loading...
ಸಿಪಿಎಮ್ ಉಗ್ರರು ಮನೆಗೆ ಬೆಂಕಿ ಹಚ್ಚಿದ್ದರಿಂದ ತೀವ್ರವಾಗಿ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗಿದೆ ಕೊನೆಯುಸಿರೆಳೆದಿದ್ದಾರೆ. ಇವರ ಭಾವ (ಗಂಡನ ಅಣ್ಣ) ಕೂಡ ಜನವರಿ 6ರಂದು ಮೃತಪಟ್ಟಿದ್ದರು.
ಡಿಸೆಂಬರ್ 28 ರಂದು ರಕ್ತದಾಹಿ ಸಿಪಿಎಮ್ ಉಗ್ರರು ಬಿಜೆಪಿ ಕಾರ್ಯಕರ್ತ ರಾಧಾಕೃಷ್ಣನ್ ಅವರ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಗೆ ಬೆಂಕಿ ಹಚ್ಚಿದ್ದಾರೆ, ಆ ಬೆಂಕಿ ಅಲ್ಲೇ ಇದ್ದ ಗ್ಯಾಸ್ ಸಿಲಿಂಡರ್ ಗೆ ಹತ್ತಿಕೊಂಡಿದ್ದು ಇಡೀ ಮನೆಗೆ ಬೆಂಕಿ ಹತ್ತಿಕೊಂಡಿದೆ. ಆ ಸಂದರ್ಭದಲ್ಲಿ ಮನೆ ಒಳಗಿದ್ದ ರಾಧಾಕೃಷ್ಣನ್ ,ಅವರ ತಮ್ಮ ಕಣ್ಣನ್ ಹಾಗೂ ಅವರ ಹೆಂಡತಿ ವಿಮಲ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಬೆಂದು ಹೋಗಿದ್ದರು. ಇದರಲ್ಲಿ ರಾಧಾಕೃಷ್ಣನ್ ಅವರು ಜನವರಿ 6ರಂದೇ ಮೃತಪಟ್ಟಿದ್ದರೆ ನಿನ್ನೆ ವಿಮಲ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
ವಿಮಲ ಅವರನ್ನು 40% ಸುಟ್ಟಗಾಯಗಳೊಂದಿಗೆ ಪಾಲಕ್ಕಾಡ್ ಆಸ್ಪತ್ರೆಗೆ ದಾಖಲಿಸುವುದು ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ನಿನ್ನೆ ಬೆಳಗ್ಗೆ 9ಗಂಟೆ ಸುಮಾರಿಗೆ ಅವರು ಕೊನೆಯುಸಿರೆಳೆದರು. ಸಿಪಿಎಮ್ ಉಗ್ರರ ರಕ್ತದಾಹಕ್ಕೆ ಮತ್ತೊಂದು ಅಮಾಯಕ ಜೀವ ಬಲಿಯಾಯಿತು.
loading...
Post a Comment