Veerakesari 21:56
loading...
ಉತ್ತರಪ್ರದೇಶದ ಹೃಷಿಕೇಶದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ರಾಲಿಯಲ್ಲಿ ನೆರೆದಿದ್ದ ಜನರ ಎದುರಲ್ಲಿ ರಾಹುಲ್ ಗಾಂಧಿ ತನ್ನ ಹರಿದ ಕುರ್ತ ತೋರಿಸಿ "ಮೋದಿ ಬೆಳೆಬಾಳುವ ಬಟ್ಟೆಗಳನ್ನು ಧರಿಸಿ ಓಡಾಡುತ್ತಾರೆ, ಆದರೆ ನನ್ನ ಕುರ್ತ ಹರಿದಿದೆ ಆದರೂ ಪರವಾಗಿಲ್ಲ. ದೇಶಾದ್ಯಂತ ಜನರು ಬಡತನ ಎದುರಿಸುತ್ತಿದ್ದಾರೆ. ಮೋದಿ ಬಡತನ ನಿವಾರಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ" ಎಂದು ಆರೋಪಿಸಿದ್ದರು.
ಇದನ್ನು ನೋಡಿದ್ದ ಗಾಝಿಯಾಬಾದ್ ನಿವಾಸಿ ಮುಕೇಶ್ ಕುಮಾರ್ ಮಿತ್ತಲ್ ತನ್ನ ಸಂಬಳದಿಂದ 100/- ರೂಪಾಯಿ ಡಿಡಿ ಮುಖಾಂತರ ರಾಹುಲ್ ಗಾಂಧಿಯವರಿಗೆ ಕಳಿಸಿದ್ದಾರೆ. ಡಿಡಿ ಜೊತೆ ಪತ್ರವೊಂದನ್ನು ಪೋಸ್ಟ್ ಮಾಡಿದ್ದು. ಅದರಲ್ಲಿ,
ರಾಹುಲ್ ಗಾಂಧಿ ರ್ಯಾಲಿಯಲ್ಲಿ ಹರಿದ ಕುರ್ತಾ ತೋರಿಸಿ ತಮ್ಮ ಕಷ್ಟ ತೋಡಿಕೊಂಡಿದ್ದರು. ಅದನ್ನು ನೋಡಿ ನನಗೆ ತುಂಬಾ ನೋವಾಗಿದ್ದು, ನಾನು ನನ್ನ ಸಂಬಳದಿಂದ ನೂರು ರೂಪಾಯಿಯನ್ನು ರಾಹುಲ್ ಗಾಂಧಿಯವರಿಗೆ ಕಳಿಸಿದ್ದೇನೆ. ಅವರು ಆ ಹಣದಲ್ಲಿ ತಮ್ಮ ಕುರ್ತಾವನ್ನು ಹೊಲಿಸಿ ಧರಿಸಲಿ ಎಂದಿದ್ದಾರೆ.
loading...

Post a Comment

Powered by Blogger.