Veerakesari 23:18
loading...
ಶ್ರೀ ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಮರು ನಿರ್ಮಾಣ ಮಾಡುವ ಬಗ್ಗೆ ಭರವಸೆ ನೀಡಿದರೆ ಮಾತ್ರ ಉತ್ತರ ಪ್ರದೇಶದಲ್ಲಿ ನಡೆಯುವ ಚುಣಾವಣೆಯಲ್ಲಿ ಸಾಧು ಸಂತರು, ಮಠಾಧೀಶರು ಭಾರತೀಯ ಜನತಾ ಪಕ್ಷವನ್ನು ಬೆಂಬಲ ನೀಡಲಿದ್ದಾರೆ ಎಂದು ಶ್ರೀ ರಾಮ ಮಂದಿರದ ಪ್ರಧಾನ ಅರ್ಚಕರಾಗಿರುವ ಆಚಾರ್ಯ ಸತ್ಯೇಂದ್ರ ದಾಸ್ ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ಮರು ನಿರ್ಮಾಣ ಸಮಸ್ತ ಹಿಂದೂಸ್ತಾನೀಯರ ಕನಸು, ಇಲ್ಲಿರುವ ಮಠಾಧೀಶರು ಮತ್ತು ಸಾಧು ಸಂತರು ಪ್ರಭು ಶ್ರೀರಾಮನ ಪರಮ ಭಕ್ತರಾಗಿದ್ದೇವೆ, ಪ್ರತಿಯೊಬ್ಬರೂ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರವನ್ನು ಕಾಣುವ ಬಯಕೆ ಹೊಂದಿದ್ದು ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರದಲ್ಲಿರುವುದರಿಂದ ಶ್ರೀರಾಮ ಮಂದಿರ ನಿರ್ಮಾಣವಾಗಲಿದೆ ಎಂಬ ಆಶಾಭಾವನೆಯಿದೆ ಎಂದಿದ್ದಾರೆ.
ಉತ್ತರಪ್ರದೇಶ ಚುಣಾವಣೆಗೆ ಮೊದಲು ಪ್ರಧಾನಿ ನರೇಂದ್ರ ಮೋದಿ ಶ್ರೀ ರಾಮ ಜನ್ಮ ಭೂಮಿ ಅಯೋಧ್ಯೆಗೆ ಭೇಟಿ ನೀಡಿ ಪ್ರಭು ಶ್ರೀರಾಮನಿಗೆ ಮಂದಿರ ಕಟ್ಟೋ ಭರವಸೆ ನೀಡಬೇಕು. ಅಂದರೆ ಮಾತ್ರ ನಾವು ಎಲ್ಲಾ ಮಠಾಧಿಪತಿಗಳು, ಸಾಧುಸಂತರು ಉತ್ತರಪ್ರದೇಶದಲ್ಲಿನ ಸಮಸ್ತ ಹಿಂದೂ ಬಾಂಧವರನ್ನು ಒಂದುಗೂಡಿಸಿ ಬಿಜೆಪಿ ಗೆ ಮತ ನೀಡುವಂತೆ ಮನವೊಲಿಸುತ್ತೇವೆ. ಉತ್ತರಪ್ರದೇಶದಲ್ಲಿ ನಮಗೆ ಸಾಕಷ್ಟು ಜನ ಬೆಂಬಲವಿದೆ ಎಂದರು.
ಬಿಜೆಪಿಯ ಲಾಲ್ ಕೃಷ್ಣ ಅಡ್ವಾಣಿ ಹಾಗೂ ಇತರ ಸಂಸದರು ರಾಮ ಮಂದಿರ ನಿರ್ಮಾಣದ ಹೆಸರು ಹೇಳಿ ಅಧಿಕಾರಕ್ಕೆ ಬಂದರೂ ಕೂಡ ಸಂಸತ್ತಿನಲ್ಲಿ ಇದುವರೆಗೆ ಒಮ್ಮೆಯೂ ಮದಿರ ನಿರ್ಮಾಣದ ಬಗ್ಗೆ ಧ್ವನಿ ಎತ್ತಿಲ್ಲ ಎಂದು ಅಯೋಧ್ಯೆಯ ರಸಿಕ ನಿವಾಸ ದೇವಸ್ಥಾನದ ಅರ್ಚಕರಾದ ರಘುವೀರ್‌ ಶರಣ್‌ ಆರೋಪಿಸಿದರು. ಲಾಲ್ ಕೃಷ್ಣ ಆಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾ ಭಾರತಿ, ವಿನಯ್‌ ಕಟಿಯಾರ್‌ ಸೇರಿದಂತೆ ಬಹುತೇಕ ಬಿಜೆಪಿ ನಾಯಕರು ಮಂದಿರದ ಹೆಸರಿನಲ್ಲಿ ಅಧಿಕಾರ ಪಡೆದರು ಇದುವರೆಗೆ ಮಂದಿರ ನಿರ್ಮಾಣದ ಬಗ್ಗೆ ಒಮ್ಮೆಯೂ ಪ್ರಧಾನಿಯೊಂದಿಗೆ ಚರ್ಚಿಸಿಲ್ಲ ಎಂದೂ ದೂರಿದರು.
