Veerakesari 07:06
ವಿದ್ಯಾದೇಗುಲದಲ್ಲಿ ಹಿಂದೆಂದೂ ಕಾಣದ ಅಸಮಾನತೆಯ ವಿಸ್ಮಯ
ಅದೊಂದು ದಿನ ಹೆಣ್ಣು ಮಗಳೊಬ್ಬಳು ತಲೆಗೊಂದು ವಸ್ತ್ರ ಹಾಕಿ ಶಾಲೆಗೆ ಬಂದಿದ್ದಳು.. ಒಂದಿಬ್ಬರೂ ಮಕ್ಕಳು, ಸರ್’ನವರೂ ಆಕೆಯನ್ನೂ ವಿಚಾರಿಸಿದರೂ ಅದು ಇದು ಅಂದ್ಲು ಬಿಡಿ.. ನಂತರ ಅದು ಸಾಮಾನ್ಯವಾಯಿತು. ದಿನ ಕಳೆದಂತೆ ತರಗತಿಯ ಹಲವು ತಲೆಗಳಲ್ಲಿ ತಲೆವಸ್ತ್ರ ಕಂಡುಬಂತು.. ತದನಂತರ ಫುಲ್ ಬುರ್ಖಾನೇ ಹಾಕೋಕೆ ಶುರುವಿಟ್ಟುಕೊಂಡ್ರು..?
ಆಗ ಅದ್ಯಾರಿಗೂ ಯಾವುದೇ ಅಸಮಾನತೆ ರೀತಿ ಕಂಡುಬರಲಿಲ್ಲ, ಯಾವುದೇ ನ್ಯೂಸ್ ಪೇಪರ್’ನಲ್ಲಿ ಪ್ರಕಟವಾಗಲಿಲ್ಲ
ವಿದ್ಯಾದೇಗುಲವೂ ಧರ್ಮಯುದ್ಧದ ಕೇಂದ್ರವಾಗಲಿಲ್ಲ, ಯಾವುದೇ ಘರ್ಷಣೆಯಾಗಲಿಲ್ಲ, ಯಾವ ಬುದ್ಧಿಜೀವಿಯು ಚಕಾರವೆತ್ತಲಿಲ್ಲ.
ಆಶ್ಚರ್ಯ ಅಂದರೆ ಆ ಕಾಲಕ್ಕೆ ಅದು ಮುಂದೊಂದು ದಿನ ಅಲ್ಲೊಂದು ಕೋಮುವಾದಕ್ಕೆ ದಾರಿಯಾಗುವ ಯಾವುದೇ ಕುರುಹು ಆಗಿ ಯಾರಿಗೆ ಆಗಲಿ ಕಂಡುಬಂದಿರಲಿಲ್ಲ.
ಆದರೆ ಇಂದು ನಮ್ಮ ಪಕ್ಕದ ಊರಾದಪೆರುವಾಜೆಯಲ್ಲಿನ ಶಾಲಾದೇಗುಲದಲ್ಲಿ ಮೊದಲ್ಗೊಂಡ ಸಮಾನತೆಗಾಗಿನ ಶಾಂತತೆಯ ಮೌನ ಹೋರಾಟ ಮಂತ್ರವು.
ಪ್ರಗತಿಪರ ಬುದ್ಧಿವಂತ ಜನರಿಗೂ, ಎಲ್ಲಾ ಪೇಪರ್ ನವರಿಗೂ, ಎಲ್ಲಾ ಮೀಡಿಯಾದವರಿಗೂ, ಇದೊಂದು “ಕೇಸರಿಕರಣದ ಅಂಧಕಾರ“ವಾಗಿ ಕಂಡು ಬಂದು ಘರ್ಷಣೆಯ ಹಾದಿ ಆಗಿ ಮಾರ್ಪಡಿರುವುದು ಆಧುನಿಕ ಜಗತ್ತಿನ ವಿಪರ್ಯಾಸಗಳಲ್ಲೊಂದಲ್ಲವೇ..!!
 ✍ ಆಶಿತ್ ಕಲ್ಲಾಜೆ.

Post a Comment

Powered by Blogger.