Veerakesari 04:59
veerakesari.in
​ಪಾಕಿಸ್ತಾನದ ಜಿಹಾದಿ ಸೇನೆ ಇಬ್ಬರು ಭಾರತೀಯ ಸೈನಿಕರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಕ್ಕೆ ಗುಜರಾತ್ ನ ಆನಂದ್ ಜಿಲ್ಲೆಯಲ್ಲಿ ಅಪರಿಚಿತ ಯುವಕರ ಗುಂಪೊಂದು ಸಾರ್ವಜನಿಕ ರಸ್ತೆಗೆ ಪಾಕಿಸ್ತಾನದ ಬಾವುಟದ ಬಣ್ಣ ಬಳಿದು ತಮ್ಮ ಪ್ರತಿಭಟನೆ ತೋರ್ಪಡಿಸಿದ್ದಾರೆ. ರಸ್ತೆಗೆ ಪಾಕಿಸ್ತಾನಿ ಬಾವುಟದ ಬಣ್ಣ ಬಳಿದು ಅದರ ಮೇಲೆ ನಿಂತುಕೊಂಡು ಭಾರತದ ತ್ರಿವರ್ಣ ಧ್ವಜ ಕೈಯಲ್ಲಿ ಹಿಡಿದು ಪಾಕಿಸ್ತಾನ ವಿರೋಧಿ ಘೋಷಣೆಗಳನ್ನೂ ಕೂಗಿದ್ದಾರೆ.
ಆದರೆ ನಾಗರೀಕ ಆಸ್ತಿಪಾಸ್ತಿ ಹಾನಿ ಹಾಗೂ ಪಾಕಿಸ್ತಾನಿ ಬಾವುಟ ರಸ್ತೆಗೆ ಬಳಿದ ಕಾರಣ ನಗರ ಪೋಲೀಸರು ಯುವಕರ ಮೇಲೆ ಕೇಸು ದಾಖಲಿಸಿದ್ದು, ಪಾಕಿಸ್ತಾನ ಬಾವುಟವಿದ್ದ ಜಾಗಕ್ಕೆ ಬಿಳಿಯ ಬಣ್ಣ ಬಳಿದು ಅಳಿಸಿ ಹಾಕಿದ್ದಾರೆ.
ಮೇ1 ರಂದು ಭಾರತೀಯ ಸೇನೆಯ ಸುಬೇದಾರ್ ಪರಮ್ಜೀತ್ ಸಿಂಗ್ ಹಾಗೂ ಪ್ರೇಮ್ ಸಾಗರ್ ಎಂಬಿಬ್ಬರು ಯೋಧರನ್ನು ಪಾಕಿಸ್ತಾನ ಸೇನೆಯ ಜಿಹಾದಿ ಸೈನಿಕರು ಹತ್ಯೆ ಮಾಡಿ ದೇಹವನ್ನು ತುಂಡರಿಸಿ ಪರಾರಿಯಾಗಿದ್ದರು, ಇದಕ್ಕೆ ಉತ್ತರವಾಗಿ ಭಾರತೀಯ ಸೇನೆ ಪಾಕಿಸ್ತಾನದ 3 ಬಂಕರುಗಳನ್ನು ಉಡಾಯಿಸಿ 7 ಜಿಹಾದಿ ಸೈನಿಕರನ್ನು ಹೊಡೆದುರುಳಿಸಿದ್ದರು.
loading...

Post a Comment

Powered by Blogger.