Veerakesari 20:50
​ರಾಮಾಯಣದ ಬಗ್ಗೆ ಗೊತ್ತಿಲ್ಲದವರು ಯಾರಿದ್ದಾರೆ ಹೇಳಿ.ಬಹಳಷ್ಟು ಜನರಿಗೆ ಇದರ ಬಗ್ಗೆ ಗೊತ್ತಿದೆ.ರಾಮನು 14 ವರ್ಷ ವನವಾಸ ಮಾಡಿದ್ದು,ರಾವಣ ಸೀತೆಯನ್ನು ಅಪಹರಿಸಿದ್ದು,ಆತನನ್ನು ಸಂಹರಿಸಿ ಸೀತೆಯನ್ನು ಹಿಂದೆ ತರುವುದು. ಹೀಗೆ ಅನೇಕ ಶ್ಲೋಕಗಳಲ್ಲಿ ಆ ಪುರಾಣವಿರುತ್ತದೆ.ರಾಮಾಯಣದಲ್ಲಿಯ ವಿಶೇಷತೆಗಳು,ನಡೆಯುವ ಸಂಘಟನೆಗಳು ಬಹಳಷ್ಟು ಜನರಿಗೆ ಗೊತ್ತಿದ್ದರೂ, ಅನೇಕ ಜನರಿಗೆ ಗೊತ್ತಿಲ್ಲದ ವಿಷಯವೊಂದಿದೆ.ಅದೇನೆಂದರೆ.
ರಾವಣ ಸೀತೆಯನ್ನು ಅಪಹರಿಸುತ್ತಾನಲ್ಲವೇ. ಹಲವು ತಿಂಗಳುಗಳಕಾಲ ತನ್ನ ಬಳಿಯೇ ಬಂಧಿಸಿಟ್ಟಿರುತ್ತಾನೆ. ನಂತರ ರಾಮ ಸೀತೆಯನ್ನು ಹುಡುಕಿಕೊಂಡು ಬಂದು,ರಾವಣನನ್ನು ಸಂಹರಿಸಿ,ಸೀತೆಯನ್ನು ಕರೆದುಕೊಂಡು ಹೋಗುತ್ತಾನೆ. ಆದರೆ, ರಾವಣನ ಬಳಿ ಸೀತೆ ಇದ್ದ ಅವಧಿಯಲ್ಲಿ,ರಾವಣ ಒಮ್ಮೆಯೂ ಸೀತೆಯನ್ನು ಮುಟ್ಟಲೇಯಿಲ್ಲ.ಹೌದು.ನೀವು ಕೇಳುತ್ತಿರುವುದು ನಿಜ. ಈ ಕಾಲದ ಖಳನಾಯಕರಾಗಿದ್ದರೆ ಆ ಮಹಾ ತಾಯಿಗೆ ತೊಂದರೆಯಾಗುತ್ತಿತ್ತು.ರಾಕ್ಷಸನಾಗಿದ್ದುಕೊಂಡು ರಾವಣ ಸೀತೆಯನ್ನು ಮುಟ್ಟಲೇಯಿಲ್ಲ.ಏಕೆಂದರೆ.
ನಿಮಗೆ ರಂಭೆ ಗೊತ್ತಲ್ಲವೇ?ಇಂದ್ರನ ಬಳಿ ಸ್ವರ್ಗದಲ್ಲಿರುತ್ತಾಳೆ. ದಿನ ನಿತ್ಯ ಗಾನ,ನೃತ್ಯಗಳಲ್ಲಿ. . . .ಅಬ್ಬಬ್ಬ. ಆ ವೈಭೋಗವೇ ವೈಭೋಗ. ಆದರೆ, ರಾವಣಸೀತೆಯನ್ನು ಅಪಹರಿಸಿಕೊಂಡು ಹೋಗುವುದಕ್ಕೆ ಕೆಲವು ವರ್ಷಗಳ ಹಿಂದೆಯೇ ಒಮ್ಮೆ ಸ್ವರ್ಗಕ್ಕೆ ಹೋಗಿದ್ದನಂತೆ. ಆಗ ಅಲ್ಲಿದ್ದ ರಂಭೆಯನ್ನು ನೋಡಿ ವಿಚಲಿತನಾದನಂತೆ. ತನ್ನೊಟ್ಟಿಗೆ ಕಾಲ ಕಳೆಯುವಂತೆ ಬಲಾತ್ಕರಿಸುತ್ತಾನೆ. ಇದಕ್ಕೆ ರಂಭೆ ಒಪ್ಪುವುದಿಲ್ಲ, ಆದರೂ ಪಟ್ಟು ಬಿಡದೆ ರಂಭೆಯ ಹಿಂದೆ ಬೀಳುತ್ತಾನೆ. ಇದನ್ನು ನೋಡಿದ ರಂಭೆಯ ಪ್ರಿಯಕರ ನಳಕುಬೇರ, ಇಷ್ಟವಿಲ್ಲದ ಯಾವುದೇ ಯುವತಿಯನ್ನು ಮುಟ್ಟಿದರೆ ರಾವಣನ ತಲೆಗಳು ಒಡೆದುಹೋಗುವಂತೆ ಶಪಿಸುತ್ತಾನೆ. ಇದರಿಂದಾಗಿ ರಾವಣನು ಅಲ್ಲಿಂದ ಹಿಂದಿರುಗುತ್ತಾನೆ. ಈ ಘಟನೆ ಮುಗಿದರೂ ನಳಕುಬೇರ ತನಗೆ ನೀಡಿದ ಶಾಪ ರಾವಣನ ಮನಸ್ಸಿಲ್ಲಿ ಅಚ್ಚಳಿಯದೇ ಉಳಿದಿರುತ್ತದೆ. ಅಷ್ಟು ತಿಂಗಳುಗಳ ಕಾಲ ಸೀತೆಯನ್ನು ಬಂಧಿಯಾಗಿರಿಸಿಕೊಂಡಿದ್ದರೂ ರಾವಣ ಸೀತೆಯನ್ನು ಮುಟ್ಟುವ ಸಾಹಸ ಮಾಡದಿರುವ ಹಿಂದಿರುವ ಗುಟ್ಟು.
Kannada AP2TG 

Post a Comment

Powered by Blogger.