Like our page : http://facebook.com/veerakesari.in
ಉತ್ತರ ಪ್ರದೇಶ ಚುಣಾವಣೆ ಗೆಲ್ಲುವುದು ಬಿಜೆಪಿಗೆ ಪ್ರತಿಷ್ಠೆಯ ವಿಷಯವಾಗಿದ್ದು ಈಗ ಸ್ವಾಮೀಜಿಗಳ ಈ ನಿಲುವು ಬಿಜೆಪಿಗೆ ಭಾರೀ ಹೊಡೆತ ನೀಡಲಿದೆ. ಒಂದು ವೇಳೆ ಪ್ರಧಾನಿ ಅಯೋಧ್ಯೆಗೆ ತೆರಳಿ ಮಂದಿರ ನಿರ್ಮಾಣದ ಭರವಸೆ ನೀಡದೆ ಹೋದರೆ ಉತ್ತರ ಪ್ರದೇಶದ ಹಿಂದೂ ಸಮಾಜ ಬಿಜೆಪಿ ವಿರುದ್ಧ ತಿರುಗಿ ನಿಲ್ಲೋದು ಖಂಡಿತ. 
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಹಿಂದೂಸ್ತಾನದಲ್ಲಿ ಗೋಹತ್ಯೆ ನಿಶೇಧ ಮಾಡೋ ಭರವಸೆ ನೀಡಿ ಎರಡನೇ ಭಾರಿ ಕೇಂದ್ರದಲ್ಲಿ ಅಧಿಕಾರ ಪಡೆದ ಬಿಜೆಪಿ ಇನ್ನುಳಿದ ಎರಡುವರೆ ವರ್ಷಗಳ ಆಡಳಿತಾವದಿಯಲ್ಲಿ ಇದನ್ನೂ ಕಾರ್ಯರೂಪಕ್ಕೆ ತರದೇ ಹೋದರೆ ಉತ್ತರ ಪ್ರದೇಶ ಏನೂ ಇಡೀ ಹಿಂದೂಸ್ತಾನೀಯರೆ ಬಿಜೆಪಿ ವಿರುದ್ಧ ನಿಲ್ಲೋದು ಸ್ಪಷ್ಟ. ಕೇವಲ ದೇಶವನ್ನು ಆರ್ಥಿಕವಾಗಿ ಉದ್ದಾರ ಮಾಡಿದರೆ ಸಾಲದು, ಜಿಹಾದಿಗಳ ಆಕ್ರಮಣದಿಂದ ಹಿಂದೂಸ್ತಾನ ಕಳೆದುಕೊಂಡದ್ದನ್ನು ಮರು ನಿರ್ಮಾಣ ಮಾಡಬೇಕು ಹಾಗಾಗಿ ದೇಶ ಧಾರ್ಮಿಕವಾಗಿಯೂ ಏಳಿಗೆಯಾಗಬೇಕಾದ ಅವಶ್ಯಕತೆ ಇದೆ.ಕೇವಲ ಆರ್ಥಿಕತೆಯಲ್ಲಿ ದೇಶವನ್ನು ಉದ್ದಾರ ಮಾಡಿ ಮುಂದಿನ ಚುಣಾವಣೆಯಲ್ಲಿ ಗೆಲ್ಲಬಹುದು ಎಂಬ ಕನಸನ್ನು ಬಿಜೆಪಿ ಏನಾದರು ಕಾಣುತ್ತಿದ್ದರೆ ತಕ್ಕ ಉತ್ತರ ನೀಡಲು ಹಿಂದೂ ಸಮಾಜ ಸಿದ್ದವಿದೆ.
ಯಾವುದೋ ಪರಕೀಯ ಜಿಹಾದಿ ಬಾಬರನ ಸಂತಾನಗಳನ್ನು ಓಲೈಸಲು ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಮಾಡಲು ಹಿಂದೇಟು ಹಾಕುವುದು ಎಷ್ಟು ಸರಿ. ಹಿಂದೂಸ್ತಾನದಲ್ಲಿ ರಾಜಕಾರಣಿಗಳು ಅಲ್ಪಸಂಖ್ಯಾತರ ಓಲೈಸಲು ಬಹು ಸಂಖ್ಯಾತ ಹಿಂದೂ ಸಮಾಜವನ್ನು ಮೂಲೆಗುಂಪು ಮಾಡುವುದು ಸರಿಯೇ. ನರೇಂದ್ರ ಮೋದಿ ಆಡಳಿತಾವದಿಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಸಮಸ್ತ ಹಿಂದೂಸ್ತಾನದಲ್ಲಿ ಗೋಹತ್ಯೆ ನಿಶೇಧ ಮಾಡದೆ ಹೋದರೆ ಮುಂದಿನ ಚುಣಾವಣೆಯಲ್ಲಿ ನೀವು ಬಿಜೆಪಿಯನ್ನು ಬೆಂಬಲಿಸುತ್ತೀರ.?
loading...

Post a Comment

Powered by Blogger.