಾಂಗ್ರೆಸ್ಸಿನ ಅನುಯಾಯಿಗಲು ಒಪ್ಪಿದರೆ ಆತ್ಮ ದ್ರೋಹಿಯು, ರಾಷ್ಟ್ರದ್ರೋಹಿಯು ಆಗಿರುತ್ತಿದ್ದೆ.
ನಾನು ಕಾಂಗ್ರೆಸ್ಸಿನ ಅನುಯಾಯಿಗಲು ಒಪ್ಪಿದರೆ ಆತ್ಮ ದ್ರೋಹಿಯು, ರಾಷ್ಟ್ರದ್ರೋಹಿಯು ಆಗಿರುತ್ತಿದ್ದೆ.
ನಿಮಗೆಲ್ಲ ಶತ್ರು ಯಾರೆಂದು ಗೊತ್ತಿದೆ. ಈಗ ನೇರವಾಗಿ ಸೈನ್ಯಕ್ಕೆ ಸೇರಿ. ಸರಿಯಾದ ಸಮಯಕ್ಕೆ ಆಯುಧಗಳನ್ನು ಶತ್ರುವಿನಡೆಗೆ ತಿರುಗಿಸಿ ಅಷ್ಟೇ !!
ಒಪ್ಪಂದಗಳ ಬಗ್ಗೆ ಚಿಂತಿಸಬೇಡಿ. ಆ ಒಪ್ಪಂದಗಳನ್ನು ತಿರುಗಿಸಿದರೆ ಅದು ಬರಿಯ ಹಾಳೆ. ಅಲ್ಲಿ ಹೊಸದೊಂದು ಒಪ್ಪಂದ ಬರೆದರಾಯಿತು!
ಜಗತ್ತಿನಲ್ಲಿ ಎಲ್ಲೂ ಹಾಳೆಯ ಮೇಲೆ ಸ್ವತಂತ್ರ ಬಂದಿಲ್ಲ, ಬರುವುದೂ ಇಲ್ಲ.
( ಭಾರತೀಯರಿಗೆ ಸೈನ್ಯಕ್ಕೆ ಸೇರಲು ಸಾವರ್ಕರ್ ಪ್ರೇರೆಪಿಸುತ್ತಿದ್ದ ಮಾತುಗಳು )
ಒಪ್ಪಂದಗಳ ಬಗ್ಗೆ ಚಿಂತಿಸಬೇಡಿ. ಆ ಒಪ್ಪಂದಗಳನ್ನು ತಿರುಗಿಸಿದರೆ ಅದು ಬರಿಯ ಹಾಳೆ. ಅಲ್ಲಿ ಹೊಸದೊಂದು ಒಪ್ಪಂದ ಬರೆದರಾಯಿತು!
ಜಗತ್ತಿನಲ್ಲಿ ಎಲ್ಲೂ ಹಾಳೆಯ ಮೇಲೆ ಸ್ವತಂತ್ರ ಬಂದಿಲ್ಲ, ಬರುವುದೂ ಇಲ್ಲ.
( ಭಾರತೀಯರಿಗೆ ಸೈನ್ಯಕ್ಕೆ ಸೇರಲು ಸಾವರ್ಕರ್ ಪ್ರೇರೆಪಿಸುತ್ತಿದ್ದ ಮಾತುಗಳು )
ಸಾವರ್ಕರ್ ಸಿಕ್ಕ ಸಿಕ್ಕಲ್ಲಿ ಗುಂಡು ಹೊಡೆದು ಅದನ್ನೆ ಕ್ರಾಂತಿ ಎನ್ನುತ್ತಿರಲಿಲ್ಲ. ,
ಲೇಖನಿ ಹಿಡಿದರೆ ಆ ಕಾಲಘಟ್ಟದ ಮಹಾಮಹಿಮರ ಲೇಖಕರನ್ನು ಮೀರಿಸುವಷ್ಟು ಪ್ರತಿಭಾವಂತ, ಪಿಸ್ತೂಲು ಹಿಡಿದರೆ ಎದುರಾಳಿಗಳ ರಕ್ತವೇ ತಣ್ಣಗಾಗುತ್ತಿತ್ತು, ಮಾತಿಗೆ ನಿಂತರೆ ಮೈಯೆಲ್ಲಾ ಕಿವಿಯಾಗಿ ಕೇಳಬೇಕೆನ್ನಿಸುವ ಮಧುರ ದನಿ.
ಲೇಖನಿ ಹಿಡಿದರೆ ಆ ಕಾಲಘಟ್ಟದ ಮಹಾಮಹಿಮರ ಲೇಖಕರನ್ನು ಮೀರಿಸುವಷ್ಟು ಪ್ರತಿಭಾವಂತ, ಪಿಸ್ತೂಲು ಹಿಡಿದರೆ ಎದುರಾಳಿಗಳ ರಕ್ತವೇ ತಣ್ಣಗಾಗುತ್ತಿತ್ತು, ಮಾತಿಗೆ ನಿಂತರೆ ಮೈಯೆಲ್ಲಾ ಕಿವಿಯಾಗಿ ಕೇಳಬೇಕೆನ್ನಿಸುವ ಮಧುರ ದನಿ.
“ಎಲೈ ಮೃತ್ಯುವೇ, ಬರುವುದಿದ್ದರೆ ನೀನೊಬ್ಬನೇ ಬಾ, ನಿನ್ನೊಂದಿಗೆ ರೋಗದ ಸೇನೆಯನ್ನು ಕರೆತಂದು ನನ್ನನ್ನು ನಿಷ್ಕ್ರಿಯನನ್ನಾಗಿ ಮಾಡದಿರು! ನಾನು ಉಸಿರಾಡುವ ಒಂದೊಂದು ಕ್ಷಣವೂ ಮಾತೃಭೂಮಿಯ ಶ್ರೇಯಸ್ಸಿಗಾಗಿಯೇ ಮುಡಿಪು. ಧ್ಯೇಯವಿಲ್ಲದ, ತ್ಯಾಗವಿಲ್ಲದ, ಬಲಿದಾನವಿಲ್ಲದ ರೋಗಕೂಪದಿಂದ ದೊರಕುವ ಯಕಃಶ್ಚಿತ್ ಸಾವು ನನಗೆ ಬೇಡ.”
– ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್
Mahesh Hiremath
Facebook link : https://m.facebook.com/maheshhiremathh
Post a Comment