Veerakesari 23:45
loading...
ಕ್ರಾಂತಿಸಿಂಹಗಳ ಮಿಂಚಿನಂತ ಮಾತುಗಳು : ಭಾಗ 1
ಯುದ್ಧವಿಲ್ಲದೇ ಸ್ವಾತಂತ್ರ್ಯ ದಕ್ಕದು ಗೆಳೆಯಾ!  ಸ್ವರಾಜ್ಯ ಬೇಕಿದ್ದರೆ, ತಗೋ ಕತ್ತಿ ತೋರು ಕೆಚ್ಚೆದೆಯಾ! !
ಸ್ವಾತಂತ್ರ್ಯ ವೀರ ಸಾವರ್ಕರ್

ಗಿಣಿಗಳಿಂದ ಗಿಡುಗಗಳನ್ನು ಸೋಲಿಸುವೆ, ನನ್ನ ಒಬ್ಬೊಬ್ಬ ಸೈನಿಕನು ಶತ್ರುಗಳ ಲಕ್ಷ ಸೈನಿಕರೊಂದಿಗೆ ಹೋರಾಡುವಂತೆ ಮಾಡುವೆ.
ಗುರು ಗೋವಿಂದ ಸಿಂಗ್

“ಭಾರತವು ಬದುಕಬೇಕಾದರೆ, ವ್ಯಕ್ತಿ  ಸಾಯಬೇಕು. ಇಂದು ಭಾರತವು ಸ್ವಾತಂತ್ರ್ಯ ಹೊಂದಬೇಕಾದರೆ, ನಾನು ಸಾಯಬೇಕು.” 
ಮದನ್ ಲಾಲ್ ಧಿಂಗ್ರಾ

“ರಾಜಕೀಯ ಹಕ್ಕುಗಳೆಂದೂ ಭಿಕ್ಷೆ ಬೇಡುವುದರಿಂದ ದೊರೆಯುವುದಿಲ್ಲ.” 
- ಬಾಲಗಂಗಾಧರ್ ತಿಲಕ್

"ನಾನು ಗಲ್ಲಿನ ಉರುಳಿಗೆ ನಗುತ್ತ ಕೊರಳಿಟ್ಟರೆ ಅದು ಭಾರತದ ತಾಯಂದಿರಿಗೆ ಒಂದು ಪ್ರೇರಣೆಯ ವಿಷಯವಾದೀತು ಹಾಗೂ ಅವರೂ ತಮ್ಮ ಸಂತಾನ #ಭಗತ್ ಸಿಂಗನಂತಾಗಲಿ ಎಂದು ಬಯಸುತ್ತಾರೆ.
ಸರದಾರ ಭಗತ್ ಸಿಂಗ್(23 ಮಾರ್ಚ್, 1931)

"ಈ ಸ್ವಾತಂತ್ರ್ಯ ಸಂಘರ್ಷದ ಬಳಿಕ ಯಾರು ಉಳಿಯುತ್ತಾರೆ ,ಯಾರು ಇಲ್ಲ ಎಂಬುದನ್ನು ನಾನರಿಯೆ.  ಆದರೆ ಅಂತಿಮ  ವಿಜಯ ನಮ್ಮದು ಎಂಬುದು ನಿಶ್ಚಿತ.  ನಮ್ಮ ವಿಜಯೀ ಸೈನಿಕರು ಆಂಗ್ಲಪ್ರಭುತ್ವದ ಸಮಾಧಿಗೈದು ಕೆಂಪುಕೋಟೆಯ ಎದುರು ಸಂಚಲನ ಮಾಡುವಾಗಲೇ ನಮ್ಮ ಧ್ಯೇಯ ಪೂರ್ಣವಾಗುವುದು."
ನೇತಾಜಿ ಸುಭಾಷ್ ಚಂದ್ರ ಬೋಸ್
ಜೈ ಹಿಂದ್
ಲೇಖಕರು : ಮಹೇಶ್ ಹಿರೇಮಠ
loading...

Post a Comment

Powered by Blogger.