Veerakesari 06:35
loading...
ಭಾಗವತಪುರಾಣದ ಪ್ರಕಾರ, ಒಮ್ಮೆ ಕುಮಾರರು ಅಂದರೆ ಬ್ರಹ್ಮನ ನಾಲ್ಕು ಮಾನಸಪುತ್ರರು (ಬ್ರಹ್ಮನ ಮನಸ್ಸಿನಿಂದ ಹುಟ್ಟಿದ ಮಕ್ಕಳು) ವಿಷ್ಣುನನ್ನು ನೋಡಲು, ವಿಷ್ಣುವಿನ ನಿವಾಸವಾದ ವೈಕುಂಠಕ್ಕೆ ಆಗಮಿಸಿದರು. ತಮ್ಮ ಧ್ಯಾನ ಶಕ್ತಿಯ ಕಾರಣದಿಂದ ಈ ನಾಲ್ವರು, ಹೆಚ್ಚು ವಯಸ್ಸಿನ ತಪೋ ಯೋಗಿಗಳಾಗಿದ್ದರು ಸಹ, ಸಣ್ಣ ಹುಡುಗರಂತೆ ಕಾಣಿಸುತ್ತಿದ್ದರು.

ಕುಮಾರರು ವೈಕುಂಠದ ಮುಖ್ಯದ್ವಾರ ಸಮೀಪಿಸಿದಾಗ, ಹೆಬ್ಬಾಗಿಲ ದ್ವಾರಪಾಲಕರಾದ ಜಯ ವಿಜಯ, ಅವರನ್ನು ಸಣ್ಣ ಮಕ್ಕಳು ಎಂದು ಭಾವಿಸಿ, ಅವರನ್ನು ತಡೆದರು. ವಿಷ್ಣು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದು, ಅವರು ಇಂತಹ ಸಮಯದಲ್ಲಿ ದೇವನನ್ನು ನೋಡಲು ಸಾಧ್ಯವಿಲ್ಲ ಎಂದು ತಿಳಿಸಿದರು. ಇದರಿಂದ ಕುಮಾರರು ಕೋಪಗೊಂಡ, ವಿಷ್ಣು ಯಾವಾಗಲೂ ತನ್ನ ಭಕ್ತರಿಗೆ ಲಭ್ಯವಿರಲೇ ಬೇಕು ಎಂದು ಹೇಳುತ್ತಾ ಈ ದ್ವಾರಪಾಲಕರಿಗೆ ಶಾಪ ನೀಡಿದರು. ಜಯ ವಿಜಯ ತಮ್ಮ ದೈವತ್ವದ ತ್ಯಜಿಸಿ, ವೈಕುಂಠದಿಂದ ಹೊರಹೋಗಿ, ಮನುಷ್ಯರ ಜನ್ಮ ತೆಗೆದುಕೊಂಡು ಸಾಮಾನ್ಯ ಮಾನವರಂತೆ ಬಾಳಬೇಕು ಎಂದು.

ಅಷ್ಟರಲ್ಲಿ ವಿಷ್ಣು ಅಲ್ಲಿ ಕಾಣಿಸಿಕೊಂಡರು ಮತ್ತು ಕುಮಾರರಿಗೆ ಜಯ ವಿಜಯರನ್ನು ಶಾಪದಿಂದ ಮುಕ್ತಿ ಪಡಿಸಲು ಕೋರಿಕೋಂಡರು. ಕುಮಾರರಿಗೆ ಈ ಶಾಪದಿಂದ ವ್ಯತಿರಿಕ್ತವಾಗದ ಕಾರಣ, ವಿಷ್ಣು ಜಯ ಮತ್ತು ವಿಜಯರಿಗೆ ಎರಡು ಆಯ್ಕೆಗಳನ್ನು ನೀಡಿದರು. ಮೊದಲನೇ ಆಯ್ಕೆಯ ಪ್ರಕಾರ ವಿಷ್ಣುವಿನ ಶತ್ರುಗಳಾಗಿ ಮೂರು ಬಾರಿ ಜನಿಸುವುದು ಅಥವ ವಿಷ್ಣುವಿನ ಭಕ್ತರಾಗಿ ಭೂಮಿಯ ಮೇಲೆ ಏಳು ಜನಿಸುವುದು. ಈ ಎರಡೂ ಆಯ್ಕೆಗಳಲ್ಲಿ ಒಂದು ಪೂರ್ಣಗೊಂಡ ನಂತರ, ಶಾಪದಿಂದ ಮುಕ್ತಿ ಪಡೆದು ಶಾಶ್ವತವಾಗಿ ವೈಕುಂಠದ ದ್ವಾರಪಾಲಕರಾಗಿ ಬರುವುದಾಗಿ ತಿಳಿಸಿದರು.

ಜಯ ವಿಜಯರು ವಿಷ್ಣುವಿನಿಂದ ದೂರವಿರಲು ಏಳು ಜನ್ಮದ ಕಾಲಾವಧಿಯನ್ನು ಬಯಸದೆ, ಶೀಘ್ರವಾಗಿ ವೈಕುಂಠಕ್ಕೆ ಹಿಂದಿರುಗಳು ಮೂರು ಬಾರಿ ವಿಷ್ಣುವಿನ ಶತ್ರುಗಳಾಗಿ ಜನ್ಮ ಪಡೆಯುವ ತೀರ್ಮಾನ ತೆಗೆದುಕೊಂಡರು. ಇದರ ಪ್ರಕಾರವಾಗಿ ಮೊದಲನೆ ಬಾರಿ ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷರ ಜನ್ಮ ಪಡೆದರು, ಕ್ರಮವಾಗಿ ನರಸಿಂಹ ಮತ್ತು  ವರಾಹ ಅವತಾರದಿಂದ ಕೊಲ್ಲಲ್ಪಟ್ಟರು. ಎರಡನೆ ಬಾರಿಗೆ ರಾವಣ ಮತ್ತು ಕುಂಭಕರ್ಣರಾಗಿ ರಾಮನ ಅವತಾರದಿಂದ ಹತ್ಯೆಗೊಂಡರು. ಮೂರನೇ ಬಾರಿ ಶಿಶುಪಾಲ ಮತ್ತು ದಂತವಕ್ರರಾಗಿ ವಿಷ್ಣುವಿನ ಕೃಷ್ಣನ ಅವತಾರದಿಂದ ಕೊಲ್ಲಲ್ಪಟ್ಟರು. ನಂತರ, ಅಂತಿಮವಾಗಿ ಜಯ-ವಿಜಯ ಶಾಪಗಳಿಂದ ಬಿಡುಗಡೆಯನ್ನು ಪಡೆದರು

- ಪ್ರಶಾಂತ್ ಬೆಳಗಟ್ಟಿ(MyTemple team)
loading...

Post a Comment

Powered by Blogger.