Veerakesari 22:18
veerakesari.in
​ಸವಣೂರಿನಲ್ಲಿ ಮೇ 1 ರಂದು ಹಿಂದೂ ಜಾಗರಣೆ ವೇದಿಕೆಯ ವತಿಯಿಂದ ಆಯೋಜಿಸಲಾಗಿರುವ ವಿರಾಟ್ ಹಿಂದೂ ಶಕ್ತಿ ಸಂಗಮ ಕಾರ್ಯಕ್ರಮಕ್ಕೆ ಭರದ ಸಿದ್ದತೆ ನಡೆಯುತ್ತಿದೆ. ಪೂರ್ತಿ ಸವಣೂರು ಪೇಟೆ ಕೇಸರಿಮಯವಾಗಿದೆ. ಕೇಸರಿ ಬಂಟಿಂಗ್ಸ್, ಕೇಸರಿ ಪತಾಕೆಗಳಿಂದ ಸವಣೂರು ಕಂಗೊಳಿಸುತ್ತಿದೆ.
ಕಾರ್ಯಕ್ರಮ ನಡೆಯುವ ಸುತ್ತಮುತ್ತ, ಕೇಸರಿಮಯವಾದ ವಾತಾವರಣ ಸೃಷ್ಟಿಸಲು ಹಿಂದೂ ಸಂಘಟನೆಯ ಕಾರ್ಯಕರ್ತರು ಅಹೋ-ರಾತ್ರಿ ದುಡಿಯುತ್ತಿದ್ದಾರೆ.ಸವಣೂರು ಬಸದಿ ವಠಾರದಲ್ಲಿ “ವಿರಾಟ್ ಹಿಂದೂ ಶಕ್ತಿ ಸಂಗಮ” ಕಾರ್ಯಕ್ರಮವನ್ನು ಸಂಘಟಿಸಲಾಗಿದೆ. ಮೇ 1 ರಂದು ಸಂಜೆ 4 ಗಂಟೆಗೆ ಸರಿಯಾಗಿ ಮಾಂತೂರಿನಿಂದ ಸವಣೂರಿನ ತನಕ ಶೋಭಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಶೋಭಾ ಯಾತ್ರೆಯಲ್ಲಿ ಹತ್ತು ಸಾವಿರಕ್ಕಿಂತಲೂ ಅಧಿಕ ಹಿಂದೂಗಳು ಭಾಗವಹಿಸುವ ಸಾಧ್ಯತೆ ಇದೆ ಎಂದು ಸಂಘಟಕರು ತಿಳಿಸಿದ್ದಾರೆ. ಸುಮಾರು 1000 ಪೊಲೀಸರನ್ನು ಭಧ್ರತೆಗೆ ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಕಾರ್ಯಕ್ರಮದ ದಿಕ್ಸೂಚಿ ಭಾಷಣಕಾರರಾಗಿ ಹಿಂಜಾವೇಯ ಕ್ಷೇತ್ರೀಯ ಸಂಘಟನ ಕಾರ್ಯದರ್ಶಿ (ದಕ್ಷೀಣ ಭಾರತ) ಜಗದೀಶ್ ಕಾರಂತ್ ಅವರು ಆಗಮಿಸಲಿದ್ದಾರೆ. ಕಾರ್ಗಿಲ್ ಹುತಾತ್ಮ ಹವಾಲ್ದಾರ್ ದೋಳ್ಪಾಡಿ ಪರಮೇಶ್ವರ ಗೌಡರ ಧರ್ಮ ಪತ್ನಿ ಶ್ರೀಮತಿ ಪುಷ್ಪಾವತಿ ಅವರು ಕಾರ್ಯಕ್ರಮವನ್ನು ಉಧ್ಗಾಟಿಸಲಿದ್ದಾರೆ. ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿಜಿಗಳ ಅಶಿರ್ವಚನಗೆಯ್ಯಲಿದ್ದರೆ.

ಕಾರ್ಯಕ್ರಮದ ಪ್ರಚಾರಾರ್ಥ ಅಳವಡಿಸಲಾಗಿದ್ದ ಬ್ಯಾನರ್ ಅನ್ನು ಕಿಡಿಗೇಡಿಗಳು ಹರಿದದ್ದು, ದಿಕ್ಸೂಚಿ ಭಾಷಣಕಾರರಾಗಿ ಅಗಮಿಸಲಿರುವ ಜಗದೀಶ್ ಕಾರಂತ್ ಅವರಿಗೆ 10ಲಕ್ಷ ರೂಪಾಯಿ ಬಾಂಡ್ ನೀಡುವಂತೆ ನೋಟೀಸ್ ನೀಡಿದ್ದು ರಾಜ್ಯವ್ಯಾಪಿ ಸುದ್ದಿಯಾಗಿ ವಿವಾದವೆದ್ದಿತ್ತು. ಹಾಗಾಗಿ ಈ ಕಾರ್ಯಕ್ರಮವನ್ನು ಅಭೂತಪೂರ್ವ ಯಶಸ್ಸುಗೊಳಿಸಲು ಸಂಘಪರಿವಾರದ ಎಲ್ಲಾ ಸಂಘಟನೆಗಳು ಟೊಂಕ ಕಟ್ಟಿ ನಿಂತಿವೆ.
ಸವಣೂರಿನಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿ ಮಾಡುವಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಸಫಲರಾಗಿದ್ದಾರೆ. ಮಧ್ಯ ರಾತ್ರಿಯವರೆಗೆ ಕೆಲಸ ಮಾಡುವ ಹಿಂದೂ ಯುವಕರು ಕೇಸರಿ ಪತಾಕೆ ಹಾಗು ಬಂಟಿಗ್ಸ್ ಗಳಿಂದ ಅಲಂಕರಿಸಿ ಎಲ್ಲರನ್ನು ಹುಬ್ಬೇರುವಂತೆ ಮಾಡಿದ್ದಾರೆ.
News Source - TNW News
loading...

Post a Comment

Powered by Blogger